ಕಲ್ಮಕಾರು : ಯುವಕ ಆತ್ಮಹತ್ಯೆ

ಕಲ್ಮಕಾರು ಗ್ರಾಮದ ಪಡ್ಪು ವಸಂತ ರವರ ಪುತ್ರ ಲೋಹಿತ್ (24) ಇಂದು ಮಧ್ಯಾಹ್ನ ಮನೆಯ ಸಮೀಪದ ಮಾವಿನಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಲೋಹಿತ್ ತಂದೆ,ಹಾಗೂ ತಂಗಿಯನ್ನು ಅಗಲಿದ್ದಾರೆ.

ಲಕ್ಷ್ಮೀ ಪಟಾಕಿ ಸುಡುವುದು ಸರಿಯೇ?! – ದೇವರ ಚಿತ್ರವಿರುವ ಪಟಾಕಿಗಳನ್ನು ಖರೀದಿಸದಿರೋಣ, ಸುಡದಿರೋಣ

ಯಾವ್ದೋ ಒಂದು ಮದುವೆ ಕಾಗದದಲ್ಲಿ ಅಚ್ಚಾಗುವ ದೇವರ ಭಾವಚಿತ್ರವನ್ನು ಕತ್ತರಿಸಿಟ್ಟು ಪೂಜಿಸುವಷ್ಟು ದೇವರ ಮೇಲೆ ನಂಬಿಕೆಯಿಟ್ಟಿರುವ ನಾವು. ಒಂದೊಮ್ಮೆ ದೇವರ ಭಾವಚಿತ್ರಕ್ಕೆ ಗೊತ್ತಿಲ್ಲದೆ ತುಳಿದರೂ ಮುಂದೇನು ಅನಾಹುತವಾದಿತೆಂದು ನೂರೊಂದು ಬಾರಿ ದೇವರನ್ನು ಜಪಿಸುವ ನಾವು. ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಸುಟ್ಟು ಸಂಭ್ರಮಿಸುವುದು ಸಾಧುವೇ..?ದೀಪಾವಳಿ ಎಂದಾಕ್ಷಣ ನಮಗೆ ತಕ್ಷಣ ನಮಗೆಪಟಾಕಿಗಳೇ! ಅದೂ ಹಬ್ಬದ ಸಂಭ್ರಮದ ತೀವ್ರತೆಯನ್ನು ಅಳತೆ...
Ad Widget

ಜಾಲುಮನೆ ಕಿರುಸೇತುವೆ ಕುಸಿತ- ಮಾಜಿ ತಾ.ಪಂ.ಸದಸ್ಯ ಪಿ.ಸಿ.ಜಯರಾಮ ಸ್ಪಂದನೆ

ಕೊಲ್ಲಮೊಗ್ರು ಗ್ರಾಮದ ಜಾಲುಮನೆ ಸಂಪರ್ಕಿಸುವ ಜಾಲುಮನೆ ಕಿರು ಸೇತುವೆ ಭಾರಿ ಮಳೆಗೆ ಕುಸಿತಗೊಂಡಿದೆ. ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ನೀಡಿದ ಮಾಜಿ ತಾಪಂ ಸದಸ್ಯ ಪಿ ಸಿ ಜಯರಾಮ್ ಸೇತುವೆ ವೀಕ್ಷಿಸಿ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಕೂಡಲೇ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೇತುವೆ ಕುಸಿತದಿಂದ ಸುಮಾರು...

ಪೈಚಾರ್: ಈದ್ ಮಿಲಾದ್ ಸಮಿತಿ ರಚನೆ

ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಈದ್ ಮಿಲಾದ್ ಆಚರಣೆ ಅಂಗವಾಗಿ ಪೈಚಾರ್ ಈದ್ ಮಿಲಾದ್ ಸಮಿತಿ ರಚನೆ ಅ. 16. ರಂದು ಪೈಚಾರ್ ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ. ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಮಿಲಾದ್ ಸಮಿತಿ ಪೈಚಾರ್ ಅಧ್ಯಕ್ಷರಾದ ಆಶ್ರಫ್ ಪೈಚಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಪಿ ಉಪಸ್ಥಿತರಿದ್ದರು. ಕೊರೋನಾ ವೈರಸ್...

