Ad Widget

ಎಲಿಮಲೆ : ಕಾಡುಜಬಳೆ ರಸ್ತೆಯಲ್ಲಿ ನಿರ್ಮಾಣಗೊಂಡ ಕಿರು ಸೇತುವೆ ಉದ್ಘಾಟನೆ

ದೇವಚಳ್ಳ ಗ್ರಾಮದ ಮಣಿಯೂರು ಮೂಲೆತೋಟ ಕಾಡುಜಬಳೆ ರಸ್ತೆಯಲ್ಲಿ ನಿರ್ಮಾಣಗೊಂಡ ಕಿರು ಸೇತುವೆಯ ಉದ್ಘಾಟನೆ ಕಾರ್ಯಕ್ರಮ ಇಂದು ಜರುಗಿತು. ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ದೀಪ ಬೆಳಗಿಸಿದರು. ಸುಶೀಲ ಕಾಡುಜಬಳೆ ರಿಬ್ಬನ್ ತುಂಡರಿಸಿ, ವಿಶ್ವನಾಥ ಕಾಡುಜಬಳೆ ತೆಂಗಿನಕಾಯಿ ಒಡೆಯುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸೂರ್ಯನಾರಾಯಣ ಭಟ್ ಮೂಲೆತೋಟ, ಮನಮೋಹನ್ ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ವಿನಯ್ ಮಣಿಯೂರು ಹಾಗೂ ಎಲ್ಲಾ ಫಲಾನುಭವಿಗಳು ಉಪಸ್ಥಿತರಿದ್ದರು. ಸುಮಾರು 40 ವರ್ಷಗಳ ಬೇಡಿಕೆಯನ್ನು ನೆರವೇರಿಸಿದ ಗ್ರಾಮ ಪಂಚಾಯಿತ್ ಗೆ ಊರವರ ಪರವಾಗಿ ಪದ್ಮನಾಭ ಕಾಡುಜಬಳೆ ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು ಯೋಜನೆ ಬಗ್ಗೆ ಮಾಹಿತಿ ನೀಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!