
ಗುತ್ತಿಗಾರಿನ ಶ್ರೀ ಮುತ್ತಪ್ಪ ಕಾಂಪ್ಲೆಕ್ಸ್ ನಲ್ಲಿ ವರ್ಷಿತ್ ಪೂಜಾರಿಮನೆ ಹಾಗೂ ಸುರೇಶ್ ಮುತ್ಲಾಜೆ ಇವರ ಮಾಲಕತ್ವದ ಅಕ್ಷಯ ಟ್ರೇಡರ್ಸ್ ಅಡಿಕೆ ಮತ್ತು ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಸೆ.26 ರಂದು ಶುಭಾರಂಗೊಂಡಿತು. ಖರೀದಿ ಕೇಂದ್ರವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಇಲ್ಲಿ ಕೃಷಿಕರ ಅಡಿಕೆ,ಇತರ ಕೃಷಿ ಉತ್ಪನ್ನಗಳ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೆಂಕಟ್ ವಳಲಂಬೆ, ಬಾಲಕೃಷ್ಣ ಗೌಡ ಮುತ್ಲಾಜೆ, ಕುಸುಮಾವತಿ ತಳೂರು, ಜೀವನ್ ಕುಮಾರ್ ತಳೂರು, ಶಿವಕುಮಾರ ಶಿರೂರು ಪೂಜಾರಿಮನೆ , ಬೆಳ್ಯಪ್ಪ ಗೌಡ ಕುತ್ಯಾಳ, ಜೀವಿತಾ ಮುತ್ಲಾಜೆ ಉಪಸ್ಥಿತರಿದ್ದರು.