Ad Widget

ಮೇನಾಲ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಟೋಟ ಸ್ಪರ್ಧೆ – ಕಾರ್ಯಕ್ರಮ ಮುಗಿದೊಡನೆ ಅಧಿಕಾರಿಗಳ ಸಮ್ಮುಖ ಮೈದಾನ ಸ್ವಚ್ಚ

. . . . . . . . .

ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ಪ್ರಖಂಡ ಹಾಗೂ ಶ್ರೀ ಕೃಷ್ಣ ಭಜಾನ ಮಂದಿರ ಮೇನಾಲ ಇವುಗಳ ಆಶ್ರಯದಲ್ಲಿ ಸೆ-೬ ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ವಿಜೃಂಬಣೆಯಿಂದ ನಡೆಯಿತು. ವಿವಾದಿತ ಸ್ಥಳವಾಗಿರುವುದರಿಂದ ಪೋಲೀಸು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

. . . . . . .

ಕೃಷ್ಣ ಜನ್ಮಾಷ್ಟಾಮಿಯ ಪ್ರಯುಕ್ತ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಅಟೋಟ ಸ್ಪರ್ಧೆಗಳು ಜರುಗಿತು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ , ಎ.ವಿ ತೀರ್ಥರಾಮ , ಅಶೋಕ್ ಅಡ್ಕಾರ್ , ಭಜರಂಗದಳ ಮುಖಂಡರಾದ ನವೀನ್ ಎಲಿಮಲೆ , ವರ್ಷಿತ್ ಚೊಕ್ಕಾಡಿ ,ಸುಭೋದ್ ಶೆಟ್ಟಿ ಮೇನಾಲ , ಶೀನಪ್ಪ ಬಯಂಬು , ಪ್ರಬೋದ್ ಶೆಟ್ಟಿ ಮೇನಾಲ , ಸುನಿಲ್ ರೈ ಮೇನಾಲ , ಸತ್ಯವತಿ ಬಸವನಪಾದೆ , ಅಕ್ಷಯ್ ಮೇನಾಲ , ಕಮಲಾಕ್ಷ ರೈ ಬಾಡೇಲು , ಚನಿಯ ಕಲ್ತಡ್ಕ , ಬಾಲಕೃಷ್ಣ ಮೇನಾಲ , ಮಹೇಶ್ ರೈ ಮೇನಾಲ ಸೇರಿದಂತೆ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೋಲಿಸ್ ಅಧಿಕಾರಿಗಳ ಮೊಕ್ಕಾಂ


ಡಿಷ್ನಲ್ ಎಸ್ಪಿ ಜೊತೆ ಮಾತುಕತೆಯಲ್ಲಿ ಅಧಿಕಾರಿಗಳು.

ಸ್ಥಳಕ್ಕೆ ಮಂಗಳೂರು ಅಡಿಷನಲ್ ಎಸ್ ಪಿ ಧರ್ಮಪ್ಪ ಎಂ.ಎನ್ , ಡಿ ವೈ ಎಸ್ ಪಿ ಗಾನ , ಸರ್ಕಲ್ ಇನ್ಪೆಕ್ಟರ್ ನವೀನ್ ಚಂದ್ರ ಜೋಗಿ , ಸಬ್ ಇನ್ಪೆಕ್ಟರ್ ಈರಯ್ಯ ಸೇರಿದಂತೆ ಪೋಲಿಸ್ ಇಲಾಖೆಯ ಸುಮಾರು ೬೦ಕ್ಕು ಹೆಚ್ಚು ಸಿಬ್ಬಂದಿಗಳು ಕಾಂತಮಂಗಲದಿಂದಲೇ ಕಾವಲು ಏರ್ಪಡಿಸಿದ್ದರು. ಆಟೋಟಾ ಸ್ಪರ್ಧೆಗಳು ಮುಕ್ತಾಯವಾಗಿದ್ದು ಮೈದಾನವನ್ನು ಪೋಲೀಸ್ ಅಧಿಕಾರಿಗಳ ಸಮ್ಮುಖ ಸ್ವಚ್ಚಗೊಳಿಸಿ ಕೇಸರಿ ಧ್ವಜ, ಬಂಟಿಂಗ್ಸ್ ಬ್ಯಾನರ್ ಗಳನ್ನು ತೆರವು ಗೊಳಿಸಿ ಯಥಾಸ್ಥಿತಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳಾದ ಅಜಿತ್ , ಶಿವಣ್ಣ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading