
ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಜಾದುಗಾರ ಜೂನಿಯರ್ ಶಂಕರ್ ಆಗಮಿಸಿ ಮಕ್ಕಳಿಗೆ ಜಾದು ವಿಸ್ಮಯ ಲೋಕದ ಪರಿಚಯವನ್ನ ಮಾಡಿಕೊಡಲಿದ್ದಾರೆ.
ಪ್ರತಿಭಾನ್ವಿತ ಕಲಾವಿದೆಯಾಗಿರುವ ಗುರುಪ್ರಿಯ ಕಾಮತ್ ನಾಳೆಯ ಶಿಬಿರದಲ್ಲಿ ಭಾಗವಹಿಸುವ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದು ವೈವಿಧ್ಯಮಯ ಗಾಯನಗಳ ಮೂಲಕ ರಂಜಿಸಲಿದ್ದಾರೆ.
