ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿ ಅಧ್ಯಕ್ಷರಾಗಿ ಪಿ.ಎ. ಮುನೀರ್ ಸಖಾಫಿ ಪುನರಾಯ್ಕೆ

ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಮಿತಿಯ ಅಧ್ಯಕ್ಷರಾದ ಪಿ.ಎ.ಮುನೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ ಒಂದರಂದು ಬಿಜೆಯಂ ವಠಾರದಲ್ಲಿ ನಡೆಯಿತು.ಸಿ.ಎಚ್.ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುಆ ಮೂಲಕ ಸಭೆಗೆ ಚಾಲನೆ ನೀಡಿ ಸಭೆಯನ್ನು ಉದ್ಘಾಟಿಸಿದರು. ಹಾಫಿಳ್ ಯೂನುಸ್ ಎಂ.ಪಿ. ಖಿರಾಅತ್ ಪಟಿಸಿದರು. ಎಚ್ಐಎಂ ಸದರ್ ಉಸ್ತಾದ್ ಅಲ್ ಹಾಜ್ ಬಿ. ಎಂ.ಇಸ್ಮಾಯಿಲ್ ಸಖಾಫಿ ಮುತ ಅಲ್ಲಿಂ...

ಪಂಜ : ಪೌಷ್ಟಿಕಾಹಾರ ವಿತರಣೆ, ಸ್ತನ್ಯಪಾನ ಸಪ್ತಾಹ

ಪಂಜ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕಾಹಾರ ವಿತರಣೆ ನಡೆಯಿತು. ವನಿತ ಸಮಾಜದ ಅಧ್ಯಕ್ಷೆ ಹೇಮಲತ ಸಿ ವಿತರಿಸಿದರು. ಆರೋಗ್ಯ ಕಾರ್ಯಕರ್ತೆ ಕಮಲ ಎ.ಎಸ್., ಆಶಾ ಕಾರ್ಯಕರ್ತೆ ಪುಷ್ಪಾವತಿ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಹಾಗೂ ಪೋಷಕರು, ಫಲಾನುಭವಿಗಳು ಉಪಸ್ಥಿತರಿದ್ದರು.
Ad Widget

ರಾಮ ಮಂದಿರ ಶಂಕು ಸ್ಥಾಪನೆ ಹಿನ್ನೆಲೆಯಲ್ಲಿ ಯಾವುದೇ ಕೋಮು ಪ್ರಚೋದಕ ಸಂದೇಶ ಹಾಕಬಾರದೆಂದು ಬೆಳ್ಳಾರೆ ಪೊಲೀಸರಿಂದ ಸಾರ್ವಜನಿಕರಿಗೆ ಸೂಚನೆ

ಜುಲೈ 05 ರಂದು ಅಯೋಧ್ಯೆ ಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಇರುವುದರಿಂದ ಸಾರ್ವಜನಿಕರು ಯಾವುದೇ ಕೋಮುಗಲಭೆಗಳನ್ನು ಸೃಷ್ಟಿಸುವಂತಹ ಸಂದೇಶ ಗಳನ್ನು ವಾಟ್ಸಾಪ್ ಅಥವಾ ಫೇಸ್ಬುಕ್ನಲ್ಲಿ ಒಂದು ಧರ್ಮಕ್ಕೆ ಮತ್ತು ಇನ್ನೊಂದು ಧರ್ಮಕ್ಕೆ ಧಕ್ಕೆಯಾಗುವಂತೆ ಯಾವುದೇ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು ಮತ್ತು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು. ಯಾರಾದರೂ ಅಂತ ಸಂದೇಶಗಳನ್ನು...

ಸುಳ್ಯ ನಗರ‌ ಪರಿಸರದ ಜನತೆಗೆ ಆ.5,‌ 6ರಂದು ಕೋವಿಡ್_19‌ ಆ್ಯಂಟಿಜನ್ ರ್ಯಾಪಿಡ್ ಪರೀಕ್ಷೆ. ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

ಕೋವಿಡ್ 19 ರ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಆಡಳಿತ, ನಗರ ಪಂಚಾಯತ್ ಸುಳ್ಯ, ಆರೋಗ್ಯ ಇಲಾಖೆ ಸುಳ್ಯ, ವರ್ತಕ ಸಂಘ ಸುಳ್ಯ, ಲಯನ್ಸ್ ಮತ್ತು ರೋಟರಿ ಕ್ಲಬ್ ಸುಳ್ಯ ಇದರ ಸಹಭಾಗಿತ್ವದಲ್ಲಿ ಇಂದು ಸುಳ್ಯ ತಾಲೂಕು ಕಚೇರಿಯಲ್ಲಿ ಸಭೆ ನಡೆಯಿತು. ತಹಶೀಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಗಸ್ಟ್ 5 ಮತ್ತು 6ರಂದು...

ಯಶಸ್ವಿಯಾಗಿ ಮುನ್ನಡೆಯುತ್ತಿರುವ ದ್ವಿತೀಯ ಹಂತದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ( ರಿ), ಸಹಕಾರ ಭಾರತಿ ದ. ಕ. ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಎಂ.ಸಿ.ಸಭಾಂಗಣದಲ್ಲಿ ನಡೆದ ಎರಡನೇ ವಾರದ " ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ " ಇದರ ಉದ್ಘಾಟನಾ ಕಾರ್ಯಕ್ರಮ ವನ್ನು ಪಶು...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(03.08.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಹಳೆಗೇಟು ಪರಿಸರದಲ್ಲಿ ವಾಹನ ಅಪಘಾತಗಳ ಎರಡು ಪ್ರತ್ಯೇಕ ಘಟನೆಗಳು

ಸುಳ್ಯ ಹಳೆಗೇಟು ಪರಿಸರದಲ್ಲಿ ಆಗಸ್ಟ್ 2ರಂದು ರಾತ್ರಿ ವೇಳೆ ಹಾಗೂ ಆಗಸ್ಟ್ ಮೂರನೇ ತಾರೀಕಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಎರಡು ಪ್ರತ್ಯೇಕ ಪ್ರತ್ಯೇಕ ವಾಹನ ಅಪಘಾತಗಳು ಸಂಭವಿಸಿದ ಘಟನೆ ವರದಿಯಾಗಿದೆ.ರಾತ್ರಿ ನಡೆದ ಅಪಘಾತ ಮೊಗರ್ಪಣೆ ಮಸೀದಿಯ ಮುಂಭಾಗದಲ್ಲಿ ಸಂಭವಿಸಿದ್ದು ಪುತ್ತೂರಿನಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಹಾಗೂ ಸುಳ್ಯದಿಂದ ಪುತ್ತೂರು ಕಡೆ ಹೋಗುತ್ತಿದ್ದ ಮತ್ತೊಂದು ಕಾರು...

ಅಣ್ಣ ತಂಗಿಯರ ಈ ಬಂಧ… ಜನುಮ ಜನುಮಗಳ ಅನುಬಂಧ…

ನಮ್ಮಲ್ಲಿ ಪರಸ್ಪರ ಭಾವಾನಾತ್ಮಕ ಸಂಬಂಧ ಗಳಿಗೆ ಹಣ , ಒಡವೆಗಳಿಗಿಂತಲೂ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ರಕ್ತ ಸಂಬಂಧಗಳನ್ನು ಮೀರಿಸಿದ ಕೆಲವು ಸಂಬಂಧಗಳು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವ ವಹಿಸುತ್ತದೆ . ಒಂದು ಹಂತದಲ್ಲಿ ಸಂಭಂದಗಳನ್ನು ಬೆಸೆಯುವ ಈ ನಂಬಿಕೆ ಎನ್ನುವ ಕೊಂಡಿಯನ್ನು ಆಚರಣೆಗಳ ಮೂಲಕ ನಮ್ಮ ಎದುರಿಗೆ ಇಡಲಾಗುತ್ತದೆ . ರಕ್ಷಾಬಂಧನವು ಒಡಹುಟ್ಟಿದವರಲ್ಲದೆ ಹೊರಗಿನವರನ್ನು ಸಹೋದರರಂತೆ ಭಾವಿಸಿ...

ಕೊಡಗು ಜಿಲ್ಲೆ ಕೋವಿಡ್ 19 ರ ಹಿನ್ನೆಲೆಯಲ್ಲಿ ಮೃತಪಟ್ಟವರ ಸಂಖ್ಯೆ 10 ಕ್ಕೆ ಏರಿಕೆ

ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10 ಕ್ಕೇರಿದೆ.ಮಡಿಕೇರಿ ನಗರ ಮಹದೇವಪೇಟೆ ಬಳಿಯ ಅಬ್ದುಲ್ ಕಲಾಂ ಲೇ ಔಟ್ ನ ನಿವಾಸಿ, 64 ವರ್ಷದ ಪುರುಷರೊಬ್ಬರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಮೂರು ದಿನಗಳಿಂದ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿರುತ್ತದೆ.ಕೆಮ್ಮಿನ ಸಂಬಂಧ ಇವರು...

ಕನಕಮಜಲು: ಮುಗೇರು ಮಾಣಿಮಜಲು ಶಾಲೆಯಲ್ಲಿ ಶ್ರಮದಾನ

ಯುವಕ ಮಂಡಲ ಕನಕಮಜಲು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಸಾರ್ವಜನಿಕರಿಂದ ‌ ವತಿಯಿಂದ ‌ಸರಕಾರಿ‌ ಕಿರಿಯ ಪ್ರಾಥಮಿಕ ಶಾಲೆ ಮುಗೇರು ಮಾಣಿಮಜಲು ಇಲ್ಲಿ‌ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯಲಾಯಿತು ಮತ್ತು ಶಾಲಾ ಆವರಣದಲ್ಲಿರುವ ಕೃಷಿ ತೋಟವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ‌ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕುದ್ಕುಳಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ‌...
Loading posts...

All posts loaded

No more posts

error: Content is protected !!