Ad Widget

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ



ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು, ಪುತ್ತೂರು
ಇದರ ಆಶ್ರಯದಲ್ಲಿ ,ಗೋಸೇವಾ ಗತಿ ವಿಧಿ,ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ  ಇದರ ಸಹಯೋಗದಲ್ಲಿ”Answer for cancer ” ಖ್ಯಾತಿಯ ಡಾ .ಡಿ .ಪಿ .ರಮೇಶ್ , ಆಯುರ್ವೇದ ತಜ್ಞ ವೈದ್ಯರು ಹಾಗೂ ಪಂಚಗವ್ಯ ಚಿಕಿತ್ಸಾ ತಜ್ಞರು, ಬೆಂಗಳೂರು ಇವರಿಂದ ಪಂಚಗವ್ಯ ಚಿಕಿತ್ಸಾ ಶಿಬಿರ
ಹಾಗೂ ಪಂಚಗವ್ಯ ಚಿಕಿತ್ಸೆ ವಿಚಾರ ಗೋಷ್ಠಿ , ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ಗ್ರಾಮ ಪಂಚಾಯತ್ ಸಮೀಪ ,ನರಿಮೊಗರು, ಪುತ್ತೂರು ಇಲ್ಲಿ ,ಆಗಸ್ಟ್ 11, ಆದಿತ್ಯವಾರದಂದು ನಡೆಯಿತು. ಉದ್ಘಾಟನೆಯನ್ನು ಗಂಗಾಧರ ಪೆರ್ಮಂಕಿ,ಸಂಯೋಜಕರು,ಗೋಸೇವಾ ಗತಿವಿಧಿ ಮಂಗಳೂರು ವಿಭಾಗ ಇವರು ನೆರವೇರಿಸಿದರು . ಅರೋಗ್ಯ ಭಾರತಿ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷ ಡಾ . ಗಣೇಶ್ ಪ್ರಸಾದ್ ಮುದ್ರಜೆ ಅಧ್ಯಕ್ಷತೆ ವಹಿಸಿದ್ದರು .ಗೋಷ್ಠಿಯಲ್ಲಿ ಡಾ . ಡಿ .ಪಿ .ರಮೇಶ್ ಇವರು
“ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ “ದ ಬಗ್ಗೆ,
ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ “ಪಂಚಗವ್ಯ ಚಿಕಿತ್ಸೆ – ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಬಗ್ಗೆ  ಪ್ರಾಸ್ತಾವಿಕವಾಗಿ ಮಾತನಾಡಿದರು ..ಯಾವುದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಈಗ ಗುಣ ಹೊಂದಿದವರು ಅದು ಮರುಕಳಿಸದಂತೆ, ಕ್ಯಾನ್ಸರ್ ಎಂದು ಈಗ ತಾನೇ ಪತ್ತೆಯಾದ ಹಂತದಲ್ಲಿ ಇರುವವರು ,   ಚಿಕಿತ್ಸೆ ಪಡೆಯುತ್ತಾ ಇರುವವರು ಸಂದರ್ಶಿಸಿ ಚಿಕಿತ್ಸೆ ಪಡೆದುಕೊಂಡರು . ಆಯುರ್ವೇದ ತಜ್ಞ ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ  ಮತ್ತು ಡಾ .ಡಿ .ಪಿ .ರಮೇಶ್ ಸ್ತನ ಕ್ಯಾನ್ಸರ್ , ವೃಷಣ ಕ್ಯಾನ್ಸರ್ , ಅಂಡಾಶಯದ ಕ್ಯಾನ್ಸರ್ ಇತ್ಯಾದಿ ಕ್ಯಾನ್ಸರ್ ರೋಗಿಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದರು . ಡಾ . ಶ್ರುತಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು .  ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಎಂ.ಎಸ್ . ಭಟ್ ಸ್ವಾಗತಿಸಿದರು . ಕ್ಯಾನ್ಸರ್ ಗೆ  ಈ ಪಂಚಗವ್ಯ ಚಿಕಿತ್ಸಾ  ಘಟಕ ಇನ್ನು ಪ್ರಸಾದಿನೀ ಆಸ್ಪತ್ರೆಯಲ್ಲಿ ನಿರಂತರ ಚಾಲನೆಯಲ್ಲಿರುವುದು .ಮಾಹಿತಿಗೆ 9740545979 ದೂರವಾಣಿಗೆ ಸಂಪರ್ಕಿಸಲು ಆಸ್ಪತ್ರೆಯ ಆಡಳಿತ ನಿರ್ದೇಶಕ , ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ  ವಿನಂತಿಸಿಕೊಂಡಿದ್ದಾರೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!