Ad Widget

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ಉತ್ಸವ

ಯೋಗ ದಿನಾಚರಣೆಯ ಅಂಗವಾಗಿ ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ “ಯೋಗ ಉತ್ಸವ ” ಕಾರ್ಯಕ್ರಮ ನಡೆಯಿತು. ಅಂತಾರಾಷ್ಟ್ರೀಯ ಯೋಗಪಟು ಕು . ತೃಪ್ತಿ  ಎನ್. ಇವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಿತು. ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಆಯುರ್ವೇದ ತಜ್ಞ ವೈದ್ಯ, ಆಯುರ್ವೇದ ವಾಚಸ್ಪತಿ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ ” ಮನಸ್ಸು ಮತ್ತು ಯೋಗ ಮಾರ್ಗ , ಲಾಭೋಪಾಯ ” ಎಂಬ ವಿಷಯದ ಕುರಿತು ಸತ್ಸಂಗ ಪ್ರವಚನ ನಡೆಯಿತು. ಅವರು ಯೋಗದ ಆಧ್ಯಾತ್ಮಿಕ ಆಯಾಮವನ್ನು ತಿಳಿಸುತ್ತಾ “ಯೋಗವೆಂದರೆ ಕೇವಲ ಆಸನಗಳಲ್ಲ, ಅಹಿಂಸೆ , ಪರಮಾತ್ಮನಲ್ಲಿ ಶರಣಾಗತಿಗಳೂ ಸೇರಿವೆ . ಯೋಗ ಮತ್ತು ಆಯುರ್ವೇದ ವಿಚಾರದ ಯಾವತ್ತೂ ಸೇವೆಗಳಿಗೆ ನಮ್ಮ ಆಸ್ಪತ್ರೆ ಬದ್ಧವಾಗಿದೆ. ವಿದೇಶದಿಂದ ಕೂಡಾ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವುದಕ್ಕೆ ಇಲ್ಲಿನ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ಹಾಗೂ ಗುಣ ಹೊಂದಿದ ರೋಗಿಗಳ ಮನದುಂಬಿದ ಹರಸುವಿಕೆಯೇ ಕಾರಣ ” ಎಂದರು. ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ರೋಟರಿಯನ್ ಎ . ಜಗಜೀವನ್ ದಾಸ್ ರೈ ಇವರು ವಹಿಸಿಕೊಂಡರು . ಅವರು ಮಾತನಾಡುತ್ತಾ “ಡಾ . ಬಂಗಾರಡ್ಕ ಅವರ ಪರಿಣಾಮಕಾರಿ ಅರೋಗ್ಯ ಲೇಖನಗಳು ಸಮಾಜದಲ್ಲಿ ಪರಿವರ್ತನೆ ತರುತ್ತಿವೆ . ಯೋಗ ಆರೋಗ್ಯಕ್ಕೆ ಎಷ್ಟು ಸಹಕಾರಿಯೆಂದರೆ ನನ್ನ ಬಿ .ಪಿ . ಯೋಗ ಮಾಡಿದ ಮೇಲೆ ನಿಯಂತ್ರಣಕ್ಕೆ ಬಂತು .” ಎಂದರು . ಧನ್ವಂತರಿ ಸುಳಾದಿ , ಭಜನೆಯನ್ನು ಕು . ಸುಧೀಕ್ಷಾ ಹಾಗೂ ಕು . ಸುನಿಧಿ , ಕಾಂಚನಮಾಲಾ ಸಿಂಧೂರ ಮನೆ , ಗೀತಾ ಸದಾಶಿವ ಭಟ್ ನವಚೇತನ ನಡೆಸಿಕೊಟ್ಟರು . ದೇವಕಿ ಭಟ್, ಭಾರತಿ ಭಜನೆಯಲ್ಲಿ ಸಹಕರಿಸಿದರು . ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ . ಶ್ರುತಿ .ಎಂ . ಎಸ್ . ಕಾರ್ಯಕ್ರಮ ನಿರ್ವಹಿಸಿದರು . ಆಸ್ಪತ್ರೆಯ ಆಡಳಿತ ಸಮಿತಿ ಸದಸ್ಯ ಎಂ .ಸುಬ್ರಮಣ್ಯ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು . ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧನಂಜಯ ಭಟ್ ಧನ್ಯವಾದಗೈದರು . ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ , ಉಡುಪಿ ಮಿಲಾಗ್ರಿಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಹರಿಣಾಕ್ಷಿ ಕೇವಳ , ನಿವೃತ್ತ ಪ್ರಾಧಾಪಕರಾದ ರಾಜಾರಾಮ ನೆಲ್ಲಿತ್ತಾಯ , ಸದಾಶಿವ ಭಟ್ ನವಚೇತನ , ಯೋಗ ಶಿಕ್ಷಕ ನವೀನ್ ಕೆಯ್ಯೂರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!