Ad Widget

ಜ್ಞಾನದೀಪದಲ್ಲಿ ಶಿಕ್ಷಕರ ತರಬೇತಿ ಪಡೆದ ಸಲ್ಮಾ ಸಿ.ಹೆಚ್.  ಸೌದಿ ಅರೇಬಿಯಾ ಅಂತರಾಷ್ಟ್ರೀಯ ಶಾಲಾ ಶಿಕ್ಷಕಿಯಾಗಿ ಆಯ್ಕೆ

ಬ್ರಿಟಿಷ್ ಪಠ್ಯಕ್ರಮದಲ್ಲಿ ನಡೆಯುತ್ತಿರುವ ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಬೆಲಾದಿ ಅಂತಾರಾಷ್ಟ್ರೀಯ ಶಾಲಾ ಕೆಜಿ 2 ಶಿಕ್ಷಕಿಯಾಗಿ ಸಂಪಾಜೆಯ ಸಲ್ಮಾ ಸಿ ಹೆಚ್ ಆಯ್ಕೆಯಾಗಿದ್ದಾರೆ. ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ (ಡಿ.ಎಂ.ಇಡಿ) ಪಡೆದಿರುವ ಇವರು ಸಂಪಾಜೆ ಮುಬಾರಕ್ ಮಂಝಿಲ್ ನ ಯೂನಸ್ ರಿಯಾಜ್ ಎಸ್ ಎಂ ಅವರ ಪತ್ನಿ.

ಟಿ. ಎಂ. ಶಾಹಿದ್ ತೆಕ್ಕಿಲ್ ರವರ ಅಭಿನಂದನಾ ಕಾರ್ಯಕ್ರಮದ  ಸಿದ್ಧತಾ ಸಭೆ

  ಟಿ. ಎಂ. ಶಾಹಿದ್ ತೆಕ್ಕಿಲ್ ರವರ ಅಭಿನಂದನಾ ಕಾರ್ಯಕ್ರಮ ಜುಲೈ 6 ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಕೇರಳ ಹಾಗೂ ಕರ್ನಾಟಕದ ಗಣ್ಯಾತಿ ಗಣ್ಯರು ಭಾಗವಹಿಸುವರಿದ್ದು,  ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಅಭಿನಂದನಾ ಸಮಿತಿ ಸಭೆಯು ಸುಳ್ಯದ ಉಡುಪಿ ಹೋಟೆಲ್ ಸಭಾಂಗಣದಲ್ಲಿ ಅಭಿನಂದನಾ ಸಮಿತಿಯ ಅಧ್ಯಕ್ಷರು ಕರ್ನಾಟಕ...
Ad Widget

ವಳಲಂಬೆ ಶಾಲಾ ಮಂತ್ರಿಮಂಡಲ ರಚನೆ : ಮುಖ್ಯಮಂತ್ರಿಯಾಗಿ ಪ್ರೇಕ್ಷ ಎ.ಜಿ. – ಉಪ ಮುಖ್ಯಮಂತ್ರಿಯಾಗಿ ತರುಣ್ ಡಿ.ಎನ್.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ 2024-2025 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆಯ ಮೂಲಕ ಇತ್ತೀಚೆಗೆ ರಚನೆಯಾಯಿತು.ಮುಖ್ಯಮಂತ್ರಿಯಾಗಿ ಪ್ರೇಕ್ಷ. ಎ.ಜಿ, ಉಪ ಮುಖ್ಯಮಂತ್ರಿಯಾಗಿ ತರುಣ್ ಡಿ.ಎನ್, ಗೃಹ ಮಂತ್ರಿಯಾಗಿ ಹರ್ಷಿತ್.ಪಿ, ಉಪ ಮಂತ್ರಿಯಾಗಿ ತನುಷ್. ಕೆ, ಶಿಕ್ಷಣ ಮಂತ್ರಿಯಾಗಿ ಪ್ರಾಪ್ತಿ. ಎ.ವಿ, ಉಪ ಮಂತ್ರಿಯಾಗಿ ಯಜ್ಞ.ವಿ, ಹಣಕಾಸು ಮಂತ್ರಿಯಾಗಿ ಹೃತಿಕ್.ಎನ್.ಡಿ, ಉಪ ಮಂತ್ರಿಯಾಗಿ ತನೀಷ್....

ಸುಳ್ಯ: ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ – ಪ್ರಾಮಾಣಿಕವಾದ ಜೀವನದಿಂದ ನಿಖರವಾದ  ಗುರಿ ತಲುಪಲು ಸಾಧ್ಯವಿದೆ – ಸತೀಶ್ ಕೊಯಿಂಗಾಜೆ

"ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಅಂಕಗಳ ಆಧಾರದಿಂದ ಅಳೆಯಲಾಗದು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಸ್ವಂತಿಕೆಯಿಂದ ಕಲಿತಾಗ ಯಶಸ್ಸು ಕಾಣಬಹುದು.  ಪ್ರಾಮಾಣಿಕವಾದ ಜೀವನದಿಂದ ನಿಖರವಾದ  ಗುರಿ ತಲುಪಲು ಸಾಧ್ಯವಿದೆ" ಎಂದು  ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಹೇಳಿದರು. ಅವರು ಜೂ .19 ರಂದು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ  ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ...

