Ad Widget

ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ವಿಷು ಹಬ್ಬ ಆಚರಣೆ

ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಒಂದು ವಾರಗಳ ಕಾಲ ಉಚಿತ ಸಂಸ್ಕಾರ ವಾಹಿನಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭ ಶಿಬಿರದ ವಿದ್ಯಾರ್ಥಿಗಳಿಗೆ ವಿಷು ಹಬ್ಬದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರಾಯೋಗಿಕ ವಿಷು ಹಬ್ಬವನ್ನು ಆಚರಿಸಲಾಯಿತು. ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಕಳಸೆಗೆ ಭತ್ತ ಸುರಿಯುವ ಮೂಲಕ ವಿಶಿಷ್ಟ ರೀತಿಯಲ್ಲಿ...

ಪೈಕ : ನಾಲ್ವರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕಮ

ಪೈಕ - ಹನ್ನೆರಡು ಒಕ್ಕಲಿನ ಊರುಕಟ್ಟಿಗೆ ಸಂಬಂಧಿಸಿದಂತೆ ಊರಿನ ನಾಲ್ವರು ಸಾಧಕ 4 ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ಎ.16 ರಂದು ಪೈಕ ಊರು ಗೌಡರ ಮನೆಯಲ್ಲಿ ನಡೆಯಿತು2024 - 25 ನೇ ಸಾಲಿನ NMMS ಪರೀಕ್ಷೆಯಲ್ಲಿ ಸುಳ್ಯ ತಾಲೂಕಿಗೆ ತೃತೀಯ ಸ್ಥಾನಿಯಾದ ಕು. ಲಾವಣ್ಯ ಡಿ ಎನ್ ಹಾಗೂ PUC ವಿಭಾಗದಲ್ಲಿ ಗುತ್ತಿಗಾರು ಕಾಲೇಜಿನ ವಾಣಿಜ್ಯ...
Ad Widget

ಐವರ್ನಾಡು ಪ್ರೌಢಶಾಲಾ ಇಕೋಕ್ಲಬ್ ವಿದ್ಯಾರ್ಥಿಗಳಿಂದ ನವೀನ್ ಚಾತುಬಾಯಿಯವರ ಕೃಷಿ ಕ್ಷೇತ್ರ ಬೇಟಿ

ಸುಳ್ಯ ತಾಲೂಕು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೇಸರ ಇಕೋಕ್ಲಬ್ ವತಿಯಿಂದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿಯವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು. ಇಕೋಕ್ಲಬ್ ನ ಸುಮಾರು 35 ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ನವೀನರವರ ವಿಶಿಷ್ಟವಾದ ಮುತ್ತು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದು, ಅವರ ಸಮಗ್ರ ಕೃಷಿಯನ್ನು ವೀಕ್ಷಿಸಿ ಮೆಚ್ಚುಗೆ...

ಅಂತರಾಷ್ಟ್ರೀಯ ಖ್ಯಾತಿಯ ಸಂಮೋಹಿನಿಗಾರ ಕೃಷ್ಣಮೂರ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂದನ ರೈ ಕಾರ್ಕಳ ನಾಳೆ ಪಂಜಕ್ಕೆ

ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ಐದನೇ ದಿನದ ಸಂಪನ್ಮೂಲ ವ್ಯಕ್ತಿ ಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಹಿಪ್ನೋಟಿಸಂ ಕಲಾವಿದ ಕೃಷ್ಣಮೂರ್ತಿ ವಿಶಾಖಪಟ್ಟಣಂ...

ನವೀಕರಣಗೊಂಡ ಮಡಪ್ಪಾಡಿ ಶಾಲಾ ಕ್ರೀಡಾಂಗಣ ಲೋಕಾರ್ಪಣೆ – ಸನ್ಮಾನ

ನವೀಕರಣಗೊಂಡ ಮಡಪ್ಪಾಡಿ ಶಾಲಾ ಕ್ರೀಡಾಂಗಣನ್ನು  ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಲೋಕಾರ್ಪಣೆಗೊಳಿಸಿದರು.ಅನುದಾನವನ್ನು ಒದಗಿಸಿ ಗ್ರಾಮದ ಪ್ರಮುಖ ಕ್ರೀಡಾಂಗಣಕ್ಕೆ ಪುನಃಶ್ಚೇತನ ನೀಡಿದ ಶಾಸಕರಿಗೆ ಯುವಕ ಮಂಡಲ ಮಡಪ್ಪಾಡಿ ಮತ್ತು ಊರವರ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು,...

ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಪೈಚಾರು ಬೆಳ್ಳಾರೆ ಹಾಗೂ ನಿಂತಿಕಲ್ಲು ಬೆಳ್ಳಾರೆ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ(ಸಿಆರ್ ಐಎಫ್)ಯಡಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಎರಡು ಪ್ರಮುಖ ರಸ್ತೆಗಳ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಎ.15 ರಂದು ಗುದ್ದಲಿಪೂಜೆ ನೆರವೇರಿಸಲಾಯಿತು. ಸಿಆರ್ ಐಎಫ್ ಅನುದಾನದಡಿ ಸುಳ್ಯ ತಾಲೂಕಿನ ನಿಂತಿಕಲ್ಲು-...

ಕೆ.ವಿ.ಜಿ ಇಂಜಿನಿಯರಿoಗ್‌ ಕಾಲೇಜಿನಲ್ಲಿ ಕೆವಿಜಿಸಿಇ ಹ್ಯಾಕ್ ವೈಸ್ ಬ್ಯಾನರ್ ಬಿಡುಗಡೆ

ಕೆ.ವಿ.ಜಿ ಇಂಜಿನಿಯರಿoಗ್‌ ಕಾಲೇಜಿನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಹ್ಯಾಕಥಾನ್‌ ಕಾರ್ಯಕ್ರಮ “ಕೆವಿಜಿಸಿಇ ಹ್ಯಾಕ್‌ವೈಸ್” ಅನ್ನು ಅಧಿಕೃತವಾಗಿ ಪ್ರಾರಂಭಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಕ್ಲಬ್ ಸ್ಪಿಯರ್ ಹೈವ್, ಬ್ಯಾನರ್ ಬಿಡುಗಡೆ ಸಮಾರಂಭವನ್ನು ದಿನಾಂಕ: 12.04.2025 ರಂದು ಯಶಸ್ವಿಯಾಗಿ ಆಯೋಸಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯರು ಆದಡಾ. ಸುರೇಶ ವಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಆವಿಷ್ಕಾರ ಶಕ್ತಿಯ...

ಮೆಸ್ಕಾಂನ ಅರಂತೋಡು ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಅರಂತೋಡು ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.ಅರಂತೋಡು ಮೆಸ್ಕಾಂ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರು ರಾಧಾಕೃಷ್ಣ ತೊಡಿಕಾನ, ಕೇಪು ದೊಡ್ಡಕುಮೇರಿ, ಚೈತ್ರ ಬಾಳೆಕಜೆ, ತಾಜುದ್ದಿನ್ ಅರಂತೋಡು, ಜುಬೈರ್ ಎಸ್ ಇ ಯವರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.

ಉತ್ತಮ ದೈಹಿಕ ಅರೋಗ್ಯ ಸೃಜನಶೀಲ ಚಟುವಟಿಕೆಗೆ ಪೂರಕ – ಡಾ. ಲೀಲಾವತಿ ಕೆ.

ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಂಜದ ವಿಜಯ ಕ್ಲಿನಿಕ್ ನ ಡಾ....

ಮೆಸ್ಕಾಂನ ಜಾಲ್ಸೂರು ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಜಾಲ್ಸೂರು ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಮಧುಕರ ಬುಡ್ಡೆಗುತ್ತು, ಶಿವರಾಮ ಅಜಿಲ ಅಗೋಳ್ತೆ ಮನೆ, ಸುಮತಿ ಹುಲಿಮನೆ, ಜುನೈದ್ ಅಡ್ಕಾರ್ ಗುಂಡ್ಯಡ್ಕ ಮನೆ, ಎನ್.ಎಂ.ಮಹಮ್ಮದ್ ಬಶೀರ್ ಶಾಂತಿನಗರ ಹಾಗೂ ಮೆಸ್ಕಾಂ ಎಇಇ, ಕೆಪಿಟಿಸಿಎಲ್ ಎಇಇ ಮತ್ತು ಸುಳ್ಯ ಶಾಖಾ ಎಇ ಯವರನ್ನು ಸರಕಾರ...
Loading posts...

All posts loaded

No more posts

error: Content is protected !!