
ಹರಿಹರ ಪಳ್ಳತ್ತಡ್ಕ ನಿವಾಸಿ ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾ ಸಂಘದ ಸ್ಥಾಪಕಾಧ್ಯಕ್ಷ, ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿದ್ದ ನಾರಾಯಣ ಭೀಮಗುಳಿ ರವರು ಇಂದು(ಫೆ.06) ಸ್ವಗೃಹದಲ್ಲಿ ನಿಧನರಾದರು.
ಇವರು ನಾಟಕ ಕಲಾವಿದರು, ಸಂಘಟಕರು ಮಾತ್ರವಲ್ಲದೇ ವಿವಿಧ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಲಶಾಲಿ, ಕಡಲಕೇಸರಿ ಪತ್ರಿಕೆಗಳಲ್ಲಿ ವರದಿಗಾರರಾಗಿಯೂ ಇವರು ಕರ್ತವ್ಯವನ್ನು ನಿರ್ವಹಿಸಿದ್ದರು.
ಮೃತರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಪುಟ್ಟಣ್ಣ ಗೌಡ, ಸಹೋದರರಾದ ನಿತ್ಯಾನಂದ ಭೀಮಗುಳಿ, ಬಾಲಕೃಷ್ಣ ಭೀಮಗುಳಿ, ಪತ್ನಿ ಭವಾನಿ, ಪುತ್ರಿ ಹರ್ಷಿತಾ, ಪುತ್ರ ವಿನೀತ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.