Ad Widget

ಪೈಚಾರು : ಪ್ರಯಾಣಿಕರ ತಂಗುದಾಣವನ್ನು ಪುನರ್ ನಿರ್ಮಿಸಿಕೊಡುವಂತೆ ತಹಶೀಲ್ದಾರರಿಗೆ ಮನವಿ

ಪೈಚಾರು ಬಳಿಯ ಶಾಂತಿನಗರ ತಿರುವು ಬಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಗೊಳಿಸುವ ಸಂದರ್ಭ ಸ್ಥಳದಲ್ಲಿದ್ದ ಪ್ರಯಾಣಿಕರ ತಂಗುದಾಣವನ್ನು ತೆರವುಗೊಳಿಸಲಾಗಿತ್ತು.ಇದರಿಂದ ಶಾಂತಿನಗರ ಹಾಗೂ ಬೆಟ್ಟಂಪಾಡಿ ಪರಿಸರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್ ಗೆ ಕಾಯುವ ಸಂದರ್ಭ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗುತ್ತಿದೆ.ಈಗಾಗಲೇ ಮಳೆಗಾಲ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ವಾಹನಕ್ಕಾಗಿ ಕಾಯುವ ಸಂದರ್ಭ ತಂಗುದಾಣ...

ಸುಳ್ಯ : ಮತ್ತೆ ಕಂಪಿಸಿದ ಭೂಮಿ

ಕಳೆದಎರಡು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಮುಂಜಾನೆ 7.46 ರ ಸುಮಾರಿಗೆ ಕಂಪನವಾಗಿದ್ದು ಜನ ಭಯಬೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ. ಪೆರಾಜೆ, ಸುಳ್ಯ , ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಜಾಲ್ಸೂರು, ಆಲೆಟ್ಟಿ, ಐವರ್ನಾಡು, ಅಮರಮುಡ್ನೂರು, ಸಂಪಾಜೆ ಸೇರಿದಂತೆ ಬಹುತೇಕ ಕಡೆ ಭೂಮಿ...
Ad Widget

ಬೆಳ್ಳಾರೆ: ಮತ್ತೆ ವಿಲೇವಾರಿಯಾಗದಿರುವ ಸಂತೆ ಮಾರುಕಟ್ಟೆ ತ್ಯಾಜ್ಯ – ಶೀಘ್ರ ವಿಲೇವಾರಿಯಾಗದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆಗೆ ನಿರ್ಧಾರ

ಕಳೆದ ವಾರವಷ್ಟೇ ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಸಂತೆ ಮಾರುಕಟ್ಟೆಯ ತ್ಯಾಜ್ಯ ಸೂಕ್ತ ಸಮಯಕ್ಕೆ ವಿಲೇವಾರಿಯಾಗದೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿಯವರು ದ.ಕ.ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ನೀಡಿದ ಬಳಿಕ ವಿಲೇವಾರಿಯಾಗಿ ಸುದ್ದಿಯಾಗಿತ್ತು. ಇದೀಗ ಕಳೆದ ಶನಿವಾರ ಬೆಳ್ಳಾರೆಯಲ್ಲಿ ವಾರದ ಸಂತೆ ನಡೆದಿದ್ದು, ಸಂತೆ ನಡೆದ ಬಳಿಕ ಮಾರುಕಟ್ಟೆಯಲ್ಲಿ ಮತ್ತೆ ವಿಲೇವಾರಿಯಾಗದೆ...

ಶೌಚಾಲಯ ಕಟ್ಟಡ ಸ್ಥಳ ಬದಲಾಯಿಸಿ ನಿರ್ಮಿಸಿದ್ದಾರೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ – ಮೇಲಾಧಿಕಾರಿಗಳ ಉತ್ತರ ಬರುವವರೆಗೆ ಕಾಯಲು ನಿರ್ಧರಿಸಿ ಪ್ರತಿಭಟನೆ ಹಿಂತೆಗೆತ

ಸುಳ್ಯ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸುಳ್ಯ ಕೊಡಿಯಾಲ ಬೈಲು ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲು ಹಿಂದೂ ರುದ್ರಭೂಮಿ ಒಳಗಡೆ ಮಾಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ, ಹಾಗೂ...

ವಳಲಂಬೆಯಲ್ಲಿ ಸಂಭ್ರಮದಿಂದ ನಡೆದ ಭಜನಾ ಮಹೋತ್ಸವ ;
ಭಜನೆಯಿಂದ ಧರ್ಮದ ಉಳಿವು- ಪ್ರವೀಣ್ ಕುಮಾರ್

ಭಜನೆಯಿಂದ ಸಂಸ್ಕಾರ ಬೆಳೆಯುವುದರ ಜೊತೆಗೆ ಧರ್ಮ ಉಳಿಯುತ್ತದೆ, ಭಜಕರ ಒಗ್ಗೂಡುವಿಕೆಯಿಂದ ಮನೆ,ಮನದಲ್ಲಿ ಧರ್ಮದ ಜಾಗೃತಿ ಮೂಡುತ್ತದೆ ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ದ.ಕ ಜಿಲ್ಲೆ-2ರ ಪ್ರವೀಣ್ ಕುಮಾರ್ ಹೇಳಿದರು. ಅವರು ಸುಳ್ಯ ತಾಲೂಕು ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಜನೋತ್ಸವ ಸಮಿತಿ ವಳಲಂಬೆ ಹಾಗೂ ತಾಲೂಕಿನ ಭಜನಾ ಮಂಡಳಿಗಳ...

