Ad Widget

ಕುಕ್ಕುಜಡ್ಕ : ಪ್ರಗತಿ ರಕ್ಷಾ ಕವಚದ ಬಗ್ಗೆ ಮಾಹಿತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ಹಾಗೂ ದೊಡ್ಡತೋಟ ವಲಯಗಳ ಸೇವಾಪ್ರತಿನಿಧಿಗಳಿಗೆ ಜೂ.15 ರಂದು ಕುಕ್ಕುಜಡ್ಕ ಗ್ರಾಮ ಪಂಚಾಯತ್ ಕೊರಗ ಭವನದಲ್ಲಿ ಪ್ರಗತಿ ರಕ್ಷಾ ಕವಚದ ಬಗ್ಗೆ ಮಾಹಿತಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾಲೂಕು ಕೃಷಿ ಅಧಿಕಾರಿ ರಮೇಶ್ ಹಾಗೂ ಯೋಜನಾಧಿಕಾರಿ ನಾಗೇಶ್ ಇವರುಗಳು ಪ್ರಗತಿ ರಕ್ಷಾ ಕವಚದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ವಸಂತ.ಎಲ್, ದೊಡ್ಡತೋಟ ವಲಯದ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಹಾಗೂ ಬೆಳ್ಳಾರೆ ಹಾಗೂ ದೊಡ್ಡತೋಟ ವಲಯದ 25 ಜನ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!