Ad Widget

ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ಕಾಂಕ್ರೀಟ್ ಕಾಮಗಾರಿ ಉದ್ಘಾಟನೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ಮಾದ್ರಡ್ಕ ಮತ್ತು ಹೆರಕಜೆ ಎಂಬಲ್ಲಿ  2022-23 ನೇ ಸಾಲಿನ ವಿಶೇಷ ಅನುದಾನದಡಿಯಲ್ಲಿ ರೂ.50 ಲಕ್ಷ ಅನುದಾನದಲ್ಲಿ 930 ಮೀ ರಸ್ತೆ ಕಾಂಕ್ರೀಟಿಕರಣಗೊಂಡಿದ್ದು,  ಇದನ್ನು ಶಾಸಕಿಯರಾದ ಕು ಭಾಗೀರಥಿ ರವರು ಏ.10 ರಂದು  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ. ವಿ. ತೀರ್ಥರಾಮ್, ಮಾಜಿ ಜಿ.ಪಂ. ...

50ನೇ ಸಂಭ್ರಮ ಆಚರಿಸಿಕೊಂಡ ಭಾವ ತೀರ ಯಾನ 51 ನೇ ದಿನಕ್ಕೆ- ಗಣ್ಯರಿಂದ ಶುಭ ಹಾರೈಕೆ ; ಏ.12ರಂದು ಬೆಳಿಗ್ಗೆ 11ಗಂಟೆಗೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 50 ದಿನದ ಸಂಭ್ರಮಾಚರಣೆ ಏ.11 ರಂದು ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಲನಚಿತ್ರ ನಟರು ಹಾಗೂ ಗಣ್ಯರು...
Ad Widget

ರೋಟರಿ ಸಮಾಜ ಸೇವೆ ನಿರಂತರ ಮುಂದುವರೆಯಲಿ – ಜಿಲ್ಲಾ ರಾಜ್ಯಪಾಲ ರೋ. ವಿಕ್ರಂ ದತ್ತ ;  ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ

ಸುಬ್ರಹ್ಮಣ್ಯ ಏ.14: ದಕ್ಷಿಣ ಕನ್ನಡ ಕೊಡಗು ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 31 81ರ ಜಿಲ್ಲಾ ರಾಜ್ಯಪಾಲ ವಿಕ್ರಮ ದತ್ತ ಅವರು ಗುರುವಾರ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ ನೀಡಿದರು. ಅವರು ಅಂದು ಸಂಜೆ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ "ರೋಟರಿ ಅಂತರಾಷ್ಟ್ರೀಯ ಸಂಸ್ಥೆ. ವಿಶ್ವದಾದ್ಯಂತ ಇರುವ...

ಕೆ.ಎಸ್. ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದಿನಾಂಕ 04/04/25ರಿಂದ 10/04/2025 ರಂದು ವಿಶೇಷ ವಾರ್ಷಿಕ ಶಿಬಿರವನ್ನು ಪದವಿ ಪೂರ್ವ ಕಾಲೇಜು ಗುತ್ತಿಗಾರಿನಲ್ಲಿ ಹಮ್ಮಿಕೊಳ್ಳಲಾಯಿತು. ಇದರ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಸುಳ್ಯ...

ಸುಳ್ಯ : ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎ ವಿಭಾಗದಿಂದ ಮಾನೇಜ್ಮೆಂಟ್ ಫೆಸ್ಟ್ “ಜೆನೊವೆಟ್”

ಏಪ್ರಿಲ್ 9 2025ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಇಂಟರ್ ಕ್ಲಾಸ್ ಮ್ಯಾನೇಜ್ಮೆಂಟ್ ಫೆಸ್ಟ್ ಜೆನೊವೇಟ್ ನಡೆಯಿತು. ಕಾಗೊ ಇನ್ಫಿನಿಟಿ ಎಕ್ಸಿಮ್ಸ್ ನ ಸ್ಥಾಪಕಿ ಹಾಗೂ ಸಿಇಒ ಕಾವ್ಯಾ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಹೇಗೆ ಪೂರಕವಾಗಿದೆ ಎಂದು ತಿಳಿಸಿದರು. ಬಿದಿರು ಗಿಡ ಹೇಗೆ...

