Ad Widget

ಲೋಕಸಭಾ ಚುನಾವಣೆ ದಕ್ಷಿಣ ಕನ್ನಡದಲ್ಲಿ ಮತ್ತೆ ಅಂತರ ಹೆಚ್ಚಿಸಿಕೊಂಡ ಚೌಟ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರವರು ಮೊದಲ ಸುತ್ತಿನಿಂದಲೇ ಅಂತರ ಕಾಯ್ದುಕೊಂಡು ಬಂದಿದ್ದು ಇದೀಗ ತಮ್ಮ ಅಂತರವನ್ನು ಪ್ರತಿಸ್ಪರ್ಧಿ ಪದ್ಮರಾಜ್ ವಿರುದ್ಧ ಐವತ್ತು ಸಾವಿರ ಹೆಚ್ಚಿಸಿಕೊಂಡಿದ್ದು ಗೆಲುವಿನ ನಗೆ ಬೀರುವುದು ನಿಚ್ಚಳವಾಗಿದೆ.

ಲೋಕಸಭಾ ಚುನಾವಣೆ ಫಲಿತಾಂಶ : ಎನ್ ಡಿ ಎ ಗೆ ತೀವ್ರ ಸ್ಪರ್ಧೆ ನೀಡುತ್ತಿರುವ ಇಂಡಿಯಾ

ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಇತ್ತ ಎಕ್ಸಿಟ್ ಪೋಲ್ ಗಳಿಗೆ  ಒಂದು ರೀತಿಯಲ್ಲಿ ವ್ಯತಿರಿಕ್ತ ಫಲಿತಾಂಶ ಬರುತ್ತಿದ್ದು ಉತ್ತರ ಪ್ರದೇಶ, ಹರಿಯಾಣ, ತೆಲಂಗಾಣ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ ಅಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲ ಸುತ್ತಿನಿಂದಲೇ ಹಿನ್ನಡೆ ಅನುಭವಿಸುತ್ತಿದ್ದಾರೆ. ಕೇರಳದಲ್ಲಿ ಒಂದು ಖಾತೆಯನ್ನು ಬಿಜೆಪಿ ತೆರೆಯುವ...
Ad Widget

ಕೈಕಂಬ: ಬಾಲಡ್ಕದಲ್ಲಿ ಸಿಡಿಲು ಬಡಿದು ಹಾನಿ!

ಮನೆಗೆ  ಸಿಡಿಲು ಬಡಿದು ಹಾನಿ ಸಂಭವಿಸಿದ ಘಟನೆ  ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕದಲ್ಲಿ ನಿನ್ನೆ ಸಂಜೆ  ಜೂನ್ (3ರಂದು) ಸಂಭವಿಸಿದೆ. ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕ ಯಶೋಧರರವರ ಮನೆಗೆ  ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆಯ ಕಿಟಕಿ,  ಸ್ವಿಚ್ ಬೋರ್ಡ್, ಹಾಗೂ ಮನೆಯ ಗೋಡೆಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ನೆಕ್ರಕಜೆ: ಮನೆಗೆ ಮರ ಬಿದ್ದು ಹಾನಿ!

ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ನೆಕ್ರಕಜೆ ರವಿ ಪ್ರಸಾದ್ ಅವರ  ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಡೆದಿದೆ.   ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಗೀತಾ ಗುಡ್ಡೆಮನೆ ಅವರಿಗೆ ಪಿ ಎಚ್ ಡಿ ಪದವಿ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಡಾ.ಸಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಗೀತಾ ಜಿ. ಗುಡ್ಡೆಮನೆ ಅವರು ಮಂಡಿಸಿದ "Performance of Female Kabaddi Players in Relation to Selected Psychological and Psychomotor Variables" ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು.‌ ದೈಹಿಕ ಶಿಕ್ಷಣ ವಿಷಯದಲ್ಲಿ ಇವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿ ನೀಡಿದೆ. ಇವರು...

ಇಂದು ಲೋಕಸಭಾ ಚುನಾವಣಾ ಫಲಿತಾಂಶ – ದ.ಕ. ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

ಇಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು ಮತ ಎಣಿಕೆ ಆರಂಭಗೊಂಡಿದೆ.  ದ.ಕ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ. ಇದೀಗ 9000 ಮತಗಳ ಮುನ್ನಡೆ ಯಲ್ಲಿದ್ದಾರೆ.

