ಸುಬ್ರಮಣ್ಯ ಜೂನ್ 12: ಐಪಿಎಲ್ ಆಟಗಾರ ಮಾಯಾಂಕ್ ಅಗರ್ವಾಲ್ ಪತ್ನಿ ಹಾಗೂ ಕುಟುಂಬದವರು ಕುಕ್ಕೆ ಸುಬ್ರಮಣ್ಯದಲ್ಲಿ ನಿನ್ನೆ ಹಾಗೂ ಇಂದು ಸರ್ಪ ಸಂಸ್ಕಾರ ಸೇವೆ ಆಶ್ಲೇ ಬಲಿ ಹಾಗೂ ನಾಗ ಪ್ರತಿಷ್ಠಾ ಸೇವಾಗಳನ್ನು ಮಾಡಿರುವರು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದರು. ದೇವಳದ ಮುಖ್ಯ ಪುರೋಹಿತರು ದೇವರ ಪ್ರಸಾದವನ್ನು ನೀಡಿ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
- Saturday
- September 21st, 2024