Ad Widget

ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆ

ಕಲ್ಲುಗುಂಡಿಯ  ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ಶಾಲಾ ಸಂಸತ್ತು ರಚನೆಯಾಯಿತು.  ಶಾಲೆಯ ವಿದ್ಯಾರ್ಥಿ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆಯಾಗಿದ್ದಾರೆ.

ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ನಡೆಯಿತು. ಶಾಲಾ ಸಂಚಾಲಕರಾದ ಫಾದರ್ ಪಾವ್ಲ್ ಕ್ರಾಸ್ತಾ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಅನಿತಾ ಮಸ್ಕರೇನಸ್ ನೂತನ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಶಾಲಾ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್....
Ad Widget

ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ನಡೆಯಿತು. ಶಾಲಾ ಸಂಚಾಲಕರಾದ ಫಾದರ್ ಪಾವ್ಲ್ ಕ್ರಾಸ್ತಾ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಅನಿತಾ ಮಸ್ಕರೇನಸ್ ನೂತನ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ...

ಬೆಳ್ಳಾರೆ : ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ – ಮತ್ತಿಬ್ಬರ ಬಂಧನ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಹೇಳಿಕೆಯ ಮೇರೆಗೆ ಪೊಲೀಸರು ಇನ್ನಿಬ್ಬರನ್ನು ಬಂಧಿಸಿದ್ದಾರೆ.ಕೊಡಿಯಾಲದ ಚೇತನ್ ಕಾಯರ್ತಡ್ಕ, ದರ್ಶನ್ ಕಾಯರ್ತಡ್ಕ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.ಸುಳ್ಯ ತಾಲೂಕಿನ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿಯ ತಂದೆ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕಲ್ಮಡ್ಕದ ಚಿದಾನಂದ ಎಂಬಾತನನ್ನು ಬಂಧಿಸಿದ್ದರು.ಇದೀಗ ವಿಚಾರಣೆ ಮುಂದುವರಿಸಿದ...

ಪಂಜ : ಹೃದಯಾಘಾತದಿಂದ ಯುವಕ ಮೃತ್ಯು

ತೀವ್ರ ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಪಂಜ ಸಮೀಪದ ಕರಿಕ್ಕಳದಿಂದ ಜೂ.25 ರಾತ್ರಿ ವರದಿಯಾಗಿದೆ.ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ, ಪಂಜದ ಶಿವಕೃಪಾ ಮೋಟಾರ್ಸ್ ನ ಮೆಕಾನಿಕ್ ಭಾಸ್ಕರ ಗೌಡ ಮೃತಪಟ್ಟ ಯುವಕ. ಅವರು ಜೂ.25 ರಾತ್ರಿ 10 ಗಂಟೆಗೆ ವೇಳೆಗೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರೆನ್ನಲಾಗಿದೆ.ಪಂಜದಲ್ಲಿ ಅವರು ಸುಮಾರು 20 ವರುಷಗಳಿಂದ...

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ನೂತನ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿಯಾಗಿ ಸತೀಶ್ ಕೂಜುಗೋಡು, ಖಜಾಂಜಿಯಾಗಿ ಚಂದ್ರಶೇಖರ ಪಾನತ್ತಿಲ

. ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸತೀಶ್ ಕೂಜುಗೋಡು, ಖಜಾಂಜಿಯಾಗಿ ಚಂದ್ರಶೇಖರ ಪಾನತ್ತಿಲ ಅವರು ಆಯ್ಕೆಯಾಗಿದ್ದಾರೆ. ಕ್ಲಬ್ ನ ಮೊದಲ ಉಪಾಧ್ಯಕ್ಷರಾಗಿ ಅಶೋಕ್ ಮೂಲೆಮಜಲು, ದ್ವಿತೀಯ ಉಪಾಧ್ಯಕ್ಷರಾಗಿ ರಾಜೇಶ್.ಎನ್.ಎಸ್, ನಿಕಟಪೂರ್ವ ಅಧ್ಯಕ್ಷರಾಗಿ ಪ್ರೋ.ರಂಗಯ್ಯ ಶೆಟ್ಟಿಗಾರ್ ಹಾಗೂ ಕ್ಲಬ್ ನ ಪದಾಧಿಕಾರಿಗಳಾಗಿ ವಿಮಲಾ ರಂಗಯ್ಯ, ಮೋಹನ್ ದಾಸ್...

