ಮಂಡೆಕೋಲು ಸಹಕಾರಿ ಸಂಘಕ್ಕೆ ಜಿಲ್ಲಾ ಬ್ಯಾಂಕ್ ಪ್ರಶಸ್ತಿ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಆ.30ರಂದು ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್‌ ರವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ...

ಸುಳ್ಯ ಡಿಗ್ರಿ‌ ಕಾಲೇಜಿನಲ್ಲಿ ಎನ್.ಎಸ್.ಎಸ್.‌ಚಟುವಟಿಕೆಗಳ ಉದ್ಘಾಟನೆ

ಆ.30ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು  ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಕುಮಾರ್.ಕೆ.ಆರ್ ಇವರು ವಹಿಸಿಕೊಂಡಿದ್ದರು.ರಾಮಕೃಷ್ಣ.ಕೆ.‌ಎಸ್ ಇವರು ಮೊದಲ ವರ್ಷದ ಸ್ವಯಂ ಸೇವಕರಿಗಾಗಿ ಅಭಿವಿನ್ಯಾಸ  ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮಾಧಿಕಾರಿಗಳು ಹೊಸ ನಾಯಕರುಗಳಾಗಿ  ಅಭಿಜ್ಞಾ.ಎ.ಎಸ್, ಚೈತನ್.ಬಿ, ಯತೀಶ್.ಎಮ್.ಬಿ, ಹಂಸಿನಿ.ಪಿ.ಎಸ್ ಇವರನ್ನು ಆಯ್ಕೆ ಮಾಡಲಾಯಿತು....
Ad Widget

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ; ಕಾರ್ಯದರ್ಶಿ ಪದ್ಮನಾಭ ಮುಂಡೋಕಜೆ, ಕೋಶಾಧಿಕಾರಿ ಮಿಥುನ್ ಕರ್ಲಪ್ಪಾಡಿ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆಯಾಗಿದ್ದಾರೆ.ಸಂಘದ  ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ರವರ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್‌ ನಲ್ಲಿ ಸೆ.01 ರಂದು ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪೂಜಾಶ್ರೀ ವಿತೇಶ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಜೊತೆ ಕಾರ್ಯದರ್ಶಿಯಾಗಿ ಜೆ.ಕೆ.ರೈ, ಕೋಶಾಧಿಕಾರಿಯಾಗಿ ಮಿಥುನ್ ಕರ್ಲಪ್ಪಾಡಿ...

ರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಅವನಿ.ಡಿ.ಎಸ್ ಗೆ ಚಿನ್ನದ ಪದಕ

ಹೈದರಾಬಾದ್ ನ ರೀಜನ್ ನ ನವೋದಯ ವಿದ್ಯಾಲಯ ಸಮಿತಿಯವರು ಇತ್ತೀಚೆಗೆ ಹಿಮಾಚಲ ಪ್ರದೇಶದ ಕಾಂಗ್ರದಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಅವನಿ.ಡಿ.ಎಸ್ ಚಿನ್ನದ ಪದಕ ಪಡೆದು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಮುಡಿಪು ನವೋದಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸುಳ್ಯ ಬೀರಮಂಗಲದಲ್ಲಿ ನೆಲೆಸಿರುವ ಮಡಪ್ಪಾಡಿ ದೇರುಮಜಲಿನ ಶಿವರಾಮ.ಡಿ...

ಬೆಳ್ಳಾರೆ ಸಹಕಾರಿ ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

ದ.ಕ.ಜಿಲ್ಲಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ನೇ ಸಾಲಿನ ಸಂಘದ ಗಣನೀಯ ಸೇವೆಯನ್ನು ಗುರುತಿಸಿ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮಂಗಳೂರಿನಲ್ಲಿ ನಡೆದ ಎಸ್. ಸಿ.ಡಿ.ಸಿ.ಸಿ. ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ.ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ. ಎನ್ ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ಮತ್ತು...

ಬೆಂಗಳೂರು : ಕೊಡಗು ಗೌಡ ಸಮಾಜಗಳ ಒಕ್ಕೂಟ ಸಭೆ ; ಸಮೀಕ್ಷೆ ವೇಳೆ ಅರೆಭಾಷೆ ಎಂದು ನಮೂದಿಸಲು ನಿರ್ಧಾರ

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಜಾತಿ ಕಾಲಂ ನಲ್ಲಿ “ಗೌಡ”, ಉಪಜಾತಿ ಕಾಲಂ ನಲ್ಲಿ “ಅರೆಭಾಷೆ ಗೌಡ” ಹಾಗೂ ಮಾತೃಭಾಷೆ ಕಾಲಂ ನಲ್ಲಿ “ಅರೆಭಾಷೆ” ಎಂದು ನಮೂದು ಮಾಡುವಂತೆ ಆ.30 ರಂದು ಬೆಂಗಳೂರಿನಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಬೆಂಗಳೂರಿನ ಕೊಡಗು...

