- Thursday
- May 7th, 2026
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2025 -26 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ದಿನಾಂಕ 22 ಜುಲೈ 2025 ರಂದು ಅಮ್ಮು ರೈ ಕಾಂಪ್ಲೆಕ್ಸ್ ಬೆಳ್ಳಾರೆ ಇಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಐವರ್ನಾಡು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮಾಲತಿ ಬೆಳ್ಳಾರೆ ಇವರ ವೃತ್ತಿ ಸಾಧನೆಯನ್ನು ಗುರುತಿಸಿ...
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಹೊನ್ನಪ್ಪ(52 ವರ್ಷ) ಎಂಬವರು ನಾಪತ್ತೆಯಾಗಿರುವ ಘಟನೆ ಚಿಂತೆಗೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಶ್ರೀಮತಿ ಪ್ರೇಮ(50) ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಪ್ರಕರಣ ಸಂಖ್ಯೆ 38/2025 ರಂತೆ ದೂರು ನೀಡಿದ್ದಾರೆ.ಜು.22 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ, ಹೊನ್ನಪ್ಪ ಅವರು ಕೆಲಸಕ್ಕೆ ಹೋಗುವಂತೆ...
ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಮಾತ್ರ್ ಶಕ್ತಿ ಹಾಗೂ ದುರ್ಗಾ ವಾಹಿನಿಯ ಪದಾಧಿಕಾರಿಗಳ ಘೋಷಣೆ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಆಗಸ್ಟ್ 19ರಂದು ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀಕಾಂತ್ ಗೋಲ್ವಲ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ಕಡಬ ಇವರು ನೂತನ ಪದಾಧಿಕಾರಿಗಳ ಘೋಷಣೆಯನ್ನು ನೆರವೇರಿಸಿದರು. ಪ್ರಖಂಡ ಮಾತ್ರ್ ಶಕ್ತಿ ಸಹ...
ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ 10 ದಿನಗಳ ಕಾಲ ನಿರಂತರವಾಗಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಅನ್ನದಾನ ಸೇವೆ ನಡೆಯಲಿರುವುದು.ಲಕ್ಷ್ಮೀನಾರಾಯಣ ಹೃದಯ ಎಂಬ ಪೌರಾಣಿಕ ಮಂತ್ರಗಳು ಅಥರ್ವಣ ರಹಸ್ಯದಲ್ಲಿ ಹೇಳಲ್ಪಟ್ಟಿದೆ. “ಶ್ರೇಷ್ಠವಾದ ಹಾಗೂ ಅತ್ಯಂತ ಶಕ್ತಿಯುತವಾದ ಜಪ ಹಾಗೂ ಹೋಮಗಳನ್ನು ನಾಳೆ ಬುಧವಾರದಿಂದ ಪ್ರಾರಂಭಗೊಂಡು ಆಗಸ್ಟ್...
ಕರಿಕೆ ಕಾಲೋನಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ರಚನೆ
ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಬನ್ನೂರುಪಟ್ಟೆ
ಉಪಾಧ್ಯಕ್ಷರಾಗಿ ಯಮುನಾ
ಕರಿಕೆ ಕಾಲೋನಿ ಶಾಲೆಯ 25-26ನೇ ಸಾಲಿನ ನೂತನ ಶಾಲಾಭಿವೃದ್ಧಿ ಸಮಿತಿಯನ್ನು ದಿನಾಂಕ ಜು.21ರಂದು ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಬನ್ನೂರುಪಟ್ಟೆ,ಉಪಾಧ್ಯಕ್ಷರಾಗಿ ಯಮುನಾಹಾಗೂ ಸದಸ್ಯರುಗಳಾಗಿ ಕುಸುಮಾವತಿ, ಕಲಾ, ಚಂದ್ರಿಕಾ, ವಿದ್ಯಾ, ಸೌಮ್ಯ, ಜಲಜಾಕ್ಷಿ, ಜನಾರ್ಧನ, ಶ್ರೀಜೇಶ್, ವಿಶ್ವನಾಥ, ಕೃಷ್ಣ ನಾಯ್ಕ್, ಶಿವಪ್ಪ, ರೇಖಾ, ಕಮಲಾಕ್ಷ, ಅನಿತಾ, ಇಂದಿರಾ, ಕುಶಾಲಪ್ಪ ಹಾಗೂ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕರಾದ ಪ್ರಸನ್ನ ಕುಮಾರಿ,ಪದನಿಮಿತ್ತ...