50 ಸಂಭ್ರಮಾಚರಣೆಯಲ್ಲಿ ‘ಭಾವ ತೀರ ಯಾನ’

ಸಿನಿಮಾ ನಮ್ಮನ್ನು ಹೊಸ ಜಗತ್ತಿಗೆ ಕರೆದೊಯ್ಯುವ, ಮನರಂಜನೆಯನ್ನು ಕೊಡುವ ಅಥವಾ ನಾವು ಟಾಕೀಸ್‌ಲ್ಲಿ ಕುಳಿತು ವೀಕ್ಷಿಸುವ, ದೂರದರ್ಶನದಲ್ಲಿ ವೀಕ್ಷಿಸುವ ಚಿತ್ರ ಅಂತ ಅಂದುಕೊಂಡಿದ್ದೇವೆ. ಆದರೆ ಸಿನಿಮಾ ಕೂಡ ಒಂದು ರೀತಿಯಲ್ಲಿ ನಮಗೆ ಶಿಕ್ಷಣ ಮಾಧ್ಯಮವಾಗಿದೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿ ನಾವು ಕಾಣದ ದೇಶಗಳನ್ನು, ಅಲ್ಲಿಯ ವೈಶಿಷ್ಟ್ಯಗಳನ್ನು, ಅವರ ಸಂಸ್ಕೃತಿ -ಸಂಪ್ರದಾಯ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ, ಅಂತೆಯೇ...

ಬಿಜೆಪಿಯ ಜನಾಕ್ರೋಶ ಯಾತ್ರೆ. ಸುಳ್ಳನ್ನು ಬಿತ್ತುವ ಕುತಂತ್ರದ ಭಾಗವಾಗಿದೆ- ಕೆ.ಪಿ.ಜಾನಿ

ಬೆಲೆಯೇರಿಕೆಯ ವಿರುದ್ದ ಮಾತನಾಡಲು ಒಂದು ಶೇಕಡವೂ ನೈತಿಕತೆ ಉಳಿಸಿಕೊಳ್ಳದ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಆಸನ್ನವಾಗಿರುವ ಚುನಾವಣೆಗಳಲ್ಲಿ ಜನರಿಂದ ಎದುರಿಸಬೇಕಾದ ನಿಜವಾದ ಜನಾಕ್ರೋಶಕ್ಕೆ ಹೆದರಿ ಸತ್ಯ ಮುಚ್ಚಿಡಲು ಮಾಡುತ್ತಿರುವ ಕುತಂತ್ರದ ಭಾಗವಾಗಿದೆ. ಜನ ಪ್ರಭುದ್ಧರಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಬೆಲೆಯೇರಿಕೆ ಮೂಲಕಾರಣವಾದ ಡೀಸೆಲ್ ಪೆಟ್ರೋಲ್ ಮತ್ತು ಅಡುಗೆ ಅನಿಲದ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕಡಿಮೆಯಾದಾಗಲೂ ತಮ್ಮ...

ಮಂಡೆಕೋಲು : ಶಾಸಕಿ ಭಾಗೀರಥಿ ಮುರುಳ್ಯರಿಂದ ಸಂಜೀವಿನಿ ಕಟ್ಟಡ ಲೋಕಾರ್ಪಣೆ

ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಣಗೊಂಡಿರುವ ಸಂಜೀವಿನಿ ಕಟ್ಟಡವನ್ನು ಏ.10 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು. ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು “ಸಂಜೀವಿನಿ ಸಂಘ ಅನ್ನುವಂತಹದ್ದು ಮಹಿಳೆಯರ ಧ್ಯೇಯೋದ್ದೇಶಕ್ಕಾಗಿ ಇರುವಂತಹದ್ದು, ಮುಂದಿನ ದಿನಗಳಲ್ಲಿ ಮಂಡೆಕೋಲು ಸಂಜೀವಿನಿ ಸಂಘವು ಒಳ್ಳೆಯ ಕೆಲಸಗಳನ್ನು ಮಾಡಿ ಪ್ರಧಾನಿ ಮೋದಿಯವರು ತಮ್ಮ ಮನ್-ಕಿ-ಬಾತ್...

ಡಾ. ಲೀಲಾಧರ್ ಡಿ. ವಿ. ಯವರಿಗೆ ಶಾರದಾಂಬಾ ಸೇವಾ ಸಮಿತಿಯ ವತಿಯಿಂದ ಅಭಿನಂದನೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಯವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇದರ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಗೆ ಚೆರ್ ಮೆನ್ ಆಗಿ ನೇಮಕಾವಾದ ಹಿನ್ನೆಲೆಯಲ್ಲಿ ಏ.10 ರಂದು ಸುಳ್ಯ ಶ್ರೀ ಸಾರ್ವಜನಿಕ ಶಾರದಾಂಬ ಸೇವಾ ಸಮಿತಿಯ...
error: Content is protected !!