Ad Widget

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು 35 ಸಾವಿರ ಜನರಿಂದ ಮಾನವ ಸರಪಳಿ

ಕನಕಮಜಲಿನಿಂದ ಸಂಪಾಜೆ ವರೆಗೆ ಏಕ ಕಾಲದಲ್ಲಿ ಮಾನವ ಸರಪಳಿ ರಚನೆ .

ಸುಳ್ಯ: ದೇಶದ ನಾಗರೀಕರಿಗೆ ವಿಶೇಷವಾಗಿ ಕರ್ನಾಟಕದ ನಾಗರೀಕರಿಗೆ ಅರಿವು ಮೂಡಿಸುವ ಸಲುವಾಗಿ 2024-25ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ದಿನಾಂಕ: 15.09.2024ರಂದು ಮಾನವ ಸರಪಳಿ ರಚನೆಯ ಕುರಿತ ಪೂರ್ವಭಾವಿ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಮಂಜುನಾಥ್ ಜಿ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಪ್ರಮುಖವಾಗಿ ಮಾನವ ಸರಪಳಿ ಆಯೋಜಿಸುವ ಕುರಿತು ಚರ್ಚಿಸಲಾಗಿದ್ದು ಅದರಂತೆ ಸುಳ್ಯ ತಾಲೂಕಿನಲ್ಲಿ ಕನಕಮಜಲು ಗ್ರಾಮ ಮುಖ್ಯರಸ್ತೆಯಿಂದ ಸುಳ್ಯ ಮಾರ್ಗವಾಗಿ ಸಂಪಾಜೆ ಗ್ರಾಮದ ಮುಖ್ಯರಸ್ತೆಯವರೆಗೆ ಸುಮಾರು 35 ಸಾವಿವರಕ್ಕು ಅಧಿಕ ಜನರನ್ನು ಸೇರಿಸಿಕೊಂಡು ಏಕಕಾಲದಲ್ಲಿ ಕಾರ್ಯಕ್ರಮವನ್ನು ನಡೆಸುವ ನಿಟ್ಟಿನಲ್ಲಿ ಬಗ್ಗೆ ಸರಕಾರಿ ಅಧಿಕಾರಿಗಳು ಮತ್ತು ಸರಕಾರೇತರ ಸಂಘ ಸಂಸ್ಥೆಗಳ ಪ್ರಮುಖರ ಜೊತೆಗೆ ಸಭೆ ನಡೆಸಿ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಮೂಲಕ ನಡೆಸುವಂತೆ ಸೂಚಿಸಲಾಯಿತು ಈ ಸಭಾ ವೇದಿಕೆಯಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ , ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದರೆ , ಇ ಒ ರಾಜಣ್ಣ , ಪ್ರಬಾರ ಬಿಇಒ ಶೀತಲ್ ಯು ಕೆ , ಉಮಾದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!