Ad Widget

ಉತ್ತಮ ಸಾಧನೆ ಮಾಡಿದ ಬಡ ವಿದ್ಯಾರ್ಥಿನಿಗೆ ಬಂಟರ ಸಂಘದಿಂದ ಧನಸಹಾಯ

ಬೆಳ್ಳಾರೆ ಗ್ರಾಮದ ಚಾವಡಿಬಾಗಿಲು ಎಂಬಲ್ಲಿ ಜನತಾ ಕಾಲೋನಿಯಲ್ಲಿ ವಾಸಿಸುತ್ತಿರುವ ಯಶೋಧ ರೈ ಎಂಬವರ ಮಗಳು, ವಿದ್ಯಾಭೋದಿನಿ ಪ್ರೌಢಶಾಲೆ ಬಾಳಿಲ ಇಲ್ಲಿನ ವಿದ್ಯಾರ್ಥಿನಿ ಕು. ಚೈತನ್ಯ 2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ರಲ್ಲಿ 580 ಅಂಕ ಗಳಿಸಿ ಉನ್ನತ ಶ್ರೇಣಿ ಹೊಂದಿದ್ದು, ತೀರಾ ಬಡವರಾಗಿ ರುವ ಇವರು ಅಂತ್ಯೋದಯ ಪಡಿತರ ಚೀಟಿ ಯನ್ನು ಹೊಂದಿರುವವರಾಗಿದ್ದು , ಇವರ ಉನ್ನತ ವಿದ್ಯಾಭ್ಯಾಸಕ್ಕಾಗಿ ಬಂಟರ ಯಾನೆ ನಾಡವರ ಸಂಘ (ರಿ ) ಸುಳ್ಯ ಇವರು ರೂ 10000 ನೀಡಿ ಸಹಕರಿಸಿರುತ್ತಾರೆ. ಆ.18 ರಂದು ಸಂಘದ ಉಪಾಧ್ಯಕ್ಷ ಪ್ರಭಾಕರ ರೈ ಎಣ್ಮೂ ರು ಮತ್ತು ಪ್ರಧಾನ ಕಾರ್ಯದರ್ಶಿ ಸುಭಾಶ್ ಚಂದ್ರ ರೈ ತೋಟ ಇವರು ವಿದ್ಯಾರ್ಥಿನಿಗೆ ಧನಸಹಾಯ ವಿತರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!