
ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಅಲಂಕಾರು ಶಾಖೆಯ ಸಕ್ರೀಯ ಸದಸ್ಯರಾದ ಶ್ರೀ ಅಬ್ದುಲ್ ರಹಿಮಾನ್ ಎಚ್, ಕೊಯಿಲ ಇವರ ತೆರೆದ ಹೃದಯದ ಚಿಕಿತ್ಸೆಗೆ ಕ್ಯಾoಪ್ಕೋ ಸಹಾಯಧನದ ಮೊತ್ತ ರೂ.66,500/- (ರೂಪಾಯಿ ಅರುವತ್ತಾರು ಸಾವಿರದ ಐನೂರು)ನ್ನು ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ ಮಡ್ತಿಲ ಇವರು ದಿನಾಂಕ: 18.02.2025 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪ್ರಕಾಶ ಕುಮಾರ್ ಶೆಟ್ಟಿ ಹಾಗೂ ಅಲಂಕಾರು ಶಾಖೆಯ ವ್ಯವಸ್ಥಾಪಕರಾದ ಶ್ರೀ ಪ್ರದೀಪ್ ಕುಮಾರ್ ಪಿ ಎ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.