- Monday
- April 21st, 2025

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಹಿಲನ್ ಅವರನ್ನು ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಿದರು. ಭೇಟಿಯ ವೇಳೆ ಸುಳ್ಯ ಕ್ಷೇತ್ರದ ತೊಡಿಕಾನದ ಗ್ರಾಮಸ್ಥರ ಬಹುಬೇಡಿಕೆಯ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯ ಪರಿಹಾರದ ಕುರಿತು ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಉಚ್ಚಿಲದ ಸ್ಥಳೀಯರ ಕಂದಾಯ ಇಲಾಖೆಗೆ ಸಂಬoಧಪಟ್ಟ...

ವಿಷದ ಹಾವು ಕಚ್ಚಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಬೆಳ್ಳಾರೆ ಸಮೀಪದ ಬೂಡು ಎಂಬಲ್ಲಿ ನಡೆದಿದೆ. ಬೂಡು ಚೋಮ ಎಂಬವರ ಪತ್ನಿ 42 ವರ್ಷದ ಸುಶೀಲ ಎಂಬವರು ನೆಟ್ಟಾರಿನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗ ಸಂಜೆ ಹಾವು ಕಚ್ಚಿದ್ದು ಅವರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ...

ದೊಡ್ಡೇರಿ ಸ.ಕಿ.ಪ್ರಾ.ಶಾಲಾ 2024-25 ನೇ ಸಾಲಿನ ಮಂತ್ರಿಮಂಡಲ ರಚನೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಪ್ರಣೀಶ್ ಎ.ಪಿ., ವಿದ್ಯಾಮಂತ್ರಿಯಾಗಿ ಸುಪ್ರೀತ್, ನೀರಾವರಿ ಮಂತ್ರಿಯಾಗಿ ರಿತೇಶ್ ಕುಮಾರ್, ಸ್ವಚ್ಛತಾ ಮಂತ್ರಿಯಾಗಿ ದ್ರುವಿ, ಹಣಕಾಸು ಮಂತ್ರಿಯಾಗಿ ಮನ್ವಿತ್, ಆರೋಗ್ಯ ಮಂತ್ರಿ ಆರ್ಯ ಎನ್.ಜಿ., ರಕ್ಷಣಾ ಮಂತ್ರಿ ಜೀವನ್, ಸಾಂಸ್ಕೃತಿಕ ಮಂತ್ರಿ ಪೂರ್ವಿ ಡಿ.ಬಿ., ವಾರ್ತಾ ಮಂತ್ರಿ ಇಂಚರ ಡಿ.ಜೆ. ಆಯ್ಕೆಯಾದರು.

ಪ್ರತಿಷ್ಠಿತ ಜಾಮಿಅಃ ಮರ್ಕಝ್ ನಿಂದ ಬಿರುದು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯ್ಯುವ ಸಖಾಫಿ ವಿದ್ವಾಂಸರ ಸುಳ್ಯ ತಾಲೂಕು ಘಟಕದ ವಾರ್ಷಿಕ ಕೌನ್ಸಿಲ್ ಹಾಗೂ ಜುಲೈ ಎಂಟರಂದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ ಉಪಸ್ಥಿತಿಯಲ್ಲಿ ನಡೆಯಲಿರುವ ಕರ್ನಾಟಕ ಸಖಾಫಿ ಸಂಗಮದ ಪ್ರಚಾರ ಕಾರ್ಯಕ್ರಮ ಸುನ್ನೀ ಸೆಂಟರ್ ಸುಳ್ಯದಲ್ಲಿ ನಡೆಯಿತು.ಕೌನ್ಸಿಲ್ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ಅಧ್ಯಕ್ಷತೆ...

ಮಂಗಳೂರಿನ ನಡೆದ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಬೊಳಿಯಾರಿನಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ಇಂದು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ,ದೀಪಕ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ದಯಾನಂದ ಕುರುಂಜಿ,ಭವಾನಿ...

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿ ದೇವಮ್ಮ(67) ಎಂಬುವವರು ಜೂ.03 ರಂದು ನಾಗರಹಾವು ಕಡಿದು ಮೃತಪಟ್ಟಿದ್ದು, ಅವರು ತಮ್ಮ ಮನೆಯ ಕೋಳಿ ಕಾಪುವಿಗೆ ಕೈ ಹಾಕಿದ ಸಂದರ್ಭದಲ್ಲಿ ಹಾವು ಕಡಿದಿದ್ದು, ಆಸ್ಪತ್ರೆಗೆ ತೆರಳುವ ದಾರಿ ಮಧ್ಯೆ ದೇವಮ್ಮ ಕೊನೆಯುಸಿರೆಳೆದಿದ್ದರು.ಇಂದು 10 ದಿನಗಳ ಬಳಿಕ ಆ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷಗೊಂಡಿದ್ದು, ಇದೇ ಹಾವು ಕಡಿದು ದೇವಮ್ಮ ಅವರು...

