Ad Widget

ಶ್ರೀ ಭಗವತಿ ಯುವ ಸೇವಾ ಸಂಘದ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ ;
ಅಧ್ಯಕ್ಷರಾಗಿ ಗೋಪಾಲ್ ನಡುಬೈಲು, ಪ್ರ.ಕಾರ್ಯದರ್ಶಿಯಾಗಿ ವಾಸುದೇವ ನಾಯಕ್, ಕೋಶಾಧಿಕಾರಿಯಾಗಿ ಮಹಾಬಲ ರೈ ಬೂಡು

ಬೂಡು ಭಗವತಿ ದೇವಸ್ಥಾನದಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘದ ಮಹಾಸಭೆ ಜೂ.12 ರಂದು ಜರುಗಿತು. ಗೌರವಾಧ್ಯಕ್ಷರಾದ ಬೂಡು ರಾಧಾಕೃಷ್ಣ ರೈಯವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾದ ವಾಸುದೇವನಾಯಕ್ ರವರು ಸ್ವಾಗತಿಸಿದರು. ಸಂಘದ ಖಜಾಂಜಿಯವರಾದ ರಾಮಚಂದ್ರ (ಪುಟ್ಟ) ರವರು ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬೂಡು ರಾಧಾಕೃಷ್ಣ ರೈಯವರು ಪುನರಾಯ್ಕೆಯಾದರು. ಅಧ್ಯಕ್ಷರಾಗಿ ಗೋಪಾಲ ಎಸ್. ನಡುಬೈಲು, ಉಪಾಧ್ಯಕ್ಷರಾಗಿ ಅಜಯ್ ಕುಮಾರ್ ಕುರುಂಜಿಗುಡ್ಡೆ, ನಿತ್ಯಾನಂದ ಕುದ್ಪಾಜೆ, ಲಕ್ಷ÷್ಮಣ ಕೇರ್ಪಳ, ಕುಸುಮಾಧರ ರೈ ಬೂಡು, ಸಂಜೀವ ಆಚಾರ್ಯ ಮತ್ತು ಪದ್ಮಪ್ಪ ಬೂಡು ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಾಸುದೇವ ನಾಯಕ್, ಜತೆ ಕಾರ್ಯದರ್ಶಿಯಾಗಿ ಪ್ರದೀಪ್ ರೈ ಬೂಡು, ವಿಜಯ್ ಕುಮಾರ್ ಕುರುಂಜಿಗುಡ್ಡೆ, ಕೋಶಾಧಿಕಾರಿಯಾಗಿ ಮಹಾಬಲ ರೈ ಬೂಡು, ಜತೆ ಕೋಶಾಧಿಕಾರಿಯಾಗಿ ತೀರ್ಥರಾಮ ಕುದ್ಪಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಸತ್ಯಪ್ರಸಾದ್ ರೈ, ನವೀನ ಕೇರ್ಪಳ, ವಿದಿತ್ ರೈ ಬೂಡು ಮತ್ತು ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ಶಿವರಾಮ ಕೇರ್ಪಳ, ಆನಂದ ಗೌಡ ಖಂಡಿಗ, ಜನಾರ್ಧನ ನಾಯ್ಕ್, ವಿಠಲ ರೈ ಬೂಡು, ರಮೇಶ್ ಶೆಟ್ಟಿ ಮೀಪುಗುರಿ, ರಾಮಚಂದ್ರ ಎಸ್., ಹೇಮನಾಥ ಕುತ್ತಿಮುಂಡ, ಬೀರಣ್ಣ ಗೌಡ, ಮೋನಪ್ಪ ಪೂಜಾರಿ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ವತಿಯಿಂದ ಪ್ರತಿ ವರ್ಷದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸುವ ಬಗ್ಗೆ ಚರ್ಚಿಸಲಾಯಿತು.
ಕುಸುಮಾಧರ ರೈ ಬೂಡು ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಲುವತ್ತಕ್ಕೂ ಅಧಿಕ ಸದಸ್ಯರು ಹಾಜರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!