
ಮಡಿಕೇರಿ ಸಮೀಪದ ಹಾಕತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೂರಿಕಾಡುವಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಮರಿ ಆನೆ ಸಹಿತ ಒಟ್ಟು ಆರು ಕಾಡಾನೆಗಳು ಬೀಡು ಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ನಾಚಿಯಪ್ಪನ್, ರಂಜಿನಿ ಅಮ್ಮಣ್ಣ ಹಾಗೂ ಖಾಲಿದ್ ರವರ ತೋಟಗಳಲ್ಲಿ ಬೀಡು ಬಿಟ್ಟ ಆನೆಗಳ ದಂಡು ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗಿನಮರ ಸಹಿತ ಇತರೆ ಕೃಷಿ ಪಸಲನ್ನ ನಾಶ ಮಾಡಿದೆ
ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಆಗಮಿಸಿ ಸಿಡಿಮದ್ದು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಓಡಿಸಲು ಶ್ರಮಿಸಿದರೂ ಕೂಡ ಕಾಡಾನೆಗಳ ಹಿಂಡು ಗ್ರಾಮ ಬಿಟ್ಟು ತೆರಳದೆ ಬಿಡಾರ ಹೂಡಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.