Ad Widget

ಕಲ್ಚೆರ್ಪೆ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ

ಸುಳ್ಯಕ್ಕೆ ಮಂಗಳೂರು ಸಂಸದ ಹಾಗೂ ಬಿಜೆಪಿರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇ.30ರಂದು ಭೇಟಿ ನೀಡಿದ್ದರು. ಸುಳ್ಯ ನಗರ ಪಂಚಾಯತ್ ನ ವತಿಯಿಂದ ಕಲ್ಚೆರ್ಪೆಯಲ್ಲಿ ಅಳವಡಿಸಲಾಗಿರುವ ಗ್ಯಾಸಿಫಿಕೇಷನ್ ಯಂತ್ರವನ್ನು ಪರಿಶೀಲಿಸಿದರು. ನಗರ ಪಂಚಾಯತ್ ನ ಈ ವಿನೂತನಪ್ರಯೋಗಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನುಲಾಭದಾಯಕವಾನ್ನಾಗಿ ಮಾಡುವ ಕುರಿತು ಯೋಜನಾವರದಿ ಸಿದ್ಧಪಡಿಸಲು ತಿಳಿಸಿದರು. ಸ್ವಚ್ಛ ಭಾರತ್ ಮಿಷನ್ ಅಥವಾ ಕಂಪೆನಿಗಳ ಸಿ ಎಸ್ ಆರ್ನಿಧಿಯಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸಂಸದರಿಗೆ ತ್ಯಾಜ್ಯ ಸಂಸ್ಕರಣ ಮತ್ತು ಅದರಿಂದ ಉತ್ಪಾದಿಸುತ್ತಿರುವ ಇಂದನ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಪಂಚಾಯತ್ ಸದಸ್ಯರುಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್, ಸರೋಜಿನಿ ಪೆಲತಡ್ಕ, ಶಿಲ್ಪಾ ಸುದೇವ್, ಬುದ್ದ ನಾಯ್ಕ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಜಿನ್ನಪ್ಪ ಪೂಜಾರಿ, ಎಸ್.ಎನ್. ಮನ್ಮಥ, ಸಂತೋಷ್ ಜಾಕೆ, ಶ್ರೀನಾಥ್ ರೈ ಬಾಳಿಲ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!