Ad Widget

ಅಂತರಾಜ್ಯ ಸಂಪರ್ಕಿತ ರಸ್ತೆಯ ಪಕ್ಕದಲ್ಲಿ ಮರಣ ಗುಂಡಿ, ಕಣ್ಣಿದ್ದು ಕುರುಡಾಯಿತೆ ನಗರಾಡಳಿತ



ಸುಳ್ಯ ನಗರ ಆಡಳಿತ ವ್ಯಾಪ್ತಿಯ ಅಂಬೆಟಡ್ಕದಲ್ಲಿ ಕಾರ್ಯಚರಿಸುತ್ತಿರುವ ಗೌತಮ್ ಹೋಟೆಲ್ ಮತ್ತು ಮಹಾಲಕ್ಷ್ಮಿ ಗ್ಯಾರಜ್ ನಡುವಿನಲ್ಲಿ ಭಗವತಿ ಸರ್ವಿಸ್ ಸ್ಟೇಶನ್ ಗೆ ತೆರಳುವ ರಸ್ತೆಯಲ್ಲಿ ಮುಖ್ಯ ರಸ್ತೆಗೆ ತಾಗಿಕೊಂಡು ಬೃಹದಾಕಾರದ ಗುಂಡಿ ನಿರ್ಮಾಣವಾಗಿದ್ದು ಈ ಹಿಂದಿನಿಂದಲೂ ಈ ಗುಂಡಿಯ ಕುರಿತು ವರದಿಗಳು ಪ್ರಕಟವಾಗಿದ್ದರು ಅಧಿಕಾರಿಗಳು ಇನ್ನು ಎಚ್ಚೆತ್ತುಕೊಳ್ಳದೇ ಇದ್ದು ಆಡಳಿತಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಇಲ್ಲಿ ಸಂಚರಿಸುವ ಸಾರ್ವಜನಿಕರು ಈ ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸುತ್ತಿದ್ದು, ಈ ವರದಿಯ ಬಳಿಕವಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂದು ಕಾದು ನೋಡಬೇಕಿದೆ.

ನಗರ ಪಂಚಾಯತ್ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ ಎಂ. ಎಚ್. ಸುಧಾಕರ್ ಮಾತನಾಡಿ  ಈ ಗುಂಡಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!