- Wednesday
- April 2nd, 2025

ಕಳೆದ ಕೆಲ ವರ್ಷಗಳಿಂದ ಕೋವಿಡ್ ನಿಂದಾಗಿ ದಸರಾ ಉತ್ಸವ ನಡೆಸಲು ಸಮಸ್ಯೆಯಾಗಿತ್ತು. ಈ ಬಾರಿಯ ದಸರಾಕ್ಕೆ ಸರಕಾರದ ವತಿಯಿಂದ ಹೆಚ್ಚಿನ ಅನುದಾನ ಒದಗಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಜತೆಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಎಲ್ಲಾ ಕಡೆಯ ದಸರಾ ಉತ್ಸವಗಳಿಗೆ ಒಂದೇ ರೀತಿ ಅನುದಾನ ನೀಡುತ್ತೇವೆ ಎಂದು ಸಚಿವರಾದ ಎಸ್ ಅಂಗಾರ...

ಕಳೆದ ಒಂದೆರಡು ತಿಂಗಳಿನಿಂದ ಕುಸಿತದ ಹಂತದಲ್ಲಿರುವ ರಬ್ಬರ್ ಧಾರಣೆ 6 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಆರ್ಎಸ್ಎಸ್-4 ಗುಣಮಟ್ಟದ ರಬ್ಬರ್ಗೆ ಕೆಜಿಗೆ 144 ರೂ.ನಿಂದ 147 ರೂ.ವರೆಗೆ ದರ ಸಿಗುತ್ತಿದೆ. ಮಳೆಗಾಲದಲ್ಲಿ ರಬ್ಬರ್ ಉತ್ಪಾದನೆ ಕಡಿಮೆಯಾಗುವ ಕಾರಣ ರಬ್ಬರ್ ಶೀಟ್ ಧಾರಣೆಯಲ್ಲಿ ಏರಿಕೆಯಾಗಬೇಕಿತ್ತು. ಆದರೆ ಕಳೆದ ಒಂದೆರಡು ತಿಂಗಳಿನಿಂದ ಕುಸಿತದ ಹಂತದಲ್ಲಿರುವ ರಬ್ಬರ್ ಧಾರಣೆ ಆರು...

ಸುಳ್ಯ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ರಿನೀವಲ್ ಮಾಡುವ ಕ್ಯಾಂಪ್ ಸೆ.27 ರಂದು ಜಂಟಿಯಾಗಿ ನಡೆಯಿತು. ತಾಲ್ಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, ತಾಲ್ಲೂಕು ಪಂಚಾಯತ್ ನ ಎಂ.ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನ ಇಲಾಖೆಯಯು.ರ್.ಡಬ್ಲ್ಯೂ ಪ್ರವೀಣ್ ನಾಯಕ್, ಆರೋಗ್ಯ ಅಧಿಕಾರಿ ಬಸವರಾಜ್,...

ಯುವಜನ ಸಂಯುಕ್ತ ಮಂಡಳಿ ಮತ್ತು ಯುವಜನ ಸೇವಾ ಸಂಸ್ಥೆ ಇದರ ಸಹಯೋಗದೊಂದಿಗೆ ಸುಳ್ಯ ತಾಲೂಕು ಮಟ್ಟದ 153ನೇ ವರ್ಷದ “ಗಾಂಧಿ ಜಯಂತಿ” ಆಚರಣೆ ಮತ್ತು 2022ರ 'ಗಾಂಧಿ ಸ್ಮೃತಿ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ ಸೆ. ನಡೆಯಲಿದೆ.ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಡಾ|| ಬಿ. ಗಿರೀಶ್ ಭಾರದ್ವಾಜ್ ಉದ್ಘಾಟನೆ ನೆರವೇರಿಸಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಜನ...

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಸೆ. 29 ರಂದು ನಡೆಯಿತು. ಕಾರ್ಯಕ್ರಮವನ್ನು ಮೋಹನಾಂಗಿ ಬಟ್ಟೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪಶುವೈದ್ಯ ವೆಂಕಟಾಚಲಪತಿ ಸಾಕು ನಾಯಿಗಳಿಗೆ ಕೊಡುವ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಲೋಚನ ದೇವ, ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಪಿಡಿಓ ಗುರುಪ್ರಸಾದ್ ಉಪಸ್ಥಿತರಿದ್ದರು.