ಬಿ.ಎಸ್‍.ಎಫ್‌ ಗೆ ಆಯ್ಕೆಯಾದ ಸುಶ್ಮಿತಾರಿಗೆ ಅರೆಭಾಷೆ ಅಕಾಡೆಮಿ ವತಿಯಿಂದ ಗೌರವ

ಭಾರತೀಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆಯ ಅರೆಭಾಷಿಕ ಯುವತಿ ಕುಮಾರಿ ಸುಶ್ಮಿತಾ ಎಂ.ಎ ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆ.31 ರಂದು ಗೌರವಿಸಿ ಸನ್ಮಾನಿಸಲಾಯಿತು. ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ...

ಶಿಕ್ಷಣ ಇಲಾಖೆಯ “ರತ್ನ” ನಿವೃತ್ತ ಸಿಬ್ಬಂದಿ ರತ್ನಾಕರ್ ಕೆ‌. ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ – ಪಾದರಸದಂತಹ ವ್ಯಕ್ತಿತ್ವ ಅವರದ್ದು – ಚಿದಾನಂದ ಯು.ಎಸ್.

ಶಿಕ್ಷಣ ಇಲಾಖೆಯಲ್ಲಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು ಆ. ೩೧ರಂದು ಸೇವಾ ನಿವೃತ್ತರಾದ ರತ್ನಾಕರ್ ಕೆ.ಯವರಿಗೆ ರತ್ನಾಕರ್ ಅಭಿಮಾನಿಗಳ ಬಳಗದಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಆ.೩೦ರಂದು ಸುಳ್ಯ ಸಿ.ಎ. ಬ್ಯಾಂಕ್ ಎ.ಎಸ್‌. ವಿಜಯಕುಮಾರ್‌ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.ಯವರ ಅಧ್ಯಕ್ಷತೆಯಲ್ಲಿ...

ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಸಾಹಿತ್ಯೋತ್ಸವ – ಬೆಳ್ಳಾರೆ ಶಾಖೆ ಪ್ರಥಮ ,ತಂಬಿನಮಕ್ಕಿ ಶಾಖೆ ದ್ವಿತೀಯ

ಎಸ್ಸೆಸ್ಸೆಫ್(ಸುನ್ನೀ ಸ್ಟುಡೆಂಟ್ ಫೆಡರೇಷನ್)ಬೆಳ್ಳಾರೆ ಸೆಕ್ಟರ್ ಸಾಹಿತ್ಯೋತ್ಸವವು ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಕೆಂಡರಿ ಮದರಸ ವಠಾರದಲ್ಲಿ ಆ 31ರಂದು ಜರುಗಿತು. ಬೆಳಿಗ್ಗೆ 9 ಘಂಟೆಗೆ ಪಳ್ಳಿಮಜಲು ಮಸೀದಿಯ ಸಿರಾಜುಲ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹನೀಫ್ ಸಲಾಲಹ್ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನೆಯನ್ನು ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯ ಖತೀಬ್ ರಫೀಖ್...

ಕವನ : ಸೃಷ್ಟಿಗೊಂದು ಕಾರಣ…

ಸುರಿದ ಮಳೆ ಹನಿಗೂ ತಿಳಿಯಲಾಗಲಿಲ್ಲ ತಾನೇಕೆ ಆಗಸವ ಬಿಟ್ಟು ಭೂಮಿಗೆ ಬಂದೆ ಎಂದು, ಮಣ್ಣಿಗೆ ಸೇರಿದೆ ಎಂದು, ಅರಿಯುವಷ್ಟರಲ್ಲಿ ಆರಿ ಹೋಯಿತು ಇಂಗಿ ಮಣ್ಣ ಸೇರಿತು ಇಂದು, ಆದರೂ ಅದು ಮಣ್ಣಲ್ಲಿ ಸೇರಲು ಕಾರಣವೂ ಇತ್ತು ಒಂದು, ಆ ಕಾರಣವು ಅದಕ್ಕರಿವಿಲ್ಲದೇ ಪೂರ್ಣವಾಯಿತು ಇಂದು...ಹಾರಿದ ದೂಳಿನ ಕಣಕ್ಕೂ ಅರಿಯಲಾಗಲಿಲ್ಲ ತಾನೇಕೆ ಹಾರಿದೆ ಎಂದು, ಭುವಿಯ ಬಿಟ್ಟು...
Loading posts...

All posts loaded

No more posts

error: Content is protected !!