Ad Widget

ಮಿನಿ ಸಮುದಾಯ ಭವನ ನಿರ್ಮಾಣಕ್ಕೆ ಮನವಿ.

ಅಜ್ಜಾವರ: ಮೇದಿನಡ್ಕ ಸಿಆರ್ ಸಿ ಕಾಲೋನಿಯಲ್ಲಿ ಮಿನಿ ಸಮುದಾಯ ಭವನ ನಿರ್ಮಾಣ ಮತ್ತುಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಅಭಿವೃದ್ಧಿ, ಮೇದಿನಡ್ಕದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆಶಾಸಕರಿಗೆ ಮನವಿ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ರಮೇಶ್ ಮೇದಿನಡ್ಕ, ದಯಾಳನ್ ಉಪಸ್ಥಿತರಿದ್ದರು.

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ನೂತನ ಕಟ್ಟಡಕ್ಕೆ ಸ್ಥಳಾಂತರ , ಶುಭಾರಂಭ.

ಮಂಡೆಕೋಲು: ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಗಣಪತಿ ಹವನದೊಂದಿಗೆ ಪ್ರಾರಂಭಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಉಪಾಧ್ಯಕ್ಷರು ಪ್ರತಿಮಾ ಹೆಬ್ಬಾರ್, ಸದಸ್ಯರಾದ ಗೀತಾಮಾವಂಜಿ, ಗ್ರಾಮ ಪಂಚಾಯತ್ ಪಿಡಿಓ ರಮೇಶ್ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಪ್ರಾಥಮಿಕ ಕೃಷಿ ಪತ್ತಿನ...
Ad Widget

ಕೃಷಿಕರ ಬೆಳೆ ವಿಮೆ ಪಾವತಿಗೆ ಮುಂದಿನ ವಾರದಲ್ಲಿ ಪ್ರಾರಂಭ – ಭಾಗೀರಥಿ ಮುರುಳ್ಯ.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಬೆಳೆ ವಿಮೆ ಪರಿಹಾರಕ್ಕೆ ಸಂಬಂದಿಸಿ ಮುಂದಿನ ವಾರದಿಂದ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ ಇದಕ್ಕೆ ಸಂಬಂಧಿಸಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದ್ದು ಮುಂದಿನ ವಾರ ಈ ಪ್ರಕ್ರಿಯೆ ಜಾರಿಗೆ ಬರಲಿದೆ ಪಹಣಿ ಇರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಭೆಯಲ್ಲಿ ಹೇಳಿದರು.

ಭಾರಿ ಮಳೆ ಹಿನ್ನೆಲೆ, ದ.ಕ. ಜಿಲ್ಲೆಯಲ್ಲಿ ನಾಳೆ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ & ಪ್ರೌಢಶಾಲೆಗಳಿಗೆ ಜೂ.27 ಗುರುವಾರದಂದು ರಜೆ ಘೋಷಿಸಲಾಗಿದೆ.ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ನಾಳೆ (ಜೂ.27) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ.

ಕುಂಬರ್ಚೋಡು ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಪರಿಹರಿಸಲು ಶಾಸಕರಿಗೆ ಮನವಿ

ಕುಂಬರ್ಚೋಡು ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸ್ಥಳೀಯ ನಿವಾಸಿಗಳಿಂದ ಸುಳ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ರವರನ್ನು ಕಚೇರಿಯಲ್ಲಿ ಭೇಟಿಯಾಗಿ ಮನವಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಕೆ ಅಬ್ದುಲ್ ಗಫೂರ್,ಅಬ್ದುಲ್ ಕರೀಂ ಬಿ ಎಂ, ಕುಂಞಾಮು ಕೆ ಎಂ,ಮಹಮ್ಮದ್ ಮುಖದ್ದಸ್,ಮತ್ತಿತರರು ಉಪಸ್ಥಿತರಿದ್ದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಪಿ.ಸಿ. ಜಯರಾಮರನ್ನು ಭೇಟಿ ಮಾಡಿದ ನೂತನ ತಂಡ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ ಅವರನ್ನು ಅರೆಭಾಷೆ ಅಕಾಡೆಮಿಯ ನೂತನ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಇಂದು ಅವರ ಸ್ವಗೃಹದಲ್ಲಿ ಭೇಟಿ ನೀಡಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಪಿ.ಸಿ. ಜಯರಾಮ ಇವರು ಹೊಸ ತಂಡಕ್ಕೆ ಶುಭ ಹಾರೈಸಿದರು. ಅರೆಭಾಷೆ ಸಂಸ್ಕೃತಿ...

