Ad Widget

ಪೈಚಾರು : ಪ್ರಯಾಣಿಕರ ತಂಗುದಾಣವನ್ನು ಪುನರ್ ನಿರ್ಮಿಸಿಕೊಡುವಂತೆ ತಹಶೀಲ್ದಾರರಿಗೆ ಮನವಿ

ಪೈಚಾರು ಬಳಿಯ ಶಾಂತಿನಗರ ತಿರುವು ಬಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಗೊಳಿಸುವ ಸಂದರ್ಭ ಸ್ಥಳದಲ್ಲಿದ್ದ ಪ್ರಯಾಣಿಕರ ತಂಗುದಾಣವನ್ನು ತೆರವುಗೊಳಿಸಲಾಗಿತ್ತು.
ಇದರಿಂದ ಶಾಂತಿನಗರ ಹಾಗೂ ಬೆಟ್ಟಂಪಾಡಿ ಪರಿಸರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್ ಗೆ ಕಾಯುವ ಸಂದರ್ಭ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗುತ್ತಿದೆ.
ಈಗಾಗಲೇ ಮಳೆಗಾಲ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ವಾಹನಕ್ಕಾಗಿ ಕಾಯುವ ಸಂದರ್ಭ ತಂಗುದಾಣ ವಿಲ್ಲದೆ ತುಂಬಾ ಸಮಸ್ಯೆ ಎದುರಾಗಿದೆ.
ಈ ಭಾಗದಲ್ಲಿ ವಾಹನ ದಟ್ಟಣೆ ಹಾಗೂ ಅಪಘಾತಗಳು ನಡೆಯುತ್ತಿದ್ದು ರಸ್ತೆ ಬದಿಗಳಲ್ಲಿ ನಿಲ್ಲಲು ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಆದ್ದರಿಂದ ತೆರವುಗೊಳಿಸಿರುವ ಪ್ರಯಾಣಿಕರ ತಂಗುದಾಣ ವನ್ನು ಪುನರ್ ನಿರ್ಮಿಸಿಕೊಡುವಂತೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಮೂಲಕ ಸಂಸ್ಥೆಯ ಅಧ್ಯಕ್ಷ ಡಾl ಆರ್ ಬಿ ಬಶೀರ್ ತಹಶೀಲ್ದಾರ್ ಕು. ಅನಿತಾಲಕ್ಷ್ಮಿ ಅವರಿಗೆ ಮನವಿಯನ್ನು ನೀಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!