ಮೈಸೂರು ಸರಳ ದಸರಾಕ್ಕೆ ಚಾಲನೆ

ಜಗವಿಖ್ಯಾತ ಮೈಸೂರು ದಸರಾಕ್ಕೆ ವೈಭವಕ್ಕೆ ಇಂದು ಚಾಲನೆ ದೊರೆತಿದೆ. ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ ರವರು ಬೆಳಿಗ್ಗೆ 7.40ರ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪ, ಡಿ.ಸಿ.ಯಂ. ಅಶ್ವತ್ಥ್ ನಾರಾಯಣ, ಶಾಸಕರಾದ ರಾಮದಾಸ್, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು....

ಶಿರಾ ವಿಧಾನಸಭಾ ಕ್ಷೇತ್ರದ ಜಾಲತಾಣದ ಉಸ್ತುವಾರಿಯಾಗಿ ಸೂರಜ್ ಹೊಸೂರು

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ನಡೆಸುವ ಜವಾಬ್ದಾರಿಯನ್ನು ಸೂರಜ್ ಹೊಸೂರು ಅವರನ್ನು ಕೆಪಿಸಿಸಿ ನೇಮಕ ಮಾಡಿದೆ. ಇವರಿಗೆ ನಾದೂರು ಜಿ.ಪಂ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಚೆಂಬು ಗ್ರಾಮದ ಹೊಸೂರಿನವರಾದ ಇವರು ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ.

ಬಿಳಿಯಾರಿನಲ್ಲಿ ಕಾಳಿಂಗ ಸರ್ಪ ಸೆರೆ

ಅರಂತೋಡು ಬಿಳಿಯಾರಿನಲ್ಲಿ ವಿದ್ಯಾರ್ಥಿ ನಿಲಯದ ಬಳಿ ಪತ್ತೆಯಾದ ಕಾಳಿಂಗ ಸರ್ಪವನ್ನು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ   ಉರಗ ತಜ್ಞ ಶಿವಾನಂದ ಕುಕ್ಕುಂಬಳ ರವರು ಹಿಡಿದು ಸುಳ್ಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ  ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ  ಗಂಗಾಧರ ಬನ, ಶರಫು ಅರಂತೋಡು,ರಿಯಾಝ್ ಸಣ್ಣಮನೆ,ಸುಹೇಲ್ ಅರಂತೋಡು,ಅಸ್ಲಂ ಅರಂತೋಡು,ನಾಸಿರ್ ಪೆರಾಜೆ ಯವರು ಸಹಕರಿಸಿದರು .

ಅ. 24: ಬಾಳಿಲದಲ್ಲಿ ಶ್ರೀ ಶಾರದೋತ್ಸವ

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ. 24 ರಂದು ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಲಿದೆ. ಅ. 24 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ಶಾರದಾ ದೇವಿಯ ವಿಗ್ರಹ ಆಗಮನದ ಬಳಿಕ ಗಣಪತಿ ಹವನ, ಶಾರದಾ ದೇವಿಯ ಪ್ರತಿಷ್ಠಾಪನೆ, ಶ್ರೀದೇವಿಗೆ...

ತಲಕಾವೇರಿ : ನಾಳೆ ತೀರ್ಥೋದ್ಭವ

ಮಡಿಕೇರಿ ಭಾಗಮಂಡಲದ ತಲಕಾವೇರಿಯಲ್ಲಿ ನಾಳೆ (ಅ. 17) ಬೆಳಿಗ್ಗೆ 7.03 ರ ಕನ್ಯಾ ರಾಶಿಯಲ್ಲಿ ತೀರ್ಥೋದ್ಭವ ಸಂಭ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.

ಅಡ್ಕಾರು: ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಸಮಾರೋಪ

ಗ್ರಾಮ ವಿಕಾಸ ಸಮಿತಿ ಮಂಗಳೂರು, ವಿವೇಕಾನಂದ ವಿಧ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇವುಗಳ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ನೈಪುಣ್ಯ ತರಬೇತಿ...
Loading posts...

All posts loaded

No more posts

error: Content is protected !!