Ad Widget

ರೋಟರಿ ಕ್ಲಬ್ ಸುಳ್ಯ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ – ಸಾಧಕರಿಗೆ ಸನ್ಮಾನ.

ರೋಟರಿ ಕ್ಲಬ್ ಸುಳ್ಯ ಸಿಟಿ ಯ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸುಳ್ಯದ ರಥಬೀದಿಯಲ್ಲಿರುವ ರೋಟರಿ ಕಮ್ಯುನಿಟಿ ಹಾಲ್‌ ನಲ್ಲಿ ಜು.12 ರಂದು ನಡೆಯಿತು. ‌

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರೊ.ಗಿರೀಶ್ ನಾರ್ಕೋಡು ವಹಿಸಿದ್ದರು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ.ಯೋಗಿತಾ
ಗೋಪಿನಾಥ್ ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ನೆರವೇರಿಸಿದರು. ಜಿಲ್ಲಾ ಗವರ್ನರ್ ರೊ.ರಾಮಕೃಷ್ಣ ಪಿ.ಕೆ, ವಲಯ 5 ರ ಅಸಿಸ್ಟೆಂಟ್ ಗವರ್ನರ್ ರೊ.ಹರ್ಷಕುಮಾರ್ ರೈ, ವಲಯ 5 ಝೋನಲ್ ಲೆಫ್ಟಿನೆಂಟ್ ರೊ.ಮುರಳೀಧರ ರೈ, ಕ್ಲಬ್ ಜಿ.ಎಸ್.ಆರ್
ರೊ. ಡಾ.ಕೇಶವ ಪಿ.ಕೆ, ರೊ.ಸವಿತಾ ನಾರ್ಕೋಡು,
ಕಾರ್ಯದರ್ಶಿ ರೊ.ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ
ಕ್ಲಬ್ ನೂತನ ಅಧ್ಯಕ್ಷರಾಗಿ ರೋ.ಶಿವಪ್ರಸಾದ್ ಕೆ.ವಿ , ಕಾರ್ಯದರ್ಶಿ ರೋ. ನವೀನ ಅಳಿಕೆ , ಖಜಾಂಜಿ ರೋ. ನವೀನ ಚಂದ್ರ ಬಿ,
ರೊ. ರಕ್ಷಿತಾ ಶಿವಪ್ರಸಾದ್ ಕೆ.ವಿ,ಉಪಾಧ್ಯಕ್ಷ ರೋ. ಶ್ಯಾಂ ಭಟ್ , ಸಾರ್ಜೆಂಟ್ ಅಟ್ ಆರ್ಮ್ ರೋ.ಸುಹಾಸ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ರೋ. ಪ್ರೀತಮ್ ಡಿ.ಕೆ,
ಕ್ಲಬ್ ಎಕ್ಸಿಕ್ಯೂಟಿವ್ ಸೆಕ್ರೆಟರಿ ರೋ. ಅಶೋಕ್ ಕೊಯಿಗೋಂಡಿ, ಕ್ಲಬ್ ಸರ್ವಿಸ್ ಡೈರೆಕ್ಟರ್ ರೋ.ಹೇಮಂತ್ ಕಾಮತ್ , ವೊಕೇಷನಲ್ ಸರ್ವೀಸ್ ಡೈರೆಕ್ಟರ್ ರೋ. ಗಿರೀಶ್ ನಾರ್ಕೋಡ್ , ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ರೋ. ಪ್ರಮೋದ್ .ಕೆ , ಇಂಟರ್ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ರೋ.ರಾಘೇಶ್ ರಾಘವ್ , ಯೂತ್ ಸರ್ವಿಸ್ ಡೈರೆಕ್ಟರ್ ರೋ.ಮುಕುಂದ ನಾರ್ಕೋಡು ಹಾಗೂ ಮೆಂಬರ್ ಶಿಪ್ ಛೇರ್ಮನ್ ರೋ. ಮನುಜೇಶ್ ಬಿ.ಜೆ ,ಟಿ ಆರ್. ಎಫ್ ಛೇರ್ಮನ್ ರೋ. ಮುರಳೀಧರ ರೈ. ಪಿ, ಪಬ್ಲಿಕ್ ಇಮೇಜ್ ಛೇರ್ಮನ್ ರೋ. ಚೇತನ್ ಪಿ.ಎನ್ , ಸಿ .ಎಲ್. ಸಿ. ಸಿ ರೋ. ರಂಜಿತ್ ಎನ್. ಆರ್ , ವಿನ್ಸ್ ಛೇರ್ಮನ್ ರೋ. ಪುರಂದರ ರೈ , ಟೆಜ್ ಛೇರ್ಮನ್
