ಅಡ್ಕಾರು : ಹಿಂದಿನಿಂದ ಬಂದ ಕಾರಿಗೆ ಸೈಡ್ ಕೊಡುವ ಭರದಲ್ಲಿ ಅಪಘಾತ – ಕಾರುಗಳೆರಡು ಪಲ್ಟಿ

ಸುಳ್ಯದಿಂದ ಪುತ್ತೂರು ಕಡೆಗೆ ಮೂರು ಕಾರುಗಳು ಒಟ್ಟೊಟ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನ ಕಾರಿನ ಚಾಲಕ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಘಟನೆ ಅಡ್ಕಾರ್ ಸಮೀಪ ನಡೆದಿದೆ. ಈ ಅಪಘಾತದಿಂದ ಎರಡೂ ಕಾರುಗಳು ಪಲ್ಟಿಯಾಗಿ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಅಪಘಾತಕ್ಕೀಡಾದ ಕಾರಲ್ಲಿ ಒಂದು ಸಂಪಾಜೆ ಚರ್ಚ್ ನ ಫಾದರ್ ಜೋಸೆಫ್ ಅವರದ್ದಾಗಿದ್ದು,...

ಡಾ. ರವಿ ಕಕ್ಕೆ ಪದವು ಸೇವಾ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

ಸುಬ್ರಹ್ಮಣ್ಯದ ಡಾlರವಿ ಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಬಿಳಿನೆಲೆ ಗ್ರಾಮದ ಕೈಕಂಬ ಕುಕ್ಕಜೆ ನಿವಾಸಿ ತೀರ ಬಡತನದಲ್ಲಿರುವ ಸುಮಿತ್ರ ಅವರಿಗೆ ನೂತನವಾಗಿ ಕಟ್ಟಿಕೊಟ್ಟ ಮನೆಯ ಕೀ ನೀಡುವುದರ ಮೂಲಕ ಹಸ್ತಾಂತರಿಸಲಾಯಿತು. ರವಿ ಕಕ್ಕೆ ಪದವ್ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಚಂದ್ರಕಲಾ ,ರಮೇಶ ಹೊಸವಳಿಕೆ ಹಾಜರಿದ್ದರು .‌ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸುಮಿತ್ರ...
Ad Widget

ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ತಂಡ ಪ್ರಥಮ

ಮಡಿಕೇರಿ ಸೈಂಟ್ ಮೈಕಲ್ ಪ್ರೌಢಶಾಲೆಯಲ್ಲಿ ಆ.26 ರಂದು ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ದೃತಿ, ದೀಕ್ಷಾ, ಬಿಂಧ್ಯಾ, ದಿಶಾ, ದೀಕ್ಷಿತಾ, ಧನುಶ್ರೀ, ಸುಪ್ರಿತಾ, ಶ್ರಾವ್ಯ, ಗ್ರೀಷ್ಮಾ, ಶ್ರಾವ್ಯ, ಸಿಂಚನಾ ಭಾಗವಹಿಸಿದ್ದಾರೆ. ದೈಹಿಕ ಶಿಕ್ಷಕ ಶಿಕ್ಷಕ ಕುಶಾಲಪ್ಪ.ಕೆ,...

ಅಮ್ಮ ಚಿಣ್ಣರ ಮನೆಯ ಪೋಷಕರ ಸಭೆ, ನೂತನ ಸಮಿತಿ ರಚನೆ

ಸುಳ್ಯದ ಅಮ್ಮ ಚಿಣ್ಣರ ಮನೆಯ 2023-24 ನೇ ಸಾಲಿನ ಪೋಷಕ ಸಮಿತಿ ರಚನೆ ಆ.26 ರಂದು ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರಶ್ಮಿ ವಿನಯ್ ಕಂದಡ್ಕ, ಉಪಾಧ್ಯಕ್ಷರಾಗಿ ಶಿವರಾಮ ನಾರ್ಕೋಡು, ಸದಸ್ಯರಾಗಿ ಡಾ. ಅಮಿತ್ ಕುಮಾರ್, ಶ್ರೀಮತಿ ಮಮತ ಯತೀಶ್, ಜಯಶ್ರೀ ಯೋಗೀಶ್, ಶ್ರೀಮತಿ ರೇವತಿ ಗಣೇಶ್, ಶ್ರೀಮತಿ ಶ್ವೇತಾ ಉದಯ್ ಇವರು ಆಯ್ಕೆಗೊಂಡರು....

ಪಾಟಾಳಿಯಾನೆ ಗಾಣಿಗ ಸಮಾಜದ ವತಿಯಿಂದ ನಡೆಯುವ ಗಾಣಿಗ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ

ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ಇದರ ವತಿಯಿಂದ ಅ.1ರಂದು ನಡೆಯಲಿರುವ "ಗಾಣಿಗ ಸಮ್ಮಿಲನ -2023" ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಆ. 27 ರಂದು ಜರುಗಿತು. ಆಮಂತ್ರಣ ಪತ್ರಿಕೆಯನ್ನು ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಪಕ್ಕೀರ ಪಾಟಾಳಿಯವರ ಗಾಣದ ಮನೆಯಲ್ಲಿ ಗಾಣದ ಮನೆಯ ಯಜಮಾನರಾದ ಪಕ್ಕೀರ ಪಾಟಾಳಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ...

