Ad Widget

ಬೆಳ್ಳಾರೆ: ಹಿರಿಯ ಉದ್ಯಮಿ ಚಂದ್ರಶೇಖರ ಶೆಣೈ ನಿಧನ

ಬೆಳ್ಳಾರೆಯ ಕೆಳಗಿನ ಪೇಟೆಯ ಹಿರಿಯ ಉದ್ಯಮಿ, ಶ್ರೀ ಗುರುರಾಘವೇಂದ್ರ ಸ್ಟೋರ್ಸ್ ನ ಚಂದ್ರಶೇಖರ ಶೆಣೈ ಆ.19ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚಿತ್ರ ಶೆಣೈ, ಪುತ್ರರಾದ ಚೇತನ್ ಶೆಣೈ, ಶ್ರೀ ಗುರುರಾಘವೇಂದ್ರ ಸ್ಟೋರ್ಸ್ ನಡೆಸುತ್ತಿರುವ ಜೇಸೀ ಬೆಳ್ಳಾರೆಯ ಪೂರ್ವಾಧ್ಯಕ್ಷ ಮಿಥುನ್ ಶೆಣೈ, ಓರ್ವ ಸಹೋದರ, ಮೂವರು ಸಹೋದರಿಯರು...

ಉತ್ತಮ ಸಾಧನೆ ಮಾಡಿದ ಬಡ ವಿದ್ಯಾರ್ಥಿನಿಗೆ ಬಂಟರ ಸಂಘದಿಂದ ಧನಸಹಾಯ

ಬೆಳ್ಳಾರೆ ಗ್ರಾಮದ ಚಾವಡಿಬಾಗಿಲು ಎಂಬಲ್ಲಿ ಜನತಾ ಕಾಲೋನಿಯಲ್ಲಿ ವಾಸಿಸುತ್ತಿರುವ ಯಶೋಧ ರೈ ಎಂಬವರ ಮಗಳು, ವಿದ್ಯಾಭೋದಿನಿ ಪ್ರೌಢಶಾಲೆ ಬಾಳಿಲ ಇಲ್ಲಿನ ವಿದ್ಯಾರ್ಥಿನಿ ಕು. ಚೈತನ್ಯ 2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ರಲ್ಲಿ 580 ಅಂಕ ಗಳಿಸಿ ಉನ್ನತ ಶ್ರೇಣಿ ಹೊಂದಿದ್ದು, ತೀರಾ ಬಡವರಾಗಿ ರುವ ಇವರು ಅಂತ್ಯೋದಯ...
Ad Widget

ಮೂರು ತಿಂಗಳಲ್ಲಿ110 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣಕ್ಕಿರುವ ತೊಡಕು ನಿವಾರಣೆ : ಸಚಿವ ಸುನಿಲ್ ಕುಮಾರ್

110 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ಶೀಘ್ರ ಬಗೆಹರಿಸಲು ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಸಚಿವ ಅಂಗಾರರ ನೇತೃತ್ವದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಂದರು,ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ರೈತ...

ಮಂಗಳೂರು ವಿ.ವಿ. ಸಂಧ್ಯಾ ಕಾಲೇಜಿನಿಂದ ಅನಿಂದಿತ್ ಅವರಿಗೆ “ಲೆಟರ್ ಆಫ್ ಅಪ್ರಿಸಿಯೇಶನ್”

ಮಂಗಳೂರು ವಿ.ವಿ.‌ ಸಂಧ್ಯಾ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಯುವಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಭಾಗವಹಿಸಿದ್ದರು. "ಸ್ವಾತಂತ್ರ್ಯ ಸಮರದಲ್ಲಿ ನಮ್ಮವರು" ಎಂಬ ವಿಷಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ 1857 ರಿಗಿಂತ ಇಪ್ಪತ್ತು ವರ್ಷಗಳ ಹಿಂದೆಯೇ ಭಾರತದಲ್ಲಿ, ಅದು ಕೂಡ...

