Ad Widget

ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಹಜ್ ಯಾತ್ರಿಕರ ವ್ಯವಸ್ಥೆಯನ್ನು ಕೇರಳದ ಕಣ್ಣೂರಿಗೆ ಬದಲಿಸಿರುವುದು ಖಂಡನೀಯ: ಟಿ.ಎಂ. ಶಹೀದ್

ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಮುಸಲ್ಮಾನರ ಪವಿತ್ರ ತೀರ್ಥ ಯಾತ್ರೆಯಾದ ಹಜ್ ವ್ಯವಸ್ಥೆಯನ್ನು ಬದಲಿಸಿ ಕೇರಳದ ಕಣ್ಣೂರಿಗೆ ನೀಡಿರುವುದು ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್ ಹೇಳಿದ್ದಾರೆ. ಮೇ.12ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮುಸಲ್ಮಾನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಾ ಬರುತ್ತಿದೆ. ಹಲವಾರು ವರ್ಷಗಳಿಂದ ಇದ್ದ ಹಜ್ ಯಾತ್ರಿಕರಿಗೆ...

ನಾಪತ್ತೆಯಾಗಿದ್ದ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮರ್ಕಂಜದ ನಿವಾಸಿ ಕುಸುಮಾಧರ ಮುಂಡೋಡಿ ಎಂಬವರ ಮೃತದೇಹ ಅರಂತೋಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಸುಮಾಧರರು ಅರಂತೋಡಿನಲ್ಲಿ ವಾಸವಾಗಿದ್ದು, ಎರಡು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದರು. ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಇಂದು ಅವರು ವಾಸವಿದ್ದ ಮನೆಯ ಪಕ್ಕದ ತೋಟದಲ್ಲಿ ಕೊಕ್ಕೋ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ...
Ad Widget

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಭಾಗೀರಥಿ ಮುರುಳ್ಯ ಗೆಲುವು

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಭಾಗೀರಥಿ ಮುರುಳ್ಯಗೆಲುವು ಸಾಧಿಸಿದ್ದಾರೆ. ಭಾಗೀರಥಿ ಮುರುಳ್ಯ 30 ಸಾವಿರಕ್ಕೂ ಅಧಿಕ‌ ಮತಗಳ ಬಹುಮತ ಪಡೆದಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.

ಅರಂತೋಡು : ವ್ಯಕ್ತಿ ಕಾಣೆ – ದೂರು ದಾಖಲು

ಮರ್ಕಂಜದ ನಿವಾಸಿ, ಅರಂತೋಡಿನಲ್ಲಿ ವಾಸವಾಗಿರುವ ಕುಸುಮಾಧರ ಮುಂಡೋಡಿ (೪೩) ಇವರು ಬುಧವಾರ ರಾತ್ರಿಯಿಂದ ಕಾಣೆಯಾಗಿರುತ್ತಾರೆ ಎಂದು ಮನೆಯವರು ಸುಳ್ಯ ಠಾಣೆಯಲ್ಲಿ ಇಂದು ದೂರು ನೀಡಿರುತ್ತಾರೆ. ಇವರ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಿದ್ದಲ್ಲಿ ಹತ್ತಿರದ ಪೋಲೀಸ್ ಠಾಣೆ ಅಥವಾ ದೂರವಾಣಿ ಸಂಖ್ಯೆ 99012 04497 ಗೆ ತಿಳಿಸಬೇಕಾಗಿ ಮನೆಯವರು ವಿನಂತಿಸಿದ್ದಾರೆ.

ಮಣಿಪುರದಲ್ಲಿ ಶಾಂತಿ ನೆಲೆಸಲಿ – ಸರ್ಕಾರ ಮಧ್ಯಪ್ರವೇಶ ಮಾಡಲು ಕೆಎಸ್‌ಎಂಸಿಎ ಸಂಘಟನೆಯ ಅಧ್ಯಕ್ಷ ಬಿಟ್ಟಿ ನೆಡುನೀಲಂ ಒತ್ತಾಯ

ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಎರಡು ಗುಂಪುಗಳ ನಡೆಯುವ ಆಂತರಿಕ ಕಲಹದಿಂದ ಹಲವಾರು ಹಾನಿಯಾಗಿದೆ, ಹಲವರು ಜೀವ ಕಳೆದುಕೊಂಡಿದೆ, ಕೆಲವು ಸಮುದಾಯಗಳ ಮೇಲೂ ದಾಳಿಯಾಗಿದೆ. ಈ ಕಲಹವನ್ನು ತಕ್ಷಣವೇ ನಿಲ್ಲಿಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು ಬೆಳ್ತಂಗಡಿ ಧರ್ಮಪ್ರಾಂತ್ಯದ ಶ್ರೀಸಾಮಾನ್ಯರ ಸಂಘಟನೆಯಾದ ಕೆಎಸ್‌ಎಂಸಿಎ ಒತ್ತಾಯಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಬಿಟ್ಟಿ ನೆಡುನೀಲಂ ಹೇಳಿದ್ದಾರೆ.ಈ ಬಗ್ಗೆ ತುರ್ತುಸಭೆ ನಡೆಸಿ...

