- Saturday
- May 10th, 2025

ಕಳಂಜ ಗ್ರಾಮ ಪಂಚಾಯತಿನ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜ.23 ಸೋಮವಾರದಂದು ಪೂರ್ವಾಹ್ನ ಗಂಟೆ 10.30ಕ್ಕೆ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ಇದರ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಭಾಗವಹಿಸಲಿದ್ದಾರೆ....

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕದಲ್ಲಿ ಜ.26ರಿಂದ ಜ.29ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಜಾತ್ರೋತ್ಸವ ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು ಹಾಗೂ ಭಕ್ತರ ಸಭೆಯು ಇಂದು(ಜ.17) ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಅಭಿಯಾನ ನಡೆಸುವ ಸಲುವಾಗಿ ವಿವಿಧ ತಂಡಗಳನ್ನು ರಚಿಸಲಾಯಿತು. ಸಭೆಯಲ್ಲಿ...

ಅಮರಮುಡ್ನೂರು ಗ್ರಾಮದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಗ್ರಾಮವಾರು ಸಮಿತಿ ರಚನೆ ಗೊಂಡಿತು. ಸಂಚಾಲಕರಾಗಿ ಹೇಮಾವತಿ ತಂಟೆಪಾಡಿ ಹಾಗು ಸಹ ಸಂಚಾಲಕ ರಾಗಿ ಶ್ವೇತಾ ನಾಯರ್ ಕೆರೆ ಆಯ್ಕೆಯಾಗಿದ್ದಾರೆ.. ಸದಸ್ಯ ರುಗಳಾಗಿ ಸೀತಾ ರತ್ನ ಹಿರಿಯಡ್ಕ, ಕಮಲ ಹಾಸನಡ್ಕ,, ಶೋಭಾ ಕಾನಡ್ಕ,. ಸವಿತಾ ಚಿಲ್ಪಾರ್. ರೇಷ್ಮಾ ಮೇರ್ಕಜೆ ಆಯ್ಕೆ ಯಾದರು. ಈ ಸಂದರ್ಭದಲ್ಲಿ...

ಅಜ್ಜಾವರ ಗ್ರಾಮದ ಕಲ್ತಡ್ಕ ತರವಾಡು ಮನೆಯಲಿ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ಧರ್ಮ ನಡಾವಳಿ ನೆರವೇರಿತು.ಕಲ್ತಡ್ಕ ತರವಾಡಿನ ನವೀಕೃತಗೊಂಡ ದೈವಸ್ಥಾನದಲ್ಲಿ ಜ.11 ರಿಂದ 16 ರವರೆಗೆ ಶ್ರೀ ಧರ್ಮಧೈವ ಶ್ರೀ ಅಣ್ಣಪ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವವು ಬಂಬ್ರಾಣ ಶ್ರೀ ಬಿ ಶಂಕರನಾರಾಯಣ ಕಡಮಣ್ಣಾಯ ತಂತ್ರಿಗಳ...

ಪೋಲೀಸ್ ಹೊರಠಾಣೆ ಕಲ್ಲುಗುಂಡಿ ಇವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಇಂದು ನಡೆಯಿತು. ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಎ.ಎಸ್.ಐ ನಾಗೇಶ್, ಪೋಲೀಸ್ ಕಾನ್ ಸ್ಟೇಬಲ್ ರಾಜು , ಗೃಹರಕ್ಷಕದಳದ ರಾಮ್ ರಾಜ್ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಪೋಷಕರ ಸಭೆ ಇಂದು ನಡೆಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ ರವರು ಅಧ್ಯಕ್ಷತೆ ವಹಿಸಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ವಿವರಿಸಿ ಅತ್ಯುತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಕೆ. ಪ್ರಾಸ್ತಾವಿಕವಾಗಿ...

ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1.23 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಕೇಂದ್ರೀಯ ರಬ್ಬರ್ ಮಂಡಳಿಯ ಸದಸ್ಯರಾದ ಮುಳಿಯ ಕೇಶವ ಭಟ್,...

ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಜ. 15 ರಂದು ಚೊಕ್ಕಾಡಿಯ ಅಮೈ ಚಾವಡಿಯಲ್ಲಿ ಶ್ರಮದಾನ ಮಾಡಲಾಯಿತು. ಶ್ರಮದಾನ ದಲ್ಲಿ ಸಂಘಟನೆಯ ಸದಸ್ಯರುಗಳಾದ ಪ್ರದೀಪ್ ಬೊಳ್ಳೂರು, ಹರ್ಷಿತ್ ದಾತಡ್ಕ, ರಜನಿಕಾಂತ್ ಉಮ್ಮಡ್ಕ, ಪ್ರವೀಣ್ ಕುಲಾಲ್, ಮಿಥುನ್ ಕೆರೆಗದ್ದೆ, ರಾಜೀವಿ ಗೊಲ್ಯಾಡಿ, ಜಯಪ್ರಸಾದ್ ಸಂಕೇಶ, ಪ್ರಸಾದ್ ಬೊಳ್ಳೂರು, ಶಶಿಕಾಂತ್, ಪ್ರಸನ್ನ ಕುಮಾರಿ ಚಾಮಡ್ಕ ಇವರುಗಳು ಭಾಗವಹಿಸಿ...

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಐದು ಜನ ಭಾರತೀಯ ನಾಗರಿಕರನ್ನು ರಕ್ಷಿಸಿದ ಅರಂತೋಡು ಓಟೆಡ್ಕ ಆಕಾಶ್ ಅವರನ್ನು ಭಾರತೀಯ ಭೂಸೇನಾಧಿಕಾರಿ ಜನರಲ್ ಮೇಜರ್ ರವರು ಭಾರತೀಯ ಸೇನಾ ದಿನಾಚರಣೆ ಆದ ಇಂದು (ಜ. 15 ರಂದು) ಗೌರವಿಸಿದರು.ಕಳೆದ ಬಾರಿ ಅವರು ಬೆಸ್ಟ್ ಫೈರರ್ ಪ್ರಶಸ್ತಿ ಪಡೆದುಕೊಂಡಿದ್ದರು. ಇವರು ಅರಂತೋಡು ಗ್ರಾಮದ ಓಟೆಡ್ಕ ಕಮಲಾಕ್ಷ ಮತ್ತು ದಮಯಂತಿ ದಂಪತಿಗಳ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಆರಂಭಗೊಂಡಿದ್ದು, ಇಂದು(ಜ.16 ರಂದು) ಬೆಳಿಗ್ಗೆ ಗಂಟೆ 9-10 ರಿಂದ 9-45 ರ ಕುಂಭ ಲಗ್ನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ಕಲ್ಲುರ್ಟಿ ಮತ್ತು ಕಲ್ಕುಡ ದೈವದ ಪ್ರತಿಷ್ಠೆ ನೆರವೇರಿತು. ಈ ಸಂದರ್ಭದಲ್ಲಿ ಪವಿತ್ರವಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ...

All posts loaded
No more posts