Ad Widget

ಜ.26-ಜ.29:ಅಯ್ಯನಕಟ್ಟೆ ಜಾತ್ರೋತ್ಸವ ;ಬಾಳಿಲ ಮುಪ್ಪೇರ್ಯ ಮಹಿಳೆಯರಿಂದ ಶ್ರಮಸೇವೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವವು ಜ.26ರಿಂದ ಜ.29ರ ವರೆಗೆ ಜರುಗಲಿದ್ದು, ಇಂದುಬಾಳಿಲ ಮುಪ್ಪೇರ್ಯ ಮಹಿಳೆಯರಿಂದ ಶ್ರಮಸೇವೆ ನಡೆಯಿತು.

ಬಿದ್ದು ಹೋಗಿರುತ್ತದೆ

ಪಂಜ -ಏನೆಕಲ್ಲು ಹೋಗುವ ದಾರಿ ಮಧ್ಯೆ ರೂ. 15,000 (ರಿಬ್ಬನ್‌ನಲ್ಲಿ ಕಟ್ಟಿದ್ದು) ಬಿದ್ದು ಹೋಗಿರುತ್ತದೆ. ಸಿಕ್ಕಿದವರು ಕೂಡಲೇ 7022359969 ಈ ನಂಬರಿಗೆ ಸಂಪರ್ಕಿಸಬೇಕಾಗಿ ವಿನಂತಿ
Ad Widget

ಸುಳ್ಯ : ಬಿಜೆಪಿ ವತಿಯಿಂದ ಜ. 21 ರಿಂದ 29 ರವರೆಗೆ ವಿಜಯ ಸಂಕಲ್ಪ ಅಭಿಯಾನ

ಮುಂಬರುವ ವಿಧಾನಸಭಾ ಚುನಾವಣೆಗೆ ವ್ಯವಸ್ಥಿತವಾಗಿ ತಯಾರಿ ಪ್ರಯುಕ್ತ ಸುಳ್ಯ ಕ್ಷೇತ್ರದಾದ್ಯಂತ ಈಗಾಗಲೆ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ.ಮುಂದಿನ ಹಂತವಾಗಿ ಕ್ಷೇತ್ರದಾದ್ಯಂತ ಜನವರಿ 21 ರಿಂದ 29 ರವರೆಗೆ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ನಡೆಯಲಿದೆ‌. ಅಭಿಯಾನದಲ್ಲಿ ವಿವಿಧ ಸ್ತರದ ಜವಾಬ್ದಾರಿಯ ಪ್ರಮುಖರು, ಕಾರ್ಯಕರ್ತರು ಕ್ಷೇತ್ರದ 231 ಬೂತ್ ಗಳ ಎಲ್ಲಾ ಮನೆಗಳ ಸಂಪರ್ಕ, ಪ್ರತೀ...

ಹರಿಹರ ಪಲ್ಲತ್ತಡ್ಕ : ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಹಾಗೂ ಸರಕಾರಿ ಪ್ರೌಢಶಾಲೆ ಹರಿಹರ ಪಲ್ಲತ್ತಡ್ಕ ಇವುಗಳ ಸಹಭಾಗಿತ್ವದಲ್ಲಿ ಹರಿಹರ ಪಲ್ಲತ್ತಡ್ಕ ಪ್ರೌಢಶಾಲೆಯಲ್ಲಿ ಜ.19 ಮತ್ತು 20 ರಂದು 2 ದಿನಗಳ ಕಾಲ ಹರಿಹರ ಪಲ್ಲತ್ತಡ್ಕ ಕ್ಲಸ್ಟರ್ ನ 2022-23ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು.ಜ.19...

ಚೆಂಬು : ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್ ಗೆ ಬಿದ್ದ ಯುವಕ ಮೃತ್ಯು

ಪಂಚಾಯತ್ ನ ವಾಟರ್ ಮ್ಯಾನ್ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್ ಒಳಗಡೆ ಬಿದ್ದು ಮೃತಪಟ್ಟ ಘಟನೆ ಇಂದು ಸಂಜೆ ಚೆಂಬು ಗ್ರಾಮದಿಂದ ವರದಿಯಾಗಿದೆ.ಯು.ಚೆಂಬು ಗ್ರಾಮದ ಮಾರ್ಪಡ್ಕ ನಿವಾಸಿ ಬೊಳುಗಲ್ಲು ಆನಂದ ರವರ ಪುತ್ರ ನಿತಿನ್ (26) ಮೃತಪಟ್ಟ ದುರ್ದೈವಿ. ಪಂಚಾಯತ್ ಟ್ಯಾಂಕ್ ನಿಂದ ನೀರು ಬಿಡಲು ತೆರಳಿದ ನಿತಿನ್ ಬಾರದೇ ಇದ್ದಾಗ...