ಮಾವಿನಕಟ್ಟೆ : ಓಣಂ ಸಂಭ್ರಮಕ್ಕೆ ಚಾಲನೆ

ಮಾವಿನಕಟ್ಟೆ ಶ್ರೀ ವಿಷ್ಣು ಸೇವಾ ಸಮಿತಿ ನೇತೃತ್ವದಲ್ಲಿ ಓಣಂ ಆಚರಣೆ ಆಯೋಜಿಸಿದ್ದು ಇಂದು ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಷ್ಣುಮೂರ್ತಿ ದೈವದ ಪರಿಚಾರಕ ಭಾಸ್ಕರ ಬೆಳ್ಳಪಾಡ ತಳೂರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಸಮಿತಿಯ ಪ್ರ.ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್, ಕೋಶಾಧಿಕಾರಿ ಗೋಪಿನಾಥ್ ಮೆತ್ತಡ್ಕ, ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ...

ಕೆ.ವಿ.ಜಿ.ಪಾಲಿಟೆಕ್ನಿಕ್ : ವಿಪತ್ತು ನಿರ್ವಹಣಾ  ಕಾರ್ಯಾಗಾರ

ಕೆ.ವಿ.ಜಿ.ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ಘಟಕಗಳು  ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇವರ ಆಶ್ರಯದಲ್ಲಿ  ದ.ಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ   ವಿಪತ್ತು ನಿರ್ವಹಣಾ ಕಾರ್ಯಾಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ   ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಾಗಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ...

ಕಲ್ಚಾರು : ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಮರ ತೆರವುಗೊಳಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

ಗುತ್ತಿಗಾರು ಗ್ರಾಮದ ಕಲ್ಚಾರು - ಕುಟ್ರುಮಕ್ಕಿ ಎಂಬಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರ, ಬಿದಿರು, ತೆಂಗಿನಗರಿ ಇತ್ಯಾದಿ ಕಸಕಡ್ಡಿಗಳನ್ನು ತೆರವುಗೊಳಿಸುವ ಬಗ್ಗೆ ಗ್ರಾಮ ಪಂಚಾಯತ್ ಕೋರಿಕೆ ಮೇರೆಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತಕ್ಷಣವೇ ಸ್ಪಂದಿಸಿ ಶ್ರಮದಾನದ ಮೂಲಕ ತೆರವುಗೊಳಿಸಿದರು. ಸ್ಥಳೀಯರಾದ ಚಂದ್ರಕಾಂತ ಮೊಟ್ಟೆಯವರ ಸಹಕಾರದಿಂದ ಮೆಷಿನ್ ಮುಖಾಂತರ ಮರಗಳನ್ನು ಕತ್ತರಿಸಿ ತೆಗೆಯಲಾಯಿತು. ಘಟಕದ...

ಗೀತ ಗಾಯನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಭಾರತ್ ಸ್ಕೌಟ್ ಮತ್ತು ರಾಜ್ಯ ಸಂಸ್ಥೆಯಿಂದ ಆಯೋಜಿಸಲ್ಪಟ್ಟ ನಾಡೋಜ ಡಾ||ಗೋ.ರು.ಚನ್ನಬಸಪ್ಪರವರ ಹೆಸರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಪಿನಂಗಡಿ ಯಲ್ಲಿ ನಡೆದ ಪಂಜ ಪಂಜ ವಲಯ ಮಟ್ಟದ ದೇಶಭಕ್ತಿ ಗೀತೆಗಳ ಗೀತೆ ಗಾಯನ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯದ ವಿದ್ಯಾರ್ಥಿಗಳು ಭಾಗವಹಿಸಿ ಸ್ಕೌಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ವೈಶಾಕ್...

ವಿದ್ಯಾಬೋಧೀನಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಜೇನು ಕೃಷಿ ಅಧ್ಯಯನ

ವಿದ್ಯಾಬೋಧೀನಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಜೇನು ಕೃಷಿ ಅಧ್ಯಯನವು ಆ.25ರ ಶುಕ್ರವಾರ ನಡೆಯಿತು. ಗ್ರಾಮ ಜನ್ಯ ರೈತ ಉತ್ಪಾದಕ ಸಂಸ್ಥೆ ಪುತ್ತೂರು ಇವರು ಬಾಳಿಲದ ಡಾಕ್ಟರ್ ಶ್ರೇಯಸ್ ಭಾರದ್ವಾಜ್ ಇವರ ಮನೆಯಲ್ಲಿ ಹಮ್ಮಿಕೊಂಡ ಜೇನು ಕೃಷಿ ಮಾಹಿತಿ ಕಾರ್ಯಕ್ರಮಕ್ಕೆ ಬಾಳಿಲ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
Loading posts...

All posts loaded

No more posts

error: Content is protected !!