- Tuesday
- August 4th, 2026
ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಎಂಬವರ ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶ್ವಾನ ದಳ ಆಗಮನ ಪೊಲೀಸ್ ಶ್ವಾನದಳದ ಶ್ವಾನ ಆಗಮಿಸಿ, ಮನೆಯೊಳಗೆ ಹೋಗಿ ಅಲ್ಲಿಂದ ಹೊರಬಂದು ಸುಣ್ಣಮೂಲೆ ರಸ್ತೆಯಾಗಿ ವಿಷ್ಣುಮೂರ್ತಿ ಒತ್ತೆಕೋಲದ ದ್ವಾರದ ತನಕ ಓಡಿ ಹಿಂತಿರುಗಿತೆಂದು ತಿಳಿದುಬಂದಿದೆ. ಸಂಜೆ ವೇಳೆಗೆ ಸ್ಥಳಕ್ಕೆ ಮಂಗಳೂರಿನಿಂದ...
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ, ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್ ನ ವೇಣುಗೋಪಾಲ ಇವರ ಹತ್ಯೆ ಸೇರಿದಂತೆ...
ಸುಳ್ಯದ ಜಾಲ್ಸೂರಿನ ಸಿಂಡಿಕೇಟ್ ಬ್ಯಾಂಕ್ ಸಮೀಪವಿರುವ ಜೋಗಿ ಬೈದರಕೊಳಂಜಿ ಎಂಬವರ ಅಂಗಡಿಯ ಬೀಗ ಮುರಿದ ಕಳ್ಳರು ಡ್ರಯರ್ ನಲ್ಲಿದ್ದ ಚಿಲ್ಲರೆ ಹಣ ಸೇರಿದಂತೆ ಸುಮಾರು ಎರಡು ಸಾವಿರ ನಗದು ಹಾಗೂ ಅಂಗಡಿ ಸಾಮಾಗ್ರಿಗಳಾದ ಸೋಪು, ಜ್ಯೂಸ್ ಬಾಟಿಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ. ಹಾಗೆಯೇ ಗೂಡಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಮಾರಾಟಕ್ಕಿಟ್ಟಿದ್ದ ಕೊಡೆ ಸೇರಿದಂತೆ ಅಂಗಡಿ ಸಾಮಾಗ್ರಿಗಳನ್ನುಕಳವುಗೈದ...
ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ದೊಡ್ಡತೋಟ ಎಂಬಲ್ಲಿ ಪಾದಚಾರಿಯೊಬ್ಬರಿಗೆ ಸರಕಾರಿ ಬಸ್ಸು ತಾಗಿದ ಘಟನೆ ವರದಿಯಾಗಿದೆ. ಬಸ್ಸು ತಾಗಿದ ಪರಿಣಾಮ ಪಾದಚಾರಿ ಬಿದ್ದರೆಂದೂ ಅಲ್ಪಸ್ವಲ್ಪ ಗಾಯಗಳಿಂದ ಪಾದಚಾರಿ ಪಾರಾದರು.bಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಉಪಚರಿಸಿದ್ದು ಮರ್ಕಂಜದ ಕುಶಾಲಪ್ಪ ರೆಂಜಾಳ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಕಾಲಚಕ್ರದ ಆಟವ ಅರಿತವರಾರು, ಬದುಕ ಪಯಣದಿ ಏಳು-ಬೀಳುಗಳ ಕಾಣದವರಾರು...? ಏಳು-ಬೀಳುಗಳ ಈ ಹಾದಿಯಲ್ಲಿ ಬಂದಂತಹ ಕಷ್ಟಗಳೆಷ್ಟೋ, ನೋವುಗಳೆಷ್ಟೋ ಲೆಕ್ಕವಿರಿಸಿದವರಾರು...? ಲೆಕ್ಕವಿಲ್ಲದಷ್ಟು ಕಷ್ಟಗಳ ಕಟ್ಟಿಟ್ಟು, ನೋವುಗಳ ಬಚ್ಚಿಟ್ಟು ಮುನ್ನಡೆದು ಬದುಕಿನಲ್ಲಿ ಮೇಲೇರಿದಾಗ ನಮ್ಮವರು ಎಂದು ಬಂದವರೆಷ್ಟೋ, ಕೆಳಗುರುಳಿದಾಗ ತುಳಿದು ನಡೆದವರೆಷ್ಟೋ...? ಮೇಲೇರಿದಾಗ ಜೊತೆ ನಡೆದು ಬಂದವರು, ಕೆಳಗುರುಳಿದಾಗ ತುಳಿದು ಸಾಗಿದವರ ಮಧ್ಯೆ ಕಾಲ ಕಸವಾಯಿತು ಈ ಬದುಕು......
ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರ ಭಾಗದ ಜಾಲುಮನೆ - ಅಂಬೆಕಲ್ಲು- ಗೋಳ್ಯಾಡಿ ಸಂಪರ್ಕಿಸುವ ರಸ್ತೆಯನ್ನು ಹಲವು ಫಲಾನುಭವಿಗಳು ಶ್ರಮದಾನದ ಮೂಲಕ ದುರಸ್ತಿಗೊಳಿದರು.
ಸುಳ್ಯದಲ್ಲಿ ಸಿಡಿಪಿಒ ಆಗಿದ್ದು ಹಿರಿಯ ಸಹಾಯಕ ನಿರ್ದೇಶಕರಾಗಿ ಪದೋನ್ನತಿಗೊಂಡ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಜು.15 ರಂದು ಸುಳ್ಯದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ಸಿಡಿಪಿಒ ಶ್ರೀಮತಿ ಶೈಲಜಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ರವರು ಶ್ರೀಮತಿ ರಶ್ಮಿಯವರನ್ನು ಸನ್ಮಾನಿಸಿದರು.ರಶ್ಮಿಯವರ ಪತಿ...
ರಾತ್ರಿ ವೇಳೆ ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನಾಭರಣ ಕಳವುಗೈದಿರುವ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯ ಬುಡ್ಲೆಗುತ್ತುವಿನಲ್ಲಿ ಜು.16ರಂದು ರಾತ್ರಿ ಸಂಭವಿಸಿದೆ.ಯುರೇಶ್ ಬುಡ್ಡೆಗುತ್ತು ಅವರ ಸಂಬಂಧಿಯೊಬ್ಬರು ಜು.16ರಂದು ಅಪರಾಹ್ನ ನಿಧನರಾಗಿದ್ದು, ಯುರೇಶರವರು ಮನೆಯ ಬಾಗಿಲು ಹಾಕಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಮನೆಗೆ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದ...
ಮಡಪ್ಪಾಡಿ ಶೀರಡ್ಕ ಸಂಪರ್ಕ ರಸ್ತೆಯು ಕೆಸರುಮಯವಾಗಿ ಸಂಚಾರಕ್ಕೆ ಕಷ್ಟಸಾಧ್ಯವಾಗಿತ್ತು. ಶೀರಡ್ಕ ಭಾಗದ ರಸ್ತೆಯ ಫಲಾನುಭವಿಗಳು ಶ್ರಮದಾನ ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿ ಚರಳು ಹಾಕಿ ದುರಸ್ತಿಗೊಳಿಸಿದರು. ಶ್ರಮದಾನದಲ್ಲಿ ಮಾಧವ ಎಸ್,ತಾರಾನಾಥ ಎಸ್,ರಚನ್ ಎಸ್,ರಂಜಿತ್ ಎಸ್,ರಕ್ಷಿತ್ ಎಸ್,ದುಷ್ಯಂತ್ ಎಸ್,ಸುಮಂತ್ ಎಸ್,ಕಿರಣ್ ಎಸ್,ವಿನೋದ್ ಎಸ್,ವೇಣುಗೋಪಾಲ್ ಎಸ್,ಲೋಕಪ್ಪ ಎಸ್,ಅಜಿತ್ ಎಸ್,ತಾರಾನಾಥ ಚಿದ್ಗಲ್,ಸಚಿನ್ ಬಿ,ಲೋಹಿತ್ ಬಿ,ಸುಧೀನ್ ಬಿ,ವಸಂತ ಬಿ,ಕುಶಾಲಪ್ಪ ಎ,ಕುಶನ್ ಎ,ಹಿಮಕರ...
ಬರಹ : ಮುರಲೀ ಮೋಹನ್ ಚೂಂತಾರು ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್ನ ಸೋಂಕಿನಿಂದ ಬರುವ ಈ ಜ್ವರ,...
Loading posts...
All posts loaded
No more posts