ಪಂಜ: ಗಾಳಿ ಮಳೆಗೆ ಅಡಿಕೆ ಮರ ನಾಶ!

ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ಗಣೇಶ್ ಜೋಯಿಸ  ಎಂಬ ಅವರ ತೋಟದಲ್ಲಿ ಸುಮಾರು 300 ಅಡಿಕೆ  ಮರ ಮುರಿದು ಬಿದ್ದು ನಾಶವಾಗಿದೆ ಎಂದು ತಿಳಿದುಬಂದಿದೆ.

ಉಬರಡ್ಕ : ಸೌಜನ್ಯ ಹೋರಾಟ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

ಸೌಜನ್ಯ ಹೋರಾಟ ಸಮಿತಿ ಉಬರಡ್ಕ ಇದರ ವತಿಯಿಂದ ರವಿರಾಜ್ ಕಂಬಳಿಮೂಲೆ, ಶುಭಕರ ನಾಯಕ್, ರಾಜೇಶ್ ಭಟ್, ಜನಾರ್ಧನ ಪೂಜಾರಿ, ಪ್ರಕಾಶ್, ಪುರುಷೋತ್ತಮ, ಸತೀಶ್, ಜಯಪ್ರಕಾಶ್‌, ಲೊಕೇಶ್ ಇವರು ಸೇರಿ ಹಣ ಸಂಗ್ರಹಿಸಿ ಸ.ಹಿ.ಪ್ರಾ ಶಾಲೆ ಉಬರಡ್ಕ ಮಿತ್ತೂರು ಇಲ್ಲಿಯ ವಿದ್ಯಾರ್ಥಿಗಳಿಗೆ 370 ಬರೆಯುವ ಪುಸ್ತಕವನ್ನು ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಹೇಮಾವತಿಯವರ ಮುಖಾಂತರ ಜೂ.3 ರಂದು ಹಸ್ತಾಂತರಿಸಿದ್ದಾರೆ....

ಹಿರಿಯ ಪತ್ರಕರ್ತರಾದ ಗಂಗಾಧರ್ ಮಟ್ಟಿ ಹಾಗೂ ಜಯಪ್ರಕಾಶ್ ಕುಕ್ಕೆಟ್ಟಿ ದಂಪತಿಗಳಿಗೆ ಪ್ರೆಸ್ ಕ್ಲಬ್ ನಲ್ಲಿ ಗೌರವ

75 ವಸಂತದಲ್ಲಿರುವ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಹಾಗೂ 60 ವರ್ಷ ತುಂಬಿದ ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಯವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿದ ಗೌರವಾರ್ಪಣೆ ಜೂ.3ರಂದು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಂಗಾಧರ್ ಮಟ್ಟಿ – ಶ್ರೀಮತಿ ಚಿತ್ರಾ ಮಟ್ಟಿ ಹಾಗೂ...

ಸುಳ್ಯ: ಪರಿಷತ್ ಚುನಾವಣೆ – ಪದವೀಧರರು ಹಾಗೂ ಶಿಕ್ಷಕರಿಂದ ಮತ ಚಲಾವಣೆ

ಸುಳ್ಯ: ವಿಧಾನ ಪರಿಷತ್ ಚುನಾವಣೆ ಇಂದು ಮುಂಜಾನೆ 8 ಗಂಟೆಯಿಂದ ಪ್ರಾರಂಭವಾಗಿದ್ದು ಮುಂಜಾನೆಯಿಂದಲೇ ಪದವೀಧರರು ಸರತಿ ಸಾಲಿನಲ್ಲಿ ಆಗಮಿಸಿ ಮತಚಲಾವಣೆ ಮಾಡುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಸರತಿ ಸಾಲು ಕಾಣಿಸುತ್ತಿಲ್ಲವಾದರೂ ಮತಚಲಾವಣೆ ಯಶಸ್ವಿಯಾಗಿ ನಡೆಯುತ್ತಿದೆ.
Loading posts...

All posts loaded

No more posts

error: Content is protected !!