ಸಿ.ಗೋಪಾಲಕೃಷ್ಣ ವೈಲಾಯ ನಿಧನ

ಸುಳ್ಯ, ಜೂ.18 : ಸುಳ್ಯ ತಾಲೂಕಿನ ತೊಡಿಕಾನದ ಚಳ್ಳಂಗಾಯ ನಿವಾಸಿ ಪ್ರಸಕ್ತ 13 ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದ ಸಿ.ಗೋಪಾಲಕೃಷ್ಣ ವೈಲಾಯ(92) ಅವರು ಜೂ.16ರಂದು ನಿಧನ ಹೊಂದಿದರು.ಮೃತರು ಪತ್ನಿ, ಪುತ್ರ ಮಕ್ಕಳ ತಜ್ಞ ಡಾ| ಸಿ.ಜಿ.ರಾಘವೇಂದ್ರ ವೈಲಾಯ ಮತ್ತು 6 ಪುತ್ರಿಯರನ್ನು ಅಗಲಿದ್ದಾರೆ.

ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತ, ಆಟೊ ಚಾಲಕ ರಿಚರ್ಡ್ ಕ್ರಾಸ್ತ ನಿಧನ

ಸುಳ್ಯದ ಹಿರಿಯ ರಿಕ್ಷಾ ಚಾಲಕ ಹಾಗೂ ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತ ರಿಚರ್ಡ್ ಕ್ರಾಸ್ತರವರು ಇಂದು ಮುಂಜಾನೆ 5.30 ರ ವೇಳೆ ಹೃದಯಾಘಾತದಿಂದ ಸುಳ್ಯ ಜಯನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಸುಮಾರು 64 ವರ್ಷ ವಯಸ್ಸಾಗಿತ್ತು.  ಮುಂಜಾನೆ  ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಕೊನೆಯುಸಿರೆಳೆದರೆನ್ನಲಾಗಿದೆ. ಮನೆಯವರು ವೈದ್ಯರಲ್ಲಿ  ಮೊದಲು ಜ್ಯೋತಿ ಆಸ್ಪತ್ರೆಗೆ, ಬಳಿಕ ಕೆ.ವಿ.ಜಿ....

ಕೆ.ವಿ.ಜಿ ಆಯುರ್ವೇದ ಕಾಲೇಜು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜಾಥಾ

ಕೆವಿಜಿ : ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ 10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜನಜಾಗೃತಿ ಜಾಥಾವನ್ನು ದಿನಾಂಕ 19.06.2024 ಹಮ್ಮಿಕೊಳ್ಳಲಾಯಿತು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಪ್ರಮೋದ್ ಪಿ. ಎ., ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು ಜನಜಾಗೃತಿ ಜಾಥಾವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ...

ತಾ. ಪಂ. ಸಾಮಾನ್ಯ ಸಭೆ – ಬೆಳೆಯುತ್ತಿರುವ ಸುಳ್ಯದಲ್ಲಿ ವ್ಯವಸ್ಥಿತ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಆದ್ಯತೆ – ಉದಯ ಶೆಟ್ಟಿ

ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಜೂ.19 ರಂದು ನಡೆಯಿತು. ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಉದಯ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.ಸುಳ್ಯ ನಗರದ ತ್ಯಾಜ್ಯ ವಿಲೇವಾರಿಗೆ ನಗರ ಹಾಗೂ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಜಾಗ ಗುರುತಿಸುವ ಕುರಿತು ಕಳೆದ ಸಭೆಯ ಪಾಲನಾ ವರದಿ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ, ವಿವರ ನೀಡಿದ ಮುಖ್ಯಾಧಿಕಾರಿಗಳು...

ಸುಳ್ಯ : ತಾ.ಪಂ. ಸಾಮಾನ್ಯ ಸಭೆ – ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುದಾನ ಸದ್ಭಳಕೆಗೆ ಜನತೆ ಹಾಗೂ ಅಧಿಕಾರಿಗಳು ಕೈ ಜೋಡಿಸಬೇಕು – ಉದಯ ಕುಮಾರ್ ಶೆಟ್ಟಿ

ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಾಮನ್ಯ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಬಳಿಕ ಪತ್ರಕರ್ತರ ಜೊತೆಗೆ ಮತನಾಡುತ್ತಾ ನಗರ ಪ್ರದೇಶಗಳಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತದಿಂದ ಘನತ್ಯಾಜ್ಯ ನಿರ್ವಹಣೆಗೆ ಬೇಕಾಗುವ ಅನುದಾನವು ಸಿಗುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಲು ಸ್ಥಳದ ಅವಶ್ಯಕತೆ ಇದ್ದು ಅದನ್ನು ಮೊದಲು ಮಾಡಿಕೊಂಡು ಬೆಳೆಯುವ...

ಸಂಜೀವ ಮಡಿವಾಳ ಕೈವಲ್ತಡ್ಕ ನಿಧನ

ಐವರ್ನಾಡು ಗ್ರಾಮದ ಕೈವಲ್ತಡ್ಕ ಸಂಜೀವ ಮಡಿವಾಳರವರು ಜೂ.17 ರಂದು ನಿಧನರಾದರು. ಅವರಿಗೆ 79 ವರ್ಷ ಪ್ರಾಯವಾಗಿತ್ತು.ಮೃತರು ಪುತ್ರರಾದ ಜಗದೀಶ ಕೈವಲ್ತಡ್ಕ ಪುತ್ರಿಯರಾದ ಶ್ರೀಮತಿ ಲೀಲಾವತಿ ,ಶ್ರೀಮತಿ ಗೀತಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!