- Saturday
- May 17th, 2025

ಸುಬ್ರಹ್ಮಣ್ಯ ಮೇ 16: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕುಕ್ಕೆ ಸುಬ್ರಹ್ಮಣ್ಯ ಲೀಜನ್ ನ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸೀನಿಯರ್ ವೆಂಕಟೇಶ್.ಎಚ್.ಎಲ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಸೀನಿಯರ್ ಗೋಪಾಲ್ ಎಣ್ಣೆಮಜಲ್, ಕೋಶಾಧಿಕಾರಿಯಾಗಿ ಸೀನಿಯರ್ ಮೋನಪ್ಪ.ಡಿ, ನಿಕಟ ಪೂರ್ವ ಅಧ್ಯಕ್ಷರಾಗಿ ಸೀನಿಯರ್ ರವಿ ಕಕ್ಕೆ ಪದವು, ಉಪಾಧ್ಯಕ್ಷರುಗಳಾಗಿ ಸೀನಿಯರ್ ಪ್ರಕಾಶ್ ಕಟ್ಟೆಮನೆ, ಹಾಗೂ ಸೀನಿಯರ್ ಅಶೋಕ್ ಮೂಲೆ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಐನೆಕಿದು ವಾರ್ಡ್ ನ ತೆರವಾದ ಒಂದು ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯ ಶ್ರೀಮತಿ ಮೋಹಿನಿ ಶ್ರೀಧರ ಅಂಙಣ ರವರು ಮೇ.14 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಾಮಪತ್ರ ಸಲ್ಲಿಕೆ ಮಾಡಲು ನಿನ್ನೆ ಕೊನೆಯ ದಿನವಾಗಿದ್ದು, ಇತರೆ ಯಾವುದೇ ಪಕ್ಷಗಳು ಅಥವಾ ವ್ಯಕ್ತಿಗಳು ನಾಮಪತ್ರ ಸಲ್ಲಿಸದೇ ಇರುವ...

ದೇವಚಳ್ಳ ಗ್ರಾಮದ ತಳೂರು ನಿವಾಸಿ ತೀರ್ಥರಾಮ ಗೌಡ ಬಾಳೆತೋಟ ಅಲ್ಪ ಕಾಲದ ಅಸೌಖ್ಯದಿಂದ ಮೇ 13 ರಂದು ಸ್ವಗೃಹ ತಳೂರು ಮನೆಯಲ್ಲಿ ನಿಧನರಾದರು. ಮೃತರು ಪತ್ನಿ ಶಶಿಕಲಾ, ಪುತ್ರರಾರ ಯತಿನ್, ಕಾರ್ತಿಕ್, ದಿವಿನ್ ಹಾಗೂ ಕುಟುಂಬಸ್ಥರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಶ್ರೀ ಪಿ. ಜಿ ಅಂಬೆಕಲ್ ರವರು ನಿವೃತ್ತ ಮುಖ್ಯಶಿಕ್ಷಕರಾಗಿದ್ದು, "ಇದು ಎಂಥಾ ಲೋಕವಯ್ಯಾ" ಅವರು ರಚಿಸಿದ ಐದನೇ ಕೃತಿ ಯಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಕಥಾ ಸಂಕಲನಕ್ಕೆ ಕೊಟ್ಟ ಶೀರ್ಷಿಕೆಯ ಕಥೆ ಈ ಸಂಕಲನದಲ್ಲಿ ಇಲ್ಲದಿದ್ದರೂ, ಈ ಎಲ್ಲ ಕಥೆಗಳ ಮೂಲಕ ಕಟ್ಟಿರುವ ಬದುಕಿನ ಬಿಂಬ ಈ ಶೀರ್ಷಿಕೆಗೆ ತಕ್ಕಂತೆ ಸೂಕ್ತ...

ಕಲ್ಮಡ್ಕ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಕಲ್ಮಡ್ಕ ಗ್ರಾಮ ಪಂಚಾಯತ್ ಸಹಭಾಗಿತ್ವ ವಾರ್ಷಿಕ ಕ್ರಿಯಾಯೋಜನೆ(GPDP) ತಯಾರಿಸುವ ಕುರಿತಾಗಿ ವಿಶೇಷ ಸಭೆಯನ್ನು ಮೇ. 13ರಂದು ಕಲ್ಮಡ್ಕ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಡೆಯಿತು. ಸಹಭಾಗಿತ್ವ ವಾರ್ಷಿಕ(GPDP) ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ,...

ರೆನ್ಶಿ ಯೋಗ ಸಂಸ್ಥೆ ದುಬೈ ಯ.ಎ.ಇ, ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಸಂಸ್ಥೆ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಮೇ.09 ರಿಂದ 12 ರವರೆಗೆ ದುಬೈಯಲ್ಲಿ ನಡೆದ ದುಬೈ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್-2025 ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಕ್ಷಯ ಬಾಬ್ಲುಬೆಟ್ಟು(ಏನೆಕಲ್ಲು) ಚಿನ್ನದ ಪದಕ ಗಳಿಸಿರುತ್ತಾರೆ.ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೆಕಲ್ಲು ಸರಕಾರಿ...

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ನಡೆದ ಚೆಸ್ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಟ್ರಸ್ಟ್ ವತಿಯಿಂದ ನಡೆಯುವ ಕರಾಟೆ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಗುತ್ತಿಗಾರಿನ ಪ.ವರ್ಗದ ಸಭಾಭವನದಲ್ಲಿ ನಡೆಯಿತು. ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಧನಪತಿ, ಶ್ರೀಮತಿ ಪ್ರೀತಿ ನಿಶ್ಚಿತ್ ದೇವಶ್ಯ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇವರುಗಳ ಸಹಭಾಗಿತ್ವದಲ್ಲಿ ನಡೆದ ರಾಜ್ಯ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಚಾರಣ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಾಧವ ಬಿ.ಕೆ...

ಸುಳ್ಯ: ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ 25ನೇ ವರ್ಷದ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಸಮಾರೋಪ ಸಮಾರಂಭ ಮತ್ತು ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ.18ರಂದು ಅಪರಾಹ್ನ3ರಿಂದ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ...

All posts loaded
No more posts