ಜ.21ರಂದು ಸಂಪಾಜೆಯಲ್ಲಿ ದಿ.ಬಾಲಚಂದ್ರ ಕಳಗಿ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ

ಆದರ್ಶ ಪ್ರೆಂಡ್ಸ್ ಚೆಡಾವು, ಸಂಪಾಜೆ ಕೊಡಗು, ಬಾಲಚಂದ್ರ ಕಳಗಿ ಅಭಿಮಾನಿ ಬಳಗ ಸಂಪಾಜೆ ಮತ್ತು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ಕುಶಾಲನಗರ ಇದರ ಜಂಟಿ ಆಶ್ರಯದಲ್ಲಿ ದಿ. ಬಾಲಚಂದ್ರ ಕಳಗಿ ಸ್ಮರಣಾರ್ಥ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ಜ. 21 ಶನಿವಾರದಂದು ಸಂಪಾಜೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ...

ಜಯಪ್ರಕಾಶ್ ಮೋಂಟಡ್ಕರಿಗೆ ರಾಜ್ಯ ಯುವ ಪ್ರಶಸ್ತಿ

ಕರ್ನಾಟಕ ಸರಕಾರ ,ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ,ರಾಪ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ವತಿಯಿಂದ, ವ್ಯವಸ್ಥಾಪನಾ ಸಮಿತಿ, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇದರ ಸಹಕಾರದೊಂದಿಗೆ ಸುಬ್ರಹ್ಮಣ್ಯ...

ಜ.26-ಜ.29: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ "ಅಯ್ಯನಕಟ್ಟೆ ಜಾತ್ರೆ" ಜ.26 ಗುರುವಾರದಿಂದ ಜ.29 ಆದಿತ್ಯವಾರದವರೆಗೆ ಜರುಗಲಿದೆ. ಜ.20ರಂದು ಬೆಳಗ್ಗೆ ಗಂಟೆ 11.30ಕ್ಕೆ ಉಗ್ರಾಣ ಮುಹೂರ್ತ ಹಾಗೂ ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ.ಜಾತ್ರೋತ್ಸವದ ಅಂಗವಾಗಿ ಜ.26ರಂದು ಬೆಳಗ್ಗೆ 9.30ರಿಂದ ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ...

ದೇವಚಳ್ಳ ಕ್ಲಸ್ಟರ್ ನ ಕಲಿಕಾ ಹಬ್ಬ ಕಾರ್ಯಕ್ರಮದ ಉದ್ಘಾಟನೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ದೇವಚಳ್ಳ ಹಾಗೂ ಸರಕಾರಿ ಪ್ರೌಢಶಾಲೆ ಎಲಿಮಲೆ ಇವುಗಳ ಸಹಭಾಗಿತ್ವದಲ್ಲಿ ದೇವಚಳ್ಳ ಕ್ಲಸ್ಟರ್ ನ 2022-23ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜ.19 ರಂದು ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ನಡೆಯಿತು.ಜ.19...

ಜ.29 : ಸುಬ್ರಹ್ಮಣ್ಯದಲ್ಲಿ ಹಿಂದೂ ಹೃದಯ ಸಂಗಮ – ಇಂದು ಕಾರ್ಯಾಲಯ ಉದ್ಘಾಟನೆ ಹಾಗೂ ಆಮಂತ್ರಣ ಬಿಡುಗಡೆ

ಸುಬ್ರಹ್ಮಣ್ಯದಲ್ಲಿ ಜನವರಿ 29 ರಂದು ನಡೆಯಲಿರುವ ಹಿಂದೂ ಹೃದಯ ಸಂಗಮದ ಪೂರ್ವಭಾವಿಯಾಗಿ ಕಾರ್ಯಾಲಯ ಉದ್ಘಾಟನೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇಂದು ನಡೆದ ಕಾರ್ಯಕ್ರಮದಲ್ಲಿ ಕಿಶೋರ್ ಶಿರಾಡಿ, ಹೇಮಚಂದ್ರ, ಕೌಶಿಕ್ ಕೊಡಪಾಲ, ಚಿದಾನಂದ ಕಂದಡ್ಕ, ರಾಜೇಶ್ ಎನ್ ಎಸ್ , ಶುಬಾಶಿನಿ ಮತ್ತಿತರರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!