Ad Widget

ನಾರ್ಣಕಜೆಯ ರಾಮಚಂದ್ರರವರಿಗೆ ರಾಷ್ಟ್ರಪತಿಯವರ ಭೇಟಿಗೆ ಅವಕಾಶ

ದೆಹಲಿಯಲ್ಲಿ ಜೂ. 11ರಿಂದ 13 ರವರೆಗೆ ನಡೆಯಲಿರುವ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾರ್ಣಕಜೆಯ ರಾಮಚಂದ್ರರವರಿಗೆ ಅವಕಾಶ ಒದಗಿ ಬಂದಿದೆ. ನೈಜ ದುರ್ಬಲ ಬುಡಕಟ್ಟು ಜೇನು ಕುರುಬ, ಕೊರಗ ಬುಡಕಟ್ಟು ಜನರನ್ನು ರಾಷ್ಟ್ರಪತಿಯವರು ಭೇಟಿ ಮಾಡಿ ಸಂದರ್ಶನ ನಡೆಸಲಿದ್ದಾರೆ.

ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳಿಗೆ ಈ ಅವಕಾಶವಿದ್ದು ಸುಳ್ಯ ತಾಲೂಕು ಕೊರಗ ಸಂಘದ ವತಿಯಿಂದ ರಾಮಚಂದ್ರರವರ ಹೆಸರನ್ನು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವಕಾಶ ಒದಗಿ ಬಂದಿದೆ ಎನ್ನಲಾಗಿದೆ.

ಜೂನ್ ತಿಂಗಳ 11 ರಿಂದ 13 ರವರೆಗೆ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ಕು ಮಂದಿಗೆ ಅವಕಾಶ ಲಭಿಸಿದ್ದು ಅದರಲ್ಲಿ ಓರ್ವವರಾಗಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

ರಾಮಚಂದ್ರರವರು ಕೂಲಿ ಕಾರ್ಮಿಕರಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘಟನೆಯ ಕೋಶಾಧಿಕಾರಿಯಾಗಿ, ಸುಳ್ಯ ತಾಲೂಕು ಸಂಘದ ಸಂಚಾಲಕರಾಗಿ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!