ಸುಬ್ರಮಣ್ಯ ಜೂನ್ 12: ಐಪಿಎಲ್ ಆಟಗಾರ ಮಾಯಾಂಕ್ ಅಗರ್ವಾಲ್ ಪತ್ನಿ ಹಾಗೂ ಕುಟುಂಬದವರು ಕುಕ್ಕೆ ಸುಬ್ರಮಣ್ಯದಲ್ಲಿ ನಿನ್ನೆ ಹಾಗೂ ಇಂದು ಸರ್ಪ ಸಂಸ್ಕಾರ ಸೇವೆ ಆಶ್ಲೇ ಬಲಿ ಹಾಗೂ ನಾಗ ಪ್ರತಿಷ್ಠಾ ಸೇವಾಗಳನ್ನು ಮಾಡಿರುವರು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದರು. ದೇವಳದ ಮುಖ್ಯ ಪುರೋಹಿತರು ದೇವರ ಪ್ರಸಾದವನ್ನು ನೀಡಿ ಶಾಲು ಹೊದಿಸಿ...

ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರಬಹುದಾದ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ ಪ್ರಯತ್ನಿಸಿದ್ದು, ಜತೆಗೆ ಅಧಿಕಾರಿಗಳ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ್ದರು. ಜನರಿಗೆ ಸಮಸ್ಯೆಗಳು ಆಗುತ್ತಿರುವಾಗ ಕೆಲಸ ಮಾಡಿಸಲು ಗಮನಿಸಲು ಅರೋಗ್ಯ ಶಾಖೆಗೆ ಸಮಯವಿಲ್ಲ. ಅಧಿಕಾರಿಗಳಿಗೆ ಊರವರು ಮನವಿಕೊಟ್ಟು ಪ್ರಯೋಜನವಿಲ್ಲ ಎಂಬಂತಾಗಿದ್ದು ಗುತ್ತಿಗೆದಾರರಿಗೆ ಹಿಟಾಚಿ ಸಿಗೋದಿಲ್ಲ ಎನ್ನುವ...

ಸುಳ್ಯ ನಗರ ಆಡಳಿತ ವ್ಯಾಪ್ತಿಯ ಅಂಬೆಟಡ್ಕದಲ್ಲಿ ಕಾರ್ಯಚರಿಸುತ್ತಿರುವ ಗೌತಮ್ ಹೋಟೆಲ್ ಮತ್ತು ಮಹಾಲಕ್ಷ್ಮಿ ಗ್ಯಾರಜ್ ನಡುವಿನಲ್ಲಿ ಭಗವತಿ ಸರ್ವಿಸ್ ಸ್ಟೇಶನ್ ಗೆ ತೆರಳುವ ರಸ್ತೆಯಲ್ಲಿ ಮುಖ್ಯ ರಸ್ತೆಗೆ ತಾಗಿಕೊಂಡು ಬೃಹದಾಕಾರದ ಗುಂಡಿ ನಿರ್ಮಾಣವಾಗಿದ್ದು ಈ ಹಿಂದಿನಿಂದಲೂ ಈ ಗುಂಡಿಯ ಕುರಿತು ವರದಿಗಳು ಪ್ರಕಟವಾಗಿದ್ದರು ಅಧಿಕಾರಿಗಳು ಇನ್ನು ಎಚ್ಚೆತ್ತುಕೊಳ್ಳದೇ ಇದ್ದು ಆಡಳಿತಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಇಲ್ಲಿ...

ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಾಡನೆ ಪ್ರತ್ಯಕ್ಷವಾದ ಘಟನೆ ಜೂ. 11 ರ ರಾತ್ರಿ ಇಂಜಾಡಿ ಮಹಾಮಾಯ ರೆಡಿಸೆನ್ಸಿ ಎದುರು ಕಂಡುಬಂದಿದೆ. ರಾತ್ರಿ 7.30ರ ಸುಮಾರಿಗೆ ಕಾಡಾನೆ ಇರುವುದನ್ನು ಸಾರ್ವಜನಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸುಬ್ರಹಣ್ಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಪಟಾಕಿ ಸಿಡಿಸಿ ಆನೆಯನ್ನು ಕಾಡಿನೊಳಗೆ ಕಳಿಸುವ ಪ್ರಯತ್ನ...

All posts loaded
No more posts