ಕೋವಿಡ್ ಪಾಸಿಟಿವಿಟಿ ದರ ಏರಿಕೆಯಾಗದಂತೆ ಜಾಗೃತಿವಹಿಸಿ- ಸಚಿವ ಅಂಗಾರ

ಸುಳ್ಯ: ದ.ಕ ಜಿಲ್ಲೆ ಹಲವು ಗಡಿ ಪ್ರದೇಶಗಳನ್ನು ಹೊಂದಿದ್ದು ಇದು ಕೋವಿಡ್ ನ ಕುರಿತು ಮತ್ತಷ್ಟು ಜಾಗೃತರಾಗಿ ಇರಬೇಕಾದ ಸನ್ನಿವೇಶವನ್ನು ಉಂಟು ಮಾಡಿದೆ. ಹಾಗಾಗಿ ಇಲ್ಲಿನ ಅಧಿಕಾರಿ ವರ್ಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಕೋವಿಡ್ ಪಾಸಿಟಿವಿಟಿ ದರ ಏರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು.ಆ.೧೮ ರಂದು ಕೆವಿಜಿ ಆಯರ್ವೇದ...

ಕುಕ್ಕೆ: ಶ್ರೀ ದೇವಳದಲ್ಲಿ ಆ.3೦ರ ತನಕ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ

ಸುಬ್ರಹ್ಮಣ್ಯ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದ.ಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆಗಳು ನಡೆಯುವುದಿಲ್ಲ. ಕೇವಲ ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು...

ಶತಾಯುಷಿ ಶ್ರೀಮತಿ ಚೋಮು ಕಲ್ಲಪಣೆ ನಿಧನ

ಕೊಡಿಯಾಲ ಗ್ರಾಮದ ಶತಾಯುಷಿ ಶ್ರೀಮತಿ ಚೋಮು ಕಲ್ಲಪಣೆಯವರು ಆ.18ರಂದು ನಿಧನರಾದರು. ಅವರಿಗೆ 105 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮುದರ, ಪುತ್ರಿಯರಾದ ಲಕ್ಷ್ಮೀ, ಕುಸುಮ, ಕಮಲ, ಚನ್ನು, ಸೊಸೆಯಂದಿರಾದ ಜಾನಕಿ, ಸೇಸಮ್ಮ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಂಪಾಜೆ : ಮುಸ್ಲಿಮ್ ಒಕ್ಕೂಟದಿಂದ “ನನ್ನ ಕನಸಿನ ಭಾರತ” ಭಾಷಣ ಸ್ಪರ್ಧೆ

75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 15 ಆಗಸ್ಟ್ 2021 ರಂದು ಮುಸ್ಲಿಮ್ ಒಕ್ಕೂಟ ಸಂಪಾಜೆ ವಾಟ್ಸಪ್ ಗ್ರೂಪ್ ನಲ್ಲಿ "ನನ್ನ ಕನಸಿನ ಭಾರತ" ವಿಷಯದಲ್ಲಿ ನಡೆದ ಕನ್ನಡ ಭಾಷಣ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ವಾದಿಕ್ ಸಂಪಾಜೆ, ದ್ವಿತೀಯ ಸ್ಥಾನವನ್ನು ಮೊಹಮ್ಮದ್ ಹಾಸಿಮ್, ತೃತೀಯ ಶಮೀರ್ ಮೌಲವಿ ಪಡೆದರು.

ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ – ಎಸ್ ಡಿ ಪಿ ಐ ಸಂಘಟನೆ ನಿಷೇಧಿಸಲು ಒತ್ತಾಯ

ಲವ್ ಜಿಹಾದ್ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು‌.ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮತ್ತು ನಗರ...

ಅಚ್ರಪ್ಪಾಡಿ : ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆ.11ರಂದು ರಚನೆ ಮಾಡಲಾಯಿತು. 2021-22 ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಜನಾರ್ಧನ , ಉಪಾಧ್ಯಕ್ಷೆಯಾಗಿ ಶ್ರೀಮತಿ ಕುಮುದ, ಸದಸ್ಯರುಗಳಾಗಿ ಶ್ರೀಮತಿ ಶ್ಯಾಮಲಾ, ಶ್ರೀಮತಿ ರಶ್ಮಿ , ಶ್ರೀಮತಿ ಜಯಶ್ರೀ ಪರಶುರಾಮ , ಶ್ರೀಮತಿ ಸೌಮ್ಯ ಗೋವರ್ಧನ,...
Loading posts...

All posts loaded

No more posts

error: Content is protected !!