Ad Widget

ಹರಿಹರ ಪಲ್ಲತ್ತಡ್ಕ :- ಶಿವಹರಿ ಆಟೋರಿಕ್ಷಾ ಚಾಲಕರ ಸಂಘ ಅಸ್ತಿತ್ವಕ್ಕೆ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ, ಬಿ.ಎಂ.ಎಸ್ ಸಂಯೋಜಿತ ಶಿವಹರಿ ಆಟೋರಿಕ್ಷಾ ಚಾಲಕರ ಸಂಘ ಹರಿಹರ ಪಲ್ಲತ್ತಡ್ಕ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮ ಆ.20 ರಂದು ಬಿ.ಎಂ.ಎಸ್ ನ ಅದ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಅವರ ಅಧ್ಯಕ್ಷತೆಯಲ್ಲಿ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.
ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಅದ್ಯಕ್ಷ ಜಯಂತ ಬಾಳುಗೋಡು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಎಂ.ಎಸ್ ನ ಅದ್ಯಕ್ಷರು ನೂತನ ಘಟಕಕ್ಕೆ ಸಂಘದ ದ್ವಜವನ್ನು ಹಸ್ತಾಂತರಿಸಿದರು.
ಸಂಘದ ನೂತನ ಅಧ್ಯಕ್ಷರಾಗಿ ದಯಾನಂದ ಪರಮಲೆ, ಕಾರ್ಯದರ್ಶಿಯಾಗಿ ಸುಹಾಸ್ ಕೋಟೆಬೈಲು, ಖಜಾಂಜಿಯಾಗಿ ಗಗನ್ ಕಿರಿಭಾಗ ಇವರುಗಳನ್ನು ಆಯ್ಕೆ ಮಾಡಲಾಯಿತು. ವಿಜಯಕುಮಾರ್ ಉಬರಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಹರ್ಷಿತ ನವಗ್ರಾಮ ಪ್ರಾರ್ಥಿಸಿದರು, ಸುಹಾಸ್ ಕೋಟೆಬೈಲು ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಙಣ, ಚಂದ್ರಶೇಖರ ಮರ್ಕಂಜ, ವಿಜಯಕುಮಾರ್ ಉಬರಡ್ಕ ಮುಂತಾದವರು ಉಪಸ್ಥಿತರಿದ್ದರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!