ರೋ. ಮಧುಕಿರಣ್ ಕೆ.ಎನ್,ವಾಟರ್ ಸ್ಯಾನಿಟೇಶನ್ ಛೇರ್ಮನ್ ರೋ.ನೇಮಿರಾಜ್ , ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಛೇರ್ಮನ್ ರೋ. ಭಾನುಪ್ರಕಾಶ್ , ಪಲ್ಸ್ ಪೋಲಿಯೊ ಛೇರ್ಮನ್ ರೋ. ಡಾ. ಅಮಿತ್ ಕುಮಾರ್. ಟಿ , ವೆಬ್ ಸರ್ವಿಸ್ ಛೇರ್ಮನ್ ರೋ. ಅಶ್ವಿನ್ ಕುಮಾರ್, ಬುಲೆಟಿನ್ ಎಡಿಟರ್ ರೋ .ಮಿಥುನ್ ,
ರೋಟರಾಕ್ಟ್ ಕ್ಲಬ್ ಛೇರ್ಮನ್ ರೋ. ಪ್ರೀತಮ್.ಡಿ.ಕೆ, ಸ್ಪೋರ್ಟ್ಸ್ ಕಮಿಟಿ ಛೇರ್ಮನ್ ರೋ.ರವಿ ಕಿರಣ್ ಪಿ.ಎನ್ ಯವರಿಗೆ ರೋಟರಿ ಅಧ್ಯಕ್ಷರು ಪದ ಪ್ರಧಾನ ನೆರವೇರಿಸಿದರು.
ಡಾಕ್ಟರ್ಸ್ ಡೇ
ಪ್ರಯುಕ್ತ ಸಂಸ್ಥೆಯ ಸದಸ್ಯರಾಗಿರುವ
ವೈದ್ಯರುಗಳನ್ನು ಗೌರವಿಸಲಾಯಿತು.
ರೊ.ಚೇತನ್,ರೊ.ಮಧುಕಿರಣ್,
ರೊ.ರಂಜಿತ್,ರೊ.ಗುರುವಿಕ್ರಮ್, ರೊ.ನೇಮಿರಾಜ್, ಅತಿಥಿಗಳ ಪರಿಚಯ ಮಾಡಿದರು. ರೊ.ಶ್ಯಾಂ ಭಟ್ ನೂತನ ಸದಸ್ಯರ ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಕಳೆದ ಅವಧಿಯಲ್ಲಿ ಸಹಕಾರ ನೀಡಿದ ದಾನಿಗಳನ್ನು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಆಶೀಶ್ ಖಂಡಿಗ ರವರನ್ನು ನಿಕಟ ಪೂರ್ವ ಅಧ್ಯಕ್ಷರು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ ವತಿಯಿಂದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ಸಾಧಕರಿಗೆ ಸನ್ಮಾನ .‌
ಸುಳ್ಯದಲ್ಲಿ ಅತೀ ಹೆಚ್ಚು ಹೆಸರುವಾಸಿಯಾಗಿರುವ ನೆಚ್ಚಿನ
ಆಂಬ್ಯುಲೆನ್ಸ್ ಚಾಲಕ ಅಬ್ದುಲ್ ರಜಾಕ್ ಅಚ್ಚು , ಪಂ.ನೌಕರ ಬಿಜಿಲ, ಯೂಟ್ಯೂಬರ್ ಮಾ. ಚಿಂತು ಸುಳ್ಯ ರವರನ್ನು ಸನ್ಮಾನಿಸಲಾಯಿತು.

ಕು.ಶಾರ್ವರಿ ಪ್ರಾರ್ಥಿಸಿದರು. ರೊ.ಗಿರೀಶ್ ನಾರ್ಕೋಡು ಸ್ವಾಗತಿಸಿದರು.ಕಾರ್ಯದರ್ಶಿ ರೊ. ನವೀನ್ ಅಳಿಕೆ
ವಂದಿಸಿದರು. ರೊ .ಪ್ರೀತಮ್ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!