ಪೆರಾಜೆ ಸೊಸೈಟಿ ಚುನಾವಣೆ : ಎಲ್ಲಾ ಸ್ಥಾನಗಳನ್ನು ಗೆದ್ದು ಬೀಗಿದ ಬಿಜೆಪಿ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಜೂ.25ರಂದು ಚುನಾವಣೆ ನಡೆದಿದ್ದು, ಒಟ್ಟು 13 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು ಅದರಲ್ಲಿ 751 ಮತಗಳುಚಲಾವಣೆಯಾಗಿದ್ದವು. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು376 ಮತಗಳಿದ್ದು, 313 ಮತಗಳು ಚಲಾವಣೆಯಾಗಿತ್ತು. ಸಾಮಾನ್ಯ...

ಮಡಪ್ಪಾಡಿ : ಒಡಿಯೂರು ಗ್ರಾಮ ವಿಕಾಸ್ ಯೋಜನೆ ಹಾಗೂ ಅಕ್ಷಯ ಸಂಜೀವಿನಿ ಸದಸ್ಯರಿಂದ ಬಸ್ ನಿಲ್ದಾಣ ಸ್ವಚ್ಚತೆ

ಮಡಪ್ಪಾಡಿ ಬಸ್ ಸ್ಟಾಂಡ್ ನಲ್ಲಿ ಕಸ ರಾಶಿ ಬಿದ್ದಿದ್ದನ್ನು ಗಮನಿಸಿದ ಒಡಿಯೂರು ಗ್ರಾಮ ವಿಕಾಸ್ ಯೋಜನೆಯ ಸದಸ್ಯರು ಹಾಗೂ ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಸದಸ್ಯರು ಇಂದು ಸ್ವಚ್ಛಗೊಳಿಸಿದರು.

ಬೆಳ್ಳಾರೆ ಠಾಣೆಯಲ್ಲಿ ಎಸ್.ಸಿ, ಎಸ್.ಟಿ ಕುಂದು ಕೊರತೆ ಸಭೆ

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಸಿ,ಎಸ್.ಟಿ ಕುಂದು ಕೊರತೆ ಸಭೆ ಜೂ.25 ರಂದು ನಡೆಯಿತು. ಬೆಳ್ಳಾರೆ ಉಪ ನಿರೀಕ್ಷಕರಾದ ಸುಹಾಸ್ ಅವರು ಸಭೆಯ ಅಹವಾಲು ಸ್ವೀಕರಿಸಿ ಯಾರಿಗಾದರೂ ತೊಂದರೆಗಳಾದರೆ ನನಗೆ ತಿಳಿಸಿ, ತಕ್ಷಣ ಸ್ಪಂದಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಸಾಮಾಜಿಕ ಹೋರಾಟಗಾರರಾದ ನಂದರಾಜ್ ಸಂಕೇಶ್, ರಮೇಶ್ ಕೊಡಂಕಿರಿ, ಬಾಲಚಂದ್ರ...

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಕೈತೋಟ ರಚನೆ

ಸುಕೃತಿ ಮಹಿಳಾ ಕಾಯಕೋತ್ಸವ ತಂಡದ ವತಿಯಿಂದ ಇಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶಾಲಾ ಕೈತೋಟ ರಚನೆ ಮಾಡಲಾಯಿತು. ಕೈತೋಟ ರಚನೆ ಕಾರ್ಯದಲ್ಲಿ ಸಮಿತಿ ಸದಸ್ಯರಾದ ಜಾಹ್ನವಿ ಕಾಂಚೋಡು, ಹರಿಣಾಕ್ಷಿ ಬರೆಮೇಲು, ವಿದ್ಯಾ, ಪ್ರೇಮಲತಾ ಮರುವಂಜ, ಪುಷ್ಪಲತಾ ಬಿ, ಗೀತಾ ಡಿ ಇವರುಗಳು ಪಾಲ್ಗೊಂಡರು. ತೋಟದಲ್ಲಿ ಅಲಸಂಡೆ, ಬದನೆ, ಬಸಳೆ, ಬೆಂಡೆ,ಬೀನ್ಸ್ ಕೃಷಿಗೆ ಸಾಲುಗಳನ್ನು...
Loading posts...

All posts loaded

No more posts

error: Content is protected !!