Ad Widget

ಶೇಣಿ ವೃಕ್ಷಾರೋಹಣ ಕಾರ್ಯಕ್ರಮ

ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇದರ ಆಶ್ರಯದಲ್ಲಿ, ಎಂ.ಎಸ್.ಕೆ ಫ್ರೆಂಡ್ಸ್ ಶೇಣಿ ಇದರ ಸಹಯೋಗದೊಂದಿಗೆ 3 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮವನ್ನು ಅಮರಪಡ್ನೂರಿನ ಶೇಣಿಯ ಕುಳ್ಳಾಜೆ ಪರಿಸರದಲ್ಲಿ ಇಂದು ನಡೆಸಲಾಯಿತು.ಪತ್ರಕರ್ತ ವಿಶ್ವನಾಥ ಮೋಟುಕಾನ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವೃಕ್ಷಾರೋಹಣದಲ್ಲಿ ಪಾಲ್ಗೊಂಡರು.ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ಮನೋಜ್ಞ ಕೋಡ್ತುಗಳಿ, ಜತೆ ಕಾರ್ಯದರ್ಶಿ ಮನೋಜ್ ದರ್ಖಾಸು, ನಿರ್ದೇಶಕರಾದ ನವೀನ ದರ್ಖಾಸು, ರತ್ನಾಕರ ಪೈಲಾರು, ಶ್ರವಣ್ ಕೋಡ್ತುಗುಳಿ,ನಳಿನ್ ಕುಮಾರ್ ಪೈಲಾರು,ಗೌರವ ಸಲಹೆಗಾರರಾದ ಆನಂದ ಕಂಜರ್ಪಣೆ,ತೇಜಸ್ವಿ ಕಡಪಳ ಮತ್ತು ಎಂ.ಎಸ್.ಕೆ ಫ್ರೆಂಡ್ಸ್ ನ ಸದಸ್ಯರಾದ ವಿಜಯ್,ಜಗದೀಶ್, ಕೃತಿಕ್,ನಿತಿನ್, ಸುಬ್ರಹ್ಮಣ್ಯಸೂರೆಂಗಿ,ವಿಶ್ವನಾಥ ಕುಳ್ಳಾಜೆ, ಸುರೇಶ,ಸುಬ್ರಾಯ,ರಾಮಚಂದ್ರ ಕುಳ್ಳಾಜೆ ಹಾಗೂ ಬಾಲಕೃಷ್ಣ ಸೂರೆಂಗಿ , ನಾಗೇಶ ಮೋಟುಕಾನ,ನಿಶಾಂತ್ ಯಸ್ವಿತ್, ಮತ್ತು ರಂಜಿತ್, ಮಹೇಶ್,ಸೃಜನ್ ಹಾಗೂ ಪ್ರಶಾಂತ್ ಶೇಣಿ ವೃಕ್ಷಾರೋಹಣ ದಲ್ಲಿ ಪಾಲ್ಗೊಂಡಿದ್ದರು. ದಾಳಿಂಬೆ,ಪುನರ್ಪುಳಿ,ಕೋಳ್ಜುಟ್ಟು,ಸುರಹೊನ್ನೆ ,ಮಹಾಗನಿ,ನಿಂಬೆ,ಕಹಿ ಬೇವು,ಮಾವು,ನೆಲ್ಲಿ ಮುಂತಾದ 500 ಹಣ್ಣಿನ ಮತ್ತು ಬಹೂಪಯೋಗಿ ಗಿಡಗಳನ್ನು ನೆಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!