ಭಾರತ್ ಜೋಡೋ ಯಾತ್ರೆಯು ಅಂಗವಾಗಿ ಗುಂಡ್ಲುಪೇಟೆಯಲ್ಲಿ ನಡೆಯುವ ಪಾದಯಾತ್ರೆಗೆ ಪಾಲ್ಗೊಳ್ಳಲು ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು 20ಬಸ್ ಗಳಲ್ಲಿ 600ಕ್ಕೂ ಹೆಚ್ಚು ಕಾರ್ಯಕರ್ತರು ತೆರಳಿದ್ದಾರೆ. ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಮ ಶುಭ ಹಾರೈಸಿದರು.

ಸುಳ್ಯದ ಖ್ಯಾತ ಜ್ಯೋತಿಷಿ , ಸಾಹಿತಿ , ಚಿತ್ರನಿರ್ದೇಶಕ , ಗಾಯಕ , ಚಿತ್ರನಟ , ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ . ರಾಯಚೂರು ಜಿಲ್ಲೆಯ ನಾಗರಹಾಳ ಹಜರತ್ ದಾವಲಮಲಿಕ್ ಉರುಸ್ ಜಾತ್ರೆಯ ಪ್ರಯುಕ್ತ ನಡೆಯುವ ಸರ್ವಧರ್ಮ ಭಾವೈಕ್ಯ ಮಹಾ ಸಮ್ಮೇಳನದಲ್ಲಿ ಶಾಸಕರ , ಶಿವಶರಣರ...

ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್ನ ನಲ್ಲಿ ಡಾ.ಚೈತ್ರ ಭಾನು ಮಾಲಕತ್ವದ ಮೈತ್ರೇಯ ಕ್ಲಿನಿಕ್ ಇಂದು ಶುಭಾರಂಭಗೊಂಡಿತು. ಕ್ಲಿನಿಕ್ ನ ಉದ್ಘಾಟನೆಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಬಾಳಿಕಳ ನೆರವೇರಿಸಿ ಶುಭ ಹಾರೈಸಿದರು. ನಿವೃತ್ತ ಉಪನ್ಯಾಸಕ ವಾಸುದೇವ ಗೌಡ ಪಡ್ಪು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸುಲೋಚನ ದೇವ, ನೆಲ್ಲೂರು ಕೆಮ್ರಾಜೆ...

ಅಜ್ಜಾವರ ಗ್ರಾಮದ ಮೇನಾಲ ಡಾ||ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಸಂವಿಧಾನ ಶಿಲ್ಪಿ ಡಾ||ಬಿ.ಆರ್ ಅಂಬೇಡ್ಕರ್ ಅವರ ಭಾವುಟವನ್ನು ಅಜ್ಜಾವರ ಪಂಚಾಯತ್ ತೆರವುಗೊಳಿಸಿದ್ದ ಘಟನೆ ನಡೆದಿದ್ದು ಈ ಬಗ್ಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಸಮಿತಿಯ ಜಿಲ್ಲಾ ಮತ್ತು ಸುಳ್ಯ ತಾಲೂಕು,ಅಜ್ಜಾವರ ಘಟಕ ಸಮಿತಿಯ ಪದಾಧಿಕಾರಿಗಳು ಪಂಚಾಯತ್ ಗೆ ಭೇಟಿ ನೀಡಿ ಗ್ರಾ. ಪಂ.ಅಧ್ಯಕ್ಷರು,...
ದೇವಚಳ್ಳ ಗ್ರಾಮದ ತಳೂರು ಆಚಾರಿಕಾನ ಮನೆ ಎಂಬಲ್ಲಿನ ವ್ಯಕ್ತಿ ಪವನ್ ಕುಮಾರ್ ಬಾಡಿಗೆ ಮನೆ ಮಾಡಿಕೊಂಡಿರುವ ವಿವಾಹಿತ ಮಹಿಳೆಯೋರ್ವಳಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ಬಳಿಕ , ಬಲಾತ್ಕಾರವಾಗಿ ಅತ್ಯಾಚಾರವನ್ನು ಎಸಗಿರುತ್ತಾನೆ ಎಂದು ಆರೋಪಿಸಿ, ನೊಂದ ಮಹಿಳೆಯು ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಯವರಿಗೆ ದೂರು ನೀಡಿದ್ದರು. ಆರೋಪಿ ಪವನ್ ಕುಮಾರ್ ವಿರುದ್ಧ ನೀಡಿದ ದೂರಿನನ್ವಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ...

All posts loaded
No more posts