ಯೋಗಾಸನದಲ್ಲಿ 07 ಕ್ಲಿಷ್ಟಕರ ಆಸನಗಳನ್ನು, ಒಂದೊಂದು ಆಸನವನ್ನು 03 ನಿಮಿಷ ಒಂದೇ ಸ್ಥಿತಿಯಲ್ಲಿ 21 ನಿಮಿಷ ನಿರಂತರ ಆಸನಗಳನ್ನು ಮಾಡುವ ಮೂಲಕ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಅಕ್ಷಯ ಬಾಬ್ಲುಬೆಟ್ಟು(ಏನೆಕಲ್ಲು) ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಇವರು ಏನೇಕಲ್ಲು ನಿವಾಸಿ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿರವರ ಪುತ್ರಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೆಕಲ್ಲು...
"ಪಶ್ಚಿಮ ಘಟ್ಟಗಳಲ್ಲಿ ಬುಡಕಟ್ಟು ಸಮುದಾಯದ ಜನರು ಅರಣ್ಯವನ್ನು ರಕ್ಷಿಸುತ್ತಿದ್ದರು, ಅವರನ್ನು ಅಪರಾಧಿ ಭಾವನೆಯಿಂದ ಕಾಣಲಾಗುತ್ತಿದೆ. ಮಾನವನೇ ಕಾಡಿಗೆ ಹೋಗಿದ್ದಾನೆ ಹೊರತು ಪ್ರಾಣಿಗಳು ನಾಡಿಗೆ ಬಂದಿಲ್ಲ. ಆಧುನಿಕರಣದ ಭರಾಟೆಯಲ್ಲಿ ಪರಿಸರ ನಾಶ ಸಂಭವಿಸುತ್ತಿದ್ದು, ಇದು ವನ್ಯಜೀವಿಗಳ ಹಾಗೂ ಮಾನವನ ಭವಿಷ್ಯಕ್ಕೆ ಕುತ್ತು ತಂದಿದೆ. ಸಾಲುಮರದ ತಿಮ್ಮಕ್ಕ, ತುಳಸಿ ಗೌಡ, ಸುಕ್ರಿ ಬೊಮ್ಮ ಗೌಡ ಇನ್ನಿತರ ಸಿದ್ದಿ ಜನಾಂಗದ...
ಸುಳ್ಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಂಟಿಯಾಗಿ ನಡೆಯಿತು. ಈ ವೇಳೆ ತಾಲೂಕು ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು.ಆರ್.ಡಬ್ಲ್ಯೂ ಪ್ರವೀಣ್...
“ಪತ್ರಕರ್ತರು ವೃತ್ತಿಯಲ್ಲಿ ಅಭಿವೃದ್ಧಿಯ ಸಿದ್ಧಾಂತದೊಂದಿಗೆ ಮುನ್ನಡೆಯಬೇಕು” ಎಂದು ವಿಜಯ ಕರ್ನಾಟಕ ದೈನಿಕದ ಹಿರಿಯ ಉಪ ಸಂಪಾದಕರಾದ ಆರ್.ಸಿ ಭಟ್ ಹೇಳಿದರು. ಅವರು ಸುಳ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. “ಹೆಚ್ಚಿನ ಜ್ಞಾನ ಪಡೆಯಲು ಪತ್ರಿಕೆಗಳು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಪುಸ್ತಕದ ಚೌಕಟ್ಟು ಮೀರಿ ಪತ್ರಿಕೆಗಳಿಂದ ಜ್ಞಾನ ಪಡೆಯಬಹುದು. ಪತ್ರಕರ್ತರು ವೃತ್ತಿಯಲ್ಲಿ...
ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಮರ್ಕಂಜ ಯುವಕ ಮಂಡಲ(ರಿ.) ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಆಗಸ್ಟ್ 03 ಆದಿತ್ಯವಾರದಂದು ಮರ್ಕಂಜ ಯುವಕ ಮಂಡಲ ಸಭಾಭವನದಲ್ಲಿ “ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ” ನಡೆಯಲಿದೆ ಎಂದು ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳು :...
Loading posts...
All posts loaded
No more posts