ಸುಳ್ಯ : ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಸಮಿತಿ ಸಭೆ

ಅರೆಭಾಷೆ ಸಾಂಸ್ಕೃತಿಕ ಕ್ಷೇತ್ರದ ಪ್ರಗತಿ ಮತ್ತು ಭಾಷಾ ಬೆಳವಣಿಗೆಗೆ ಕಲಾವಿದರ ಕೊಡುಗೆ ಅಪಾರ, ಇತ್ತೀಚಿನ ದಿನಗಳಲ್ಲಿ ಅರೆಭಾಷೆ ರಂಗಭೂಮಿ ಮತ್ತು ಸಿನಿಮಾ ರಂಗ ಶ್ರೀಮಂತಿಕೆಯನ್ನು ಕಂಡು ಕೊಳ್ಳುತಿದ್ದು ಅರೆಭಾಷೆಯ ಗೌರವ ಮತ್ತು ಹಿರಿಮೆಯನ್ನು ಇಮ್ಮಡಿ ಗೊಳಿಸುತ್ತಿದೆ. ಅರೆಭಾಷೆ ಕಲಾವಿದರ ಒಗ್ಗಟ್ಟು ಮತ್ತು ಅರೆಭಾಷೆ ಕಲಾ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ...

ನಿಂತಿಕಲ್ಲು: ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ &ಫರ್ನಿಚರ್ ಸಂಸ್ಥೆಯ “ಲಕ್ಕೀ ಡ್ರಾ” ಯೋಜನೆಯ ಪ್ರಥಮ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯ ವಿನೂತನ "ಲಕ್ಕೀ ಡ್ರಾ" ಯೋಜನೆಯ ಪ್ರಥಮ ಡ್ರಾ ಇತ್ತೀಚೆಗೆ ನಡೆದಿದ್ದು, ಇದರ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಡ್ರಾ ದ ಬಹುಮಾನ ಫ್ಲೈವುಡ್ ಗೋಡ್ರೇಜ್ ತ್ರಿಷಾ ಸುಬ್ರಹ್ಮಣ್ಯ ಇವರಿಗೆ ಲಭಿಸಿದ್ದು, ವಿಜೇತರಿಗೆ ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು...

ಅಗಲಿದ ಬಾಲಗಾಯಕ ವಿಶ್ವದೀಪ್ ಕುಂದಲ್ಪಾಡಿ ಸ್ಮರಣಾರ್ಥ ರಾಜ್ಯಮಟ್ಟದ ಶೋಕಗಾನ ಸಂಗೀತ ಸ್ಪರ್ಧೆ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ದಿ || ವಿಶ್ವದೀಪ್ ಕುಂದಲ್ಪಾಡಿ ಶೋಕಗಾನ ಸಂಗೀತ ಸ್ಪರ್ಧೆಯು ವಾಟ್ಸಪ್ಪ್ ಆನ್ ಲೈನ್ ಲ್ಲಿ ಜರುಗಿತು. ರಾಜ್ಯದ ಒಟ್ಟು 30 ಗಾಯಕರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಂಗೀತ ಸ್ಪರ್ಧೆಯ ನಿರ್ಣಾಯಕರಾಗಿ ಸುಳ್ಯದ ಗಾಯಕ ಮತ್ತು ಜ್ಯೋತಿಷಿ ಹಾಗೂ ವಾಷ್ಠರ್ ಫೈವ್ ಸ್ಟಾರ್ ಬಳಗದ ಅಧ್ಯಕ್ಷರಾದ ಎಚ್...

ಸುಳ್ಯ : ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಪೆರಾಜೆ ಹಾಗೂ ಅಡ್ತಲೆ ಭಾಗದಲ್ಲಿ ಭೂಮಿ ಕಂಪಿಸಿದ ಘಟನೆ ಇಂದು ಬೆಳಿಗ್ಗೆ 9.10 ವೇಳೆ ನಡೆದಿದೆ. ಪೆರಾಜೆ,ಅಡ್ತಲೆ ಹಲವು ಕಡೆ 45 ಸೆಕೆಂಡು ಭೂಮಿ ಕಂಪಿಸಿದ ಅನುಭವವಾಗಿರುವ ಬಗ್ಗೆ ಜನ ಮಾತಾನಾಡುತ್ತಿದ್ದಾರೆ. ಕಂಪನ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡರ ಸಂಸದರ ನಿಧಿಯಿಂದ ಮಂಡೆಕೋಲಿಗೆ 19.50 ಲಕ್ಷ ಅನುದಾನ ಬಿಡುಗಡೆ

ಸಂದದ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡ ಇವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಡೆಕೋಲು ಗ್ರಾಮಕ್ಕೆ 19.50 ಲಕ್ಷ ಅನುದಾನ ಬಿಡುಗಡೆಗೊಂಡಿರುತ್ತದೆ. ಮಂಡೆಕೋಲು ಗ್ರಾಮದ ದೇವರಗುಂಡ - ಬೆಟ್ಟಕಲ್ಲು ರಸ್ತೆ ಮರು ಡಾಮರೀಕರಣಕ್ಕೆ 6.50 ಲಕ್ಷ, ಬೆಳ್ಳಿಪ್ಪಾಡಿ ದೇವರಗುಂಡ ರುದ್ರಚಾಮುಂಡಿ ದೈವಸ್ಥಾನದ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಮುಖ್ಯರಸ್ತೆಯಿಂದ ದೇವರಗುಂಡ ಪೆಲತ್ತಡ್ಕ...
Loading posts...

All posts loaded

No more posts

error: Content is protected !!