ಎಲಿಮಲೆ : ಮಾದಕ ವಸ್ತು ವಿರೋಧಿ ದಿನಾಚರಣೆ

ಜೂ 26 ರಂದು ಎಲಿಮಲೆ ಪ್ರೌಢಶಾಲೆ ಯಲ್ಲಿ 'ಮಾದಕ ವಸ್ತು ವಿರೋಧಿ ದಿನ'ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾದಕ ವ್ಯಸನೆ ಎಂದರೇನು, ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಹಾಗೂ ವ್ಯಸನ ಮುಕ್ತ ದೇಶವನ್ನಾಗಿಸಲು ವಿದ್ಯಾರ್ಥಿಗಳ ಪಾತ್ರವನ್ನು ಮನವರಿಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಶಿಕ್ಷೇತರ- ಸಿಬ್ಬಂದಿ ವರ್ಗದವರು...

ಸುಳ್ಯ: ರೋಟರಿ ಕ್ಲಬ್  ನೂತನ ಪದಾಧಿಕಾರಿಗಳ ಆಯ್ಕೆ

ರೋಟರಿ ಕ್ಲಬ್ ಸುಳ್ಯದ ಮುಂದಿನ 2024-25 ರ ಸಾಲಿನ ನೂತನ ಅಧ್ಯಕ್ಷೆಯಾಗಿ ರೋ. ಯೋಗಿತ ಗೋಪಿನಾಥ್ ,  ಕಾರ್ಯದರ್ಶಿಯಾಗಿ ರೋ. ಡಾ. ಹರ್ಷಿತಾ ಪುರುಷೋತ್ತಮ್ , ಖಜಾಂಚಿಯಾಗಿ  ರೋ. ಹರಿರಾಯ ಕಾಮತ್ , ಉಪಾಧ್ಯಕ್ಷರಾಗಿ ರೊ. ಡಾ. ರಾಮ್ ಮೋಹನ್ , ಜೊತೆ ಕಾರ್ಯದರ್ಶಿಯಾಗಿ ರೋ. ಆಶಿತಾ ಕೇಶವ್ ,  ಸಾರ್ಜೆಂಟ್ ಅಟ್ ಆರ್ಮ್ ಆಗಿ...

ಜೂ.30: ಸುಳ್ಯದ ಅಮರ ಸಂಘಟನಾ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

ಅಮರ ಸಂಘಟನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವನಮಹೋತ್ಸವ ಪ್ರಯುಕ್ತ ಸುಳ್ಯದಲ್ಲಿ ಸಾರ್ವಜನಿಕ ಉಚಿತ 1000 ಸಸಿ ವಿತರಣೆ ಕಾರ್ಯಕ್ರಮ ಜೂ. 30 ಆದಿತ್ಯವಾರದಂದು ಸುಳ್ಯದ ಪ್ರಭು ಬುಕ್ಸ್ ಸ್ಟಾಲ್ ಹತ್ತಿರ ನಡೆಯಲಿದೆ. ಎಲ್ಲಾ ಸಾರ್ವಜನಿಕ ಪರಿಸರ ಪ್ರೇಮಿಗಳಿಗೆ ಗಿಡ ವಿತರಣೆಯು ಉಚಿತವಾಗಿರುತ್ತದೆ. ಒಬ್ಬರಿಗೆ ಎರಡು ಸಸಿಗಳನ್ನು ಮಾತ್ರ ನೀಡಲಾಗುವುದು. ಸಸಿ ವಿತರಣೆ ಕಾರ್ಯಕ್ರಮವು ಬೆಳಿಗ್ಗೆ...

ಕರೆ ಬಂದ ಕ್ಷಣಮಾತ್ರದಲ್ಲಿ ಹಾಜರಾಗಿ , ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ನೆಚ್ಚಿನ ಜೀವರಕ್ಷಕ ವಾಹನ ಚಾಲಕ

ಬೆಳ್ಳಂಬೆಳಗ್ಗೆ ಆಗಮಿಸಿ ತುಂಬಿ ಹರಿಯುವ ಹೊಳೆಯಿಂದ ಕಾಣೆಯಾದ ಯುವಕನ ಶೋಧನೆ ನಡೆಸಿ ಯಶಸ್ವಿಯಾದ ಹೀರೋ  ವಿಪತ್ತು ನಿರ್ವಹಣಾ ತಂಡದ ಸದಸ್ಯ , ಅಂಬ್ಯುಲೆಂನ್ಸ್ ಚಾಲಕ ಯಾರು ಗೊತ್ತಾ , ಇವರು ನಡೆಸಿದ ಕಾರ್ಯಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಸುಳ್ಯ: ಸುಳ್ಯದಲ್ಲಿ ಹಲವಾರು ಜೀವ ರಕ್ಷಕ ವಾಹನಗಳು ಇದ್ದು ಅವುಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಕೂಡ ಆಪತ್ಬಾಂಧವರೆ ಆಗಿದ್ದು...
Loading posts...

All posts loaded

No more posts

error: Content is protected !!