
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಫೆ. 28 ರಂದು ಮಡಿಕೇರಿ ಗೌಡ ಸಮಾಜ ಭವನದಲ್ಲಿ 2022 – 23 ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಇಂದು ಸುಳ್ಯ ಮೊಗರ್ಪಣೆ ಬಳಿ ನಿವೃತ ಬಿ ಡಿ ಓ ಶ್ರೀಮತಿ ಮೀನಾಕ್ಷಿ ಗೌಡ ರವರ ನಿವಾಸದಲ್ಲಿ ನಡೆಯಿತು.
ಶ್ರೀಮತಿ ಮೀನಾಕ್ಷಿ ಗೌಡ ರವರು ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭಾರೈಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡಮಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಸದಸ್ಯರುಗಳಾದ ಶ್ರೀಮತಿ ಲತಾ ಕುತ್ಪಾಜೆ,ಚಂದ್ರಶೇಖರ ಪೆರಾಲು,ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಡಾ ಎನ್ ಎ ಜ್ಞಾನೇಶ್, ಮಾಜಿ ಸದಸ್ಯ ಕೆ ಟಿ ವಿಶ್ವನಾಥ್,ಹಾಗೂ ಸುಳ್ಯ ವೆಂಕಟ್ರಮಣ ಸಹಕಾರಿ ಸಂಘದ ಮೆನೇಜರ್ ಚಂದ್ರಶೇಖರ ಮೇರ್ಕಜೆ ಉಪಸ್ಥಿತರಿದ್ದರು.
ಡಾ. ಜ್ಞಾನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಚಂದ್ರಶೇಖರ ಪೇರಾಲು ವಂದಿಸಿದರು.