Ad Widget

ಅಡ್ಕಾರು : ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ -ಮೂವರು ಮೃತ್ಯು

. . . . . . . . .

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾರ್ಮಿಕರ ಮೇಲೆ ಹರಿದ ಪರಿಣಾಮ ಓರ್ವ ಮೃತ ಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಅಡ್ಕಾರ್ ಬಳಿ ಸಂಭವಿಸಿದೆ.

. . . . . . .

ಹುಣಸೂರಿನಿಂದ ಮೂಡಬಿದ್ರೆಗೆ ಮೂರ್ತಿ ಎಂಬುವವರು ತನ್ನ ಊರಿನಿಂದ ಮುಂಜಾನೆ 3 ಗಂಟೆ ಸುಮಾರಿಗೆ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದು ತಾವು ಚಲಾಯಿಸುತ್ತಿದ್ದ ಕಾರು ಅಡ್ಕಾರಿನಲ್ಲಿ ಹಾವೇರಿ ಮೂಲದ ಕಾರ್ಮಿಕರ ಗುಂಪಿನೆಡೆಗೆ ನುಗ್ಗಿದೆ. ಅಡ್ಕಾರ್ ಕರಾವಳಿ ಹೊಟೇಲ್ ಬಳಿ ಕೆಲಸ ಅರಸಿ ಅ ೩೦ರ ರಾತ್ರಿ ಆಗಮಿಸಿದ್ದ ಈ ತಂಡವು ಕೆಸಕ್ಕೆ ತೆರಳಲು ಮುಂಜಾನೆ ಸುಮಾರು ೬:೪೫ರ ಸುಮಾರಿ ರಸ್ತೆ ಬದಿ ನಿಂತಿದ್ದಾಗ ಕಾರು ಡಿಕ್ಕಿ ಹೊಡೆದಿದೆ, ಬಳಿಕ ಕಾರು ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕೂಡ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓರ್ವ ಸ್ಥಳದಲ್ಲೆ ಮೃತಪಟ್ಟರೆ ಇನ್ನೋರ್ವ ಸುಳ್ಯ ಹಾಗೂ ಮತ್ತೋರ್ವ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು .

ಮೃತಪಟ್ಟ ಕಾರ್ಮಿಕರನ್ನು ಚೆನ್ನಪ್ಪ ತಂದೆ ಹೀರಪ್ಪ ಲಮಾಣಿ ರಾಣೆಬೆನ್ನೂರು ಕಾಕೋಲ ತಾಂಡವ , ರೇಖಪ್ಪ ತಂದೆ ಶೇಖಪ್ಪ ಲಮಾಣಿ ರಾಣೆಬೆನ್ನೂರು ಕಾಕೋಲ ತಾಂಡವ , ಮಹಂತೇಶ್ ತಂದೆ ಗಂಗಪ್ಪ ರಾಣೆಬೆನ್ನೂರು ಕಾಕೋಲ ತಾಂಡವ ಎಂದು ತಿಳಿದುಬಂದಿದೆ. ಈ ಕಾರ್ಮಿಕರ ತಂಡವು ಜಾಲ್ಸೂರು ಗ್ರಾಮದಲ್ಲಿ ಕೇಂದ್ರ ಸರಕಾರದ ಜೆಜೆಎಂ ಟ್ಯಾಂಕ್ ನಿರ್ಮಾಣ ಕಾಮಗಾರಿ ನಿರ್ವಹಿಸಲು ಆಗಮಿಸಿದ್ದರು. ಇವರ ತಂಡದಲ್ಲಿ ಒಟ್ಟು ಹನ್ನೊಂದು ಮಂದಿ ಆಗಮಿಸಿದ್ದು ಈ ಪೈಕಿ ಮೂವರು ಮೃತಪಟ್ಟಿದ್ದು ಓರ್ವ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರ ಕೈ ಹಾಗೂ ತಲೆಗೆ ಗಂಬೀರ ತರನದ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯಕ್ಷ ದರ್ಶಿ ಮಾಹಿತಿಯ ಪ್ರಕಾರ ಮುಂಜಾನೆ ಸುಮಾರು ೬:೪೫ ರ ವೇಳೆಗೆ ಈ ಘಟನೆ ನಡೆದಿದ್ದು ಚಾಲಕನು ರಾಗ್ ಸೈಡ್ ನಲ್ಲಿ ಬಂದು ಗುದ್ದಿದ್ದು ಗುದ್ದಿದ ರಭಸಕ್ಕೆ ಓರ್ವ ಪಕ್ಕದಲ್ಲಿ ನಿಂತಿದ್ದ ಲಾರಿಯ ಮುಂಬಾಗಕ್ಕೆ ಬಿದ್ದರು ಹಾಗೂ ಈ ಸಂದರ್ಭದಲ್ಲಿ ಚೀರುತ್ತಾ ಅರಚುತ್ತಾ ಓಡಿ ಬಂದರು ಯಾವುದೇ ಪ್ರಯೋಜನವಾಗಿಲ್ಲಾ . ನಾವು ೧೧ ಮಂದಿಯ ತಂಡವು ಅ ೩೦ರ ರಾತ್ರಿ ಕೂಲಿ ಕೆಲಸಕ್ಕಾಗಿ ಬಂದಿದ್ದು ನಮ್ಮ ನಾಡಲ್ಲಿ ಬರದ ಪರಿಸ್ಥಿತಿ ಇದ್ದು ಇದೀಗ ನಮ್ಮ ಜೊತೆಗೆ ಬಂದವರು ಇಲ್ಲವಾಗಿದ್ದಾರೆ ಎಂದು ಹುಲಿಯಪ್ಪ ತಿಳಿಸಿದ್ದಾರೆ. ಇತ್ತ ಮೃತಪಟ್ಟರ ಕುಟುಂಬಸ್ಥರು ಸುಳ್ಯಕ್ಕೆ ಆಗಮಿಸಿ ಮೃತದೇಹವನ್ನು ಊರಿಗೆ ಕೊಂಡೋಯ್ಯಲಿದ್ದಾರೆ ಎಂದು ತಿಳಿದುಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading