ಮಂಗಳೂರು ವಿಭಾಗದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಆಯ್ಕೆ

ವಿದ್ಯಾರ್ಥಿ ನಾಯಕತ್ವದಲ್ಲಿ ಮಹತ್ವದ ಬೆಳವಣಿಗೆಯಾಗಿರುವಂತೆ, ಮಂಗಳೂರು ವಿಭಾಗದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ 2025-26 ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಆಯ್ಕೆಯಾಗಿದ್ದಾರೆ. ಮಂಗಳೂರು ವಿಭಾಗವು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಈ ಮೂರು ಜಿಲ್ಲೆಗಳನ್ನೊಳಗೊಂಡ ದೊಡ್ಡ ಶೈಕ್ಷಣಿಕ ವಲಯವಾಗಿದ್ದು, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಸ್ಟುಡೆಂಟ್ ಫೋರಂ ಅಧ್ಯಕ್ಷರೂ ಆಗಿದ್ದಾರೆ. ಹಲವಾರು ವರ್ಷಗಳಿಂದಲೂ...

ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು‌.ಜೂನಿಯರ್ ವಿಭಾಗದ ಉರ್ದು ನ ಅತ್ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ  ವಿದ್ಯಾರ್ಥಿಗಳಾದ ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್ ಮತ್ತು ಮುಹಮ್ಮದ್ ಅಂಫಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ನಮ್ಮ...
Ad Widget

ಚೊಕ್ಕಾಡಿ : ಮಕ್ಕಳ ದಿನಾಚರಣೆ

ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಹಾಗೂ ಸ್ತ್ರೀ ಶಕ್ತಿ ಸಂಘ ಚೊಕ್ಕಾಡಿ ಇದರ ವತಿಯಿಂದ ಚೊಕ್ಕಾಡಿ ಅಂಗನವಾಡಿ ಪುಟಾಣಿ ಮಕ್ಕಳಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳಿಗೆ  ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು. ಜೊತೆಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ, ಕಾರ್ಯದರ್ಶಿ...

ಸುಳ್ಯ : ಎನ್.ಎಂ.ಸಿಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ ನ.16(ಆದಿತ್ಯವಾರ) ಅಸೈಗೊಳಿ(ಕೊಣಾಜೆ) ಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ   ಭಾಗವಹಿಸಿ ಸಮೂಹ ಜನಪದ ಗೀತೆಯಲ್ಲಿ ಪ್ರಥಮ ಅಭಿಷೇಕ್ ಎಂ( ದ್ವಿತೀಯ ಬಿ.ಎಸ್ಸಿ), ಚೈತ್ರ.ಕೆ.ಟಿ(ತೃತೀಯ ಬಿ.ಎಸ್ಸಿ), ಜೀಷ್ಮ.ಬಿ.ಎಸ್(ತೃತೀಯ ಬಿ.ಎಸ್ಸಿ), ಅಕ್ಷತಾ.ಸಿ(ತೃತೀಯ ಬಿ.ಎಸ್ಸಿ), ಮನಸ್ವಿ.ಪಿ(ತೃತೀಯ ಬಿ.ಎಸ್ಸಿ), ಪ್ರೀಕ್ಷಾ.ಎಂ(ದ್ವಿತೀಯ ಬಿ.ಎಸ್ಸಿ), ಕವನ ಕೊಯಿಂಗಾಜೆ (ದ್ವಿತೀಯ ಬಿ.ಎಸ್ಸಿ), ಯಶಿತಾ.ಹೆಚ್( ಬಿ.ಸಿ.ಎ), ಯುಕ್ತಿ.ಕೆ.ಎಂ(ದ್ವಿತೀಯ...

ಪಳ್ಳಿಮಜಲು : ಮಾಸಿಕ ಸ್ವಲಾತ್ ಮಜ್ಲಿಸ್

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಮಸ್ಜಿದ್ ಅಬೂಬಖರ್ ಸ್ವಿದ್ದೀಖ್(ರ)ಇಲ್ಲಿ ಸಾಪ್ತಾಹಿಕವಾಗಿ ನಡೆದು ಬರುತ್ತಿರುವ ಸ್ವಲಾತ್ ವೇದಿಕೆಯ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಅಧ್ಯಯನ ತರಗತಿ ಕಾರ್ಯಕ್ರಮ ನ-6 ರಂದು ಪಳ್ಳಿಮಜಲು ಮಸೀದಿಯಲ್ಲಿ ನಡೆಯಿತು.ಅರಿಕ್ಕಿಲ ಮಾಡಾವು ಜುಮುಅ: ಮಸೀದಿಯ ಮುದರ್ರಿಸ್ ಜುನೈದ್ ಸಖಾಫಿ ಜೀರ್ಮುಕಿ ಅಧ್ಯಯನ ತರಗತಿಯನ್ನು ನಡೆಸಿ ದು:ಆ ನೆರವೇರಿಸಿದರು.ಸ್ಥಳ ಸಾನಿಧ್ಯದಲ್ಲಿ ಕರಿಂಬಿಲ ಮದರಸ ಅಧ್ಯಾಪಕರಾದ ಮಹಮೂದ್...

ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಎಲಿಮಲೆ ಪುನರಾಯ್ಕೆ – ಉಪಾಧ್ಯಕ್ಷರಾಗಿ ಹಸೈನಾರ್ ಎ.ಕೆ ಕಲ್ಲುಗುಂಡಿ

ಸುಳ್ಯದ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಎಲಿಮಲೆ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಸೈನಾರ್ ಎ.ಕೆ ಕಲ್ಲುಗುಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಮೇನಾಲ ಈಶ್ವರಮಂಗಲ, ಮಹಮ್ಮದ್ ರಫೀಕ್ ಸಿ.ಎಂ.ಐವತ್ತೊಕ್ಕು, ಕೆ.ಬಿ.ಇಬ್ರಾಹಿಂ ಮಂಡೆಕೋಲು, ಮುಹಿಯುದ್ದೀನ್ ಹಾಜಿ ಕೆ.ಎಂ, ಮಹಮ್ಮದ್ ಅನ್ಸಾರ್ ಬೆಳ್ಳಾರೆ, ಮಹಮ್ಮದ್...

ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಗೌರವಾರ್ಪಣೆ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ  ಸಂಪೂರ್ಣ ಹವಾನಿಯಂತ್ರಿತ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲು ಕಾರಣೀಕರ್ತರಾದವರಿಗೆ  ಗೌರವಾರ್ಪಣಾ ಕಾರ್ಯಕ್ರಮ ನ.15 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಚೇತನಾ ಇವರು ವಹಿಸಿದ್ದರು, ಕಾರ್ಯಕ್ರಮವನ್ನು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಪೆರುವಾಜೆ ಉದ್ಘಾಟಿಸಿ ಶುಭ ಹಾರೈಸಿದರು.ಸಂಪೂರ್ಣ ಹವಾನಿಯಂತ್ರಿತ ಸ್ಮಾರ್ಟ್ ಅಂಗನವಾಡಿ...

ಸ.ಹಿ ಪ್ರಾ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ನೂತನ ಶೌಚಾಲಯ ಉದ್ಘಾಟನೆ

ನರೇಗಾ ಯೋಜನೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ಸ್ಥಾಪಿತವಾದ ನೂತನ ಶೌಚಾಲಯವನ್ನು ದಿನಾಂಕ ನ.16 ಭಾನುವಾರದಂದು ಸುಳ್ಯ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು "ಮಾರ್ಗದಿಂದ ಶಾಲೆಗೆ ಇರುವ ದಾರಿಗೆ ಕಾಂಕ್ರೀಟೀಕರಣ ಹಾಗೂ 114 ವಿದ್ಯಾರ್ಥಿಗಳಿರುವ ಶಾಲೆಗೆ ಮುಂದಿನ ನೇಮಕಾತಿಯಲ್ಲಿ ಖಾಯಂ ಶಿಕ್ಷಕರನ್ನು ನೇಮಕ...

ಕುಕ್ಕೆ ಸುಬ್ರಹ್ಮಣ್ಯ : ಲಕ್ಷ ದೀಪೋತ್ಸವಕ್ಕೆ ಭರದಿಂದ ಸಾಗಿದೆ ಸಿದ್ಧತೆ

ಸುಬ್ರಹ್ಮಣ್ಯ ನ.16 : ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ  ಜಾತ್ರೋತ್ಸವದ ಹಿನ್ನೆಲೆಯಲ್ಲಿ  ನವೆಂಬರ್ 19ರಂದು ಬುಧವಾರ ನಡೆಯುವ ಲಕ್ಷದೀಪೋತ್ಸವದ ಸಿದ್ಧತೆಗಳ ಬಗ್ಗೆ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ರವಿವಾರ ನಡೆಯಿತು.ಸಭೆಯಲ್ಲಿ ಲಕ್ಷದೀಪ ದಿನದಂದು ರಥಬೀದಿ ಹಾಗೂ ಪ್ರಮುಖ ಮಾರ್ಗಗಳಲ್ಲಿ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಪ್ರಕಟಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪೊಲೀಸ್ ಇಲಾಖೆಯ ಸಹಕಾರ ಹಾಗೂ ಸಹ ಭಾಗಿತ್ವದೊಂದಿಗೆ,ಯಾರೂ ಕೂಡ ತಮ್ಮ ಸಾಕು ಪ್ರಾಣಿಗಳಾದ ದನ, ಕರು, ಎತ್ತು, ಎಮ್ಮೆ, ಕೋಣ, ಬೆಕ್ಕು & ಬೆಕ್ಕು ಮರಿಗಳು ಮತ್ತು ನಾಯಿ & ನಾಯಿ ಮರಿಗಳು ಮುಂತಾದ ಜಾನುವಾರುಗಳನ್ನು  ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ರಥ ಬೀದಿಗಳಿಗೆ ಬಿಡದೆ ನಮ್ಮೂರಿನ...
Loading posts...

All posts loaded

No more posts

error: Content is protected !!