Ad Widget

ಕಾಶ್ಮೀರದಲ್ಲಿನ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಆಲೆಟ್ಟಿ ಕಾಂಗ್ರೆಸ್ ನಿಂದ ಮೊಂಬತ್ತಿ ಉರಿಸುವ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮ ಕಾಂಗ್ರೆಸ್ ವತಿಯಿಂದ ನಾಗಪಟ್ಟಣ ಸೇತುವೆ ಬಳಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ, ದಾಳಿಯಿಂದ ಅನ್ಯಾಯವಾಗಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಮೊಂಬತ್ತಿ ಉರಿಸುವ ಮೂಲಕ ಮಾಡಲಾಯಿತು. 

. . . . . . . . .

. ಈ ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂ ಸಾಹೇಬ್ ಆರಂಬೂರು, ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ತಾಲೂಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ಕೊಲ್ಚಾರು, ಗೋಕುಲ್ ದಾಸ್ ಸುಳ್ಯ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮಹೇಶ್ ಬೆಳ್ಳಾರ್ಕರ್ ಇವರು ಮಾತನಾಡಿದರು.  ಈ ಸಂದರ್ಭದಲ್ಲಿ ಮುತ್ತಪ್ಪ ಪೂಜಾರಿ ಮೊರಂಗಲ್ಲು, ರಾಧಾಕೃಷ್ಣ ಪರಿವಾರಕಾನ, ಯೂಸೂಫ್ ಅಂಜಿಕ್ಕಾರು, ರಿಯಾಝ್ ಕಟ್ಟೆಕ್ಕಾರ್, ಅಮ್ಮು ರೈ ಆರಂಬೂರು, ಚಿದಾನಂದ ಕುಂಚಡ್ಕ, ಬಾಬೆ ಕುಡೆಕಲ್ಲು, ಆನಂದ ನಾಗಪಟ್ಟಣ, ಜೀವರತ್ನ, ಹಿಮಾಂಶು ಭೂತಕಲ್ಲು, ಕೇಶವ ಮೊರಂಗಲ್ಲು, ಗೋಪಾಲ ಗುಂಡ್ಯ, ವಿಜಯ ಆಲೆಟ್ಟಿ, ನವೀನ ಆಲೆಟ್ಟಿ, ತವಿದ್ ಆರಂಬೂರು, ಶಾಹಿದ್ ಪಾರೆ, ಸತ್ಯನಾರಾಯಣ ಕುಡೆಕಲ್ಲು, ಖಾದರ್ ಆಲೆಟ್ಟಿ, ಚಂದ್ರಶೇಖರ ಕೋಲ್ಚಾರ್, ನಾರಾಯಣ ರೈ ಆರಂಬೂರು ಮತ್ತಿತರರು ಭಾಗವಹಿಸಿದ್ದರು.‌ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಸ್ವಾಗತಿಸಿದರು. ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸತ್ಯಕುಮಾರ ಅಡಿಂಜ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!