- Sunday
- April 20th, 2025

ಉದ್ಯಮಿ ಸುಳ್ಯದ ರೂಪ ಬಾರ್ ಮಾಲಕರಾದ ಸುಂದರ ರಾವ್ ರವರ ಪುತ್ರ ಸಂದೀಪ್ ರಾವ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬೆನಕಾ ಕ್ರೀಡಾ ಮತ್ತು ಕಲಾ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಮೃತರು ತಂದೆ,ತಾಯಿ, ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
ಪ್ರತಿಷ್ಠಿತ ಸ್ವದೇಶಿ ಸಂಸ್ಥೆಯಾಗಿರುವ ಮೋದಿಕೇರ್ ಸಂಸ್ಥೆಯ ಕಾರ್ಯಚಟುವಟಿಕೆ, ಬೆಳವಣಿಗೆ ಹಾಗೂ ಸ್ವದೇಶಿ ಉತ್ಪನ್ನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನ.18 ರಂದು ಸುಬ್ರಹ್ಮಣ್ಯದ ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಸ್ವದೇಶಿ ಉತ್ಪನ್ನಗಳ ಬಗ್ಗೆ, ಸ್ವ ಉದ್ಯೋಗ ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯದ ಡಿಸ್ಟ್ರಿಬ್ಯೂಟ್ ಪಾಯಿಂಟ್ ನ ಮುರಳೀಕೃಷ್ಣ ಕಾಮತ್ ತಿಳಿಸಿದ್ದಾರೆ. ಹೆಚ್ಚಿನ...

ಕರ್ನಾಟಕ ನಾಟ್ಯ ಶಾಂತಲೆ ರತ್ನ ಪ್ರಶಸ್ತಿಯನ್ನು ಅವನಿ ಎಂ ಎಸ್ ಪಡೆದುಕೊಂಡರು. ನ.5 ಮತ್ತು 6ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸುಕ್ಷೇತ್ರ ಮಸೂದಿ ಶ್ರೀ ಜಗದೀಶ್ವರ ಹಿರೇಮಠದ ಜಗದೀಶ್ವರ ಮಂದಿರದ ದ್ವಾದಶ ವಾರ್ಷಿಕೋತ್ಸವ ಹಾಗೂ ನಿಂಬಾಳದ ಮೌನ ತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ 80ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ...

ಗುತ್ತಿಗಾರಿನಲ್ಲಿ ಕಳೆದ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿವರಾಮ ದೇವ ಮಾಲಕತ್ವದ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಮತ್ತು ಜೆರಾಕ್ಸ್ ಇದರ ಸಹಸಂಸ್ಥೆಯಾದ ಪಂಜದ ವಾಣಿಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಮತ್ತು ಜೆರಾಕ್ಸ್ ಸಂಸ್ಥೆಯು ಒಂದು ವರ್ಷವನ್ನು ಪೂರೈಸುತ್ತಿದ್ದು ಆ ಪ್ರಯುಕ್ತ ನ.12 ರಂದು ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ...

ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯು ೨೦೨೧-೨೦೨೨ನೇ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಾಶ್ವತ್ ಕೆ.ಎಸ್ ರಾಜ್ಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.ಇವರು ವಿರಾಜಪೇಟೆ ತಾಲೂಕು, ಸಿದ್ದಾಪುರ,ಕರಡಿಗೋಡು ಗ್ರಾಮದ ಕುಕ್ಕನೂರು ಸೂರಜ್ ಹಾಗೂ ಚಂಚಲ್ ದಂಪತಿಗಳ ಪುತ್ರ....

ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆ ಸುಳ್ಯ ಇದರ ತರಬೇತಿ ಅಧಿಕಾರಿಯಾಗಿದ್ದ ದಿನೇಶ್ ಮಡ್ತಿಲ ಅವರು ಉಪಪ್ರಾಂಶುಪಾಲರಾಗಿ ನ.೭ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಿನೇಶ್ ಮಡ್ತಿಲರನ್ನು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿದ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ ಯವರು ದಿನೇಶ್...

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಕನಕ ಜಯಂತಿ ನ.11ರಂದು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು ಹಾಗೂ ಪೌರರಕ್ಷಣಾ ಪಡೆ ದ.ಕ ಜಿಲ್ಲೆ ಇದರ ಮುಖ್ಯ ಪಾಲಕರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುದರ ಮೂಲಕ ಕನಕ ಜಯಂತಿ ಆಚರಣೆಗೆ ಚಾಲನೆ ನೀಡಿದರು....

ಬೊಳುಬೈಲು, ನ.5: ಪೀಸ್ ಸ್ಕೂಲ್, ಬೊಳುಬೈಲು, ಸುಳ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ 'ಲಸಿಕಾ ಶಿಬಿರ' ಕಾರ್ಯಕ್ರಮವು ಪೀಸ್ ಸ್ಕೂಲ್ ವಠಾರದಲ್ಲಿ ಜರುಗಿತು. ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ, ಇದರ ಆರೋಗ್ಯಾಧಿಕಾರಿಯಾದ ಡಾ.ಗಿರೀಶ್ ಮುಂದಿನ ತಿಂಗಳಿನಲ್ಲಿ ಒಂದರಿಂದ ಹದಿನೈದು ವಯಸ್ಸಿನ ಮಕ್ಕಳಿಗೆ ನೀಡಲಾಗುವ ಜೆಇ(ಜಪಾನೀಸ್ ಎನ್ಸಫಾಲಿಟಿಸ್) ಲಸಿಕೆಯು ಪಡೆಯುವ ಮಹತ್ವದ...

ಪೆರ್ನಾಜೆ: ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆ ವಠಾರದಲ್ಲಿ ನ13 ರಂದು ನಡೆಯುವ ವಿವಿಧ ಕವಿಗೋಷ್ಠಿ ವಿಚಾರಗೋಷ್ಠಿ ಸಭಾ ಕಾರ್ಯಕ್ರಮದಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮ ದಲ್ಲಿ ಸವಿತಾ ಕೋಡಂದೂರು ಸಂಗೀತ ಬರಹ ಕ್ಷೇತ್ರದಲ್ಲಿ ಸನ್ಮಾನಕ್ಕೆ ಆಗಿದ್ದಾರೆ.ಗ್ರಾಮೀಣ ಕಲಾಪ್ರತಿಭೆ, ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ...

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗಡಿ ಪ್ರದೇಶ ಕಲ್ಲಪ್ಪಳ್ಳಿ-ಬಾಟೋಳಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಗುದ್ದಲಿ ಪೂಜೆಯನ್ನು ನ.11ರಂದು ನೆರವೇರಿಸಲಾಯಿತು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರರ ವಿಶೇಷ ಅನುದಾನದಲ್ಲಿ ಸುಮಾರು 110 ಮೀಟರ್ ಗಳಷ್ಟು ಕಾಮಗಾರಿ ನಡೆಯುತ್ತಿದೆ. ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಸ್ಥಳೀಯ ಮುಖಂಡ ನಂದಕುಮಾರ್,ಸುಧಾಕರ ಬಾಟೋಳಿ,ಗುತ್ತಿಗೆದಾರ ಪುನೀತ್ ಕುಂಚಡ್ಕ ಹಾಗೂ ಸ್ಥಳೀಯ...

All posts loaded
No more posts