ಮೇ.21-22: ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ

ಕಾಯರ್ತೋಡಿ ವಿಷ್ಣುನಗರ ಸೂರ್ತಿಲದಲ್ಲಿ ಶ್ರೀ ರಕ್ತೇಶ್ವರಿ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಮೇ.21ರಿಂದ 22ರ ತನಕ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಡಿ.ವಿ ಲೀಲಾಧರ್‌ರವರು ಮೆ.11ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಎ.೧೮ರಂದು ಸಂಜೆ 6 ಗಂಟೆಗೆ...

ಮೂರು ಹೊತ್ತು ಪಲಾವ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಚುನಾವಣಾ ಸಿಬ್ಬಂದಿಗಳು – ಕೆಲವೆಡೆ ಅದೂ ವಿಳಂಬ

ಸುಳ್ಯ ವಿಧಾನಸಭಾ ಕ್ಷೇತ್ರದ 231 ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಮೇ.9 ರಂದು ಬೂತ್ ಗಳಿಗೆ ಆಗಮಿಸಿದ ಸಿಬ್ಬಂದಿಗಳು ಮೇ.10 ರಂದು ಬೆಳಿಗ್ಗೆಯಿಂದ ಸಂಜೆಯ ತನಕ ಚುನಾವಣಾ ಕೆಲಸದಲ್ಲಿ ನಿರತರಾಗಿದ್ದರು. ಆದರೇ ಈ ಚುನಾವಣೆಯ ಯಶಸ್ಸಿಗೆ ಶ್ರಮಿಸಿದ ನಾವು ಮೂರು ಹೊತ್ತು ಪಲಾವ್ ತಿನ್ನುವಂತಾಗಿದೆ ಎಂದು ಸಿಬ್ಬಂದಿಗಳು ನೋವು ತೋಡಿಕೊಂಡಿದ್ದಾರೆ. ಕೆಲ ಕಡೆಗಳಲ್ಲಿ ಆಹಾರ...

ಮೇ.12 : ಪುಳಿಕುಕ್ಕು ಗಿರಿಯಮಜಲು ಕುಟುಂಬದ ತರವಾಡು ಮನೆ ಗೃಹಪ್ರವೇಶ ಹಾಗೂ ದೈವಗಳ ಪುನರ್ ಪ್ರತಿಷ್ಠೆ

ಪುಳಿಕುಕ್ಕು ಗಿರಿಯಮಜಲು ಕುಟುಂಬದ ತರವಾಡು ಮನೆ ಗೃಹಪ್ರವೇಶ ಹಾಗೂ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಮೇ. 12 ರಂದು ಬೆಳಗ್ಗೆ ಗಂಟೆ 7.17ರಿಂದ 8 26ರ ವರೆಗಿನ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ನಡೆಯಲಿದೆ. ತರವಾಡು ಗೃಹಪ್ರವೇಶ, ಶ್ರೀ ರುದ್ರಚಾಮುಂಡಿ, ಶ್ರೀ ರಕ್ತೇಶ್ವರಿ, ಮಹಿಷಾಂತಾಯ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಕೆಮ್ಮಿಂಜೆ ಲಕ್ಷ್ಮೀಶ...

ಸುಳ್ಯ: ಯಶಸ್ವಿಯಾಗಿ ನಡೆದ ಮತದಾನ ಪ್ರಕ್ರಿಯೆ – ಕಳೆದ ಬಾರಿಗಿಂತ ಕಡಿಮೆ ಮತದಾನ – ನಿರಾಸಕ್ತಿ ತೋರಿದ ಮತದಾರ

ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ. 101856 ಪುರುಷ ಮತದಾರರು ಹಾಗೂ 104173 ಮಹಿಳಾ ಮತದಾರರು ಸೇರಿ ಒಟ್ಟು 206029 ಮತದಾರರಿದ್ದಾರೆ. ಇಂದು ನಡೆದ ಮತದಾನದಲ್ಲಿ 78.94 ಮಂದಿ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು. ಈ ಭಾರಿ ಮತದಾರರು,ಪಕ್ಷದ ಕಾರ್ಯಕರ್ತರು...

ಬೆಳ್ಳಾರೆ : ಯೋಧನ ಕಾಲಿಗೆ ನಮಸ್ಕರಿಸಿದ ಬಾಲಕ

ಬೆಳ್ಳಾರೆಯ ಕೆಪಿಎಸ್ ಸ್ಕೂಲ್ ನಲ್ಲಿರುವ ಮತದಾನ ಕೇಂದ್ರಕ್ಕೆ ಪೋಷಕರ ಜೊತೆ ಮತದಾನ ಕೇಂದ್ರಕ್ಕೆ ಬಂದ ಪುಟ್ಪ ಬಾಲಕ ಹೊರಗೆ ಮತದಾನ ಕರ್ತವ್ಯ ದಲ್ಲಿದ್ದ ಯೋಧರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ. ಈ ಪುಟ್ಟ ಬಾಲಕನ ದೇಶಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
Loading posts...

All posts loaded

No more posts

error: Content is protected !!