Ad Widget

ಮತ್ತೆ ರಂಗಕ್ಕೆ “ಸಾಹೇಬ್ರು ಬಂದವೇ!!” ಅರೆಭಾಷೆ ಬಲ್ಲವರಿಗೆ ನಟಿಸಲು ಅವಕಾಶ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕಳೆದ ವರ್ಷ ನಿರ್ಮಿಸಲ್ಪಟ್ಟ, ಖ್ಯಾತ ರಂಗ ನಿರ್ದೇಶಕ ಡಾ|| ಜೀವನ್ ರಾಂ ಸುಳ್ಯ ನಿರ್ದೇಶನದ “ಸಾಹೇಬ್ರು ಬಂದವೇ ” ಪ್ರಥಮ ಪೂರ್ಣಪ್ರಮಾಣದ ಅರೆಭಾಷೆ ನಾಟಕವು ಮತ್ತೆ ರಂಗದ ಮೇಲೆ ಬರಲು ತಯಾರಿ ನಡೆದಿದೆ.. ಇದೇ ಮೇ. 31 ರಿಂದ ಸುಳ್ಯದ ರಂಗಮನೆಯಲ್ಲಿ ಹೊಸ ಕಲಾವಿದರ ಕೂಡುವಿಕೆಯಲ್ಲಿ ತಾಲೀಮು ಆರಂಭಗೊಳ್ಳಲಿದ್ದು, ಜೂನ್ ಮೂರನೇ ವಾರದಂದು ರಾಜ್ಯದಲ್ಲಿ ತನ್ನ ರಂಗಪ್ರಯಾಣ ನಡೆಸಲಿದೆ.

ನಾಟಕದಲ್ಲಿ ಅಭಿನಯಿಸಲು ಆಸಕ್ತಿ ಇರುವ, ಅರೆಭಾಷೆ ಆಡಲು ಬಲ್ಲ ಕಲಾವಿದರಿಗೆ ಭಾಗವಹಿಸಲು ಅವಕಾಶವಿದ್ದು ಕೂಡಲೇ ಅಂದರೆ ಮೇ 30 ರ ಸಂಜೆಯೊಳಗೆ ತಂಡದ ಸಂಚಾಲಕರಾದ ವಿನೋದ್ ಮೂಡಗದ್ದೆ (9535615759)ಅವರನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!