
ಸುಳ್ಯ ಕಸಬಾಮೂಲೆ ಜೂನಿಯರ್ ಕಾಲೇಜು ಬಳಿ ಸುಳ್ಯ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವವು ಮಾ.01 ರಂದು ರಾತ್ರಿ ನಡೆಯಿತು.
ಬೆಳಿಗ್ಗೆ ಗಣಹೋಮ, ತಂಬಿಲ ಸೇವೆ ನಡೆಯಿತು.
ಸಂಜೆ ಶ್ರೀ ದೈವದ ಭಂಡಾರ ತೆಗೆಯಲಾಯಿತು. ನಂತರ ಶ್ರೀ ದೈವಕ್ಕೆ ಎಣ್ಣೆ ವೀಳ್ಯ ನೀಡಲಾಯಿತು.
ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ,ಅಧ್ಯಕ್ಷ ರಘುನಾಥ ಶೆಟ್ಟಿ,ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ,ಕಾರ್ಯದರ್ಶಿ ಮುರಳಿ ಮಾವಂಜಿ,ಜತೆ ಕಾರ್ಯದರ್ಶಿ ಲವ ಕುಮಾರ್ ಕನ್ನಡ್ಕ,ಕೋಶಾಧಿಕಾರಿ ಮಹಾಲಿಂಗನ್ ಬಾರ್ಜ ತೊಟ್ಟಿ, ನಿರ್ದೇಶಕರಾದ ದಿನೇಶ್ ಕುಮಾರ್,ಸನತ್ ರಾಮಚಂದ್ರ, ರಾಮಚಂದ್ರ ಭಟ್ ಹಾಗೂ ಗೌರವ ಸಲಹೆಗಾರರು ಮತ್ತು ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.