ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹಿತೇಶ್ ಕುಂಚಡ್ಕ ಗೆ 611 ಅಂಕ

ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಹಿತೇಶ್ ಕುಂಚಡ್ಕ ಈ ಬಾರಿಯ ಎಸ್ . ಎಸ್.ಎಲ್.ಸಿ.ಪರೀಕ್ಷೆಯಲ್ಲಿ ( 611 ) ಶೇ .97.76 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ . ಈತ ಆಲೆಟ್ಟಿ ಗ್ರಾಮದ ಕುಂಚಡ್ಕ ಲೋಲಜಾಕ್ಷ ಕೆ.ಸಿ.ಮತ್ತು ಶ್ರೀಮತಿ ಪದ್ಮಾವತಿ ಕೆ ದಂಪತಿಗಳ ಪುತ್ರ .

ಮೊಟುಕಾನದಲ್ಲಿ ಕಾರಂಟೈನ್ ನಲ್ಲಿದ್ದ ಎಲ್ಲಾ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್

ಬೆಳ್ಳಾರೆ : ಪಾಸಿಟಿವ್ ಆಗಿದ್ದ ಮೊಟುಕಾನದ ಪತ್ರಕರ್ತರ ಪ್ರಾಥಮಿಕ ಸಂಪರ್ಕಿತರಾಗಿ ಕಾರಂಟೈನ್ ನಲ್ಲಿದ್ದ ಮನೆಯ ಎಲ್ಲರ ಪರೀಕ್ಷೆ ಇಂದು ನಡೆದಿದ್ದು ವರದಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.
Ad Widget

ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯರಾಗಿ ಸವಣೂರಿನ ದಿನೇಶ್ ಮೆದು

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯರಾಗಿ ಪುತ್ತೂರು ಎ ಪಿ ಎಂ ಸಿ ಅಧ್ಯಕ್ಷರಾದ ಸವಣೂರಿನ ದಿನೇಶ್ ಮೆದು ಆಯ್ಕೆಯಾಗಿದ್ದಾರೆ.

ಕಮಿಲ ರಸ್ತೆಗೆ ತಟ್ಟಿದ ಶಾಪ ವಿಮೋಚನೆಗೆ ಇನ್ನೆಷ್ಟೂ ವರ್ಷ ಕಾಯಬೇಕು ?

ಸುಳ್ಯ ತಾಲೂಕಿನ ಹಲವೆಡೇ ರಸ್ತೆ ಅಭಿವೃದ್ಧಿ ಕಂಡರೂ ಈ ಗುತ್ತಿಗಾರು ಬಳ್ಪ ರಸ್ತೆ ಮಾತ್ರ ಹದಗೆಟ್ಟು ಪ್ರಯಾಣಿಕರು ನರಳಾಡುವಂತೆ ಆಗಿದೆ. ಈ ರಸ್ತೆಯಲ್ಲೊಮ್ಮೆ ಪ್ರಯಾಣಿಸಿದ ಪ್ರತಿಯೊಬ್ಬನೂ ಶಾಪ ಹಾಕದೇ ಹೋದವರು ಇರಲಿಕ್ಕಿಲ್ಲ ಅಲ್ಲವೇ.? ಬಳ್ಪ ಕಮಿಲ ರಸ್ತೆಗೆ ಕೆಲವೆಡೆ ಅಭಿವೃದ್ಧಿ ಆದರೇ ಹಲವೆಡೆ ಸಂಪೂರ್ಣ ಹದಗೆಟ್ಟಿದ್ದು ದಶಕಗಳ ಹಿಂದೆ ಹಾಕಿದ ಡಾಮರ್ ಮಾಯವಾಗಿದೆ‌. ಇದರಿಂದ ಮಣ್ಣಿನ...

ಅಡುಗೆ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಬಾಕಿ ಇರುವ ಗೌರವ ಧನ ನೀಡುವಂತೆ ಆಗ್ರಹಿಸಿ ಎಸ್ಡಿಪಿಐ ತಹಶೀಲ್ದಾರ್ ಗೆ ಮನವಿ

ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರು ಹಾಗೂ ಅಡುಗೆ ಸಹಾಯಕಿಯರಿಗೆ ತಕ್ಷಣ ಐದು ತಿಂಗಳ ಗೌರವ ಧನ ನೀಡುವಂತೆ ಆಗ್ರಹಿಸಿ ಎಸ್ ಡಿ ಪಿ ಐ ಸುಳ್ಯ ವಿಧಾನ ಸಭಾ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯಾದ್ಯಂತ ಇರುವ 54 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಟ್ಟು 1.70...

ಎಂ ಬಿ ಪೌಂಢೇಶನ್ ಸಹಕಾರದೊಂದಿಗೆ ಸರಕಾರಿ ಶಾಲೆ ಮಕ್ಕಳಿಗೆ ಅನ್ಲೈನ್ ಶಿಕ್ಷಣ

ಸರಕಾರದ ನೂತನ ನೀತಿಯಂತೆ ಸರಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಒದಗಿಸಲು ಹೆತ್ತವರಿಗೆ ಸಾಧ್ಯವಾಗದೆ ಇದ್ದರೆ ಸಮುದಾಯ ಕೇಂದ್ರ ಗಳನ್ನು ಪ್ರಾರಂಭಿಸಿ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಚಟುವಟಿಕೆ ಯಲ್ಲಿ ತೊಡಗಿಸಿಗೊಳ್ಳುವಂತೆ ಮಾಡುವ ನೂತನ ಕಾರ್ಯಕ್ರಮ ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರಾರಂಭ ಗೊಂಡಿದೆ. ಇಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ ದಲ್ಲಿ ಈ ಕುರಿತು ಕಾರ್ಯಾಗಾರ...

ನಾಳೆ ಸುಳ್ಯದಲ್ಲಿ ಕರೆಂಟಿಲ್ಲ

ನಾಳೆ (ಆ.18 ) ಮಂಗಳವಾರ ದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಸುಬ್ರಹ್ಮಣ್ಯ ಫೀಡರುಗಳಲ್ಲಿ ಬೆಳಿಗ್ಗೆ 1೦ ರಿಂದ ಸಾಯಂಕಾಲ 6 ರ...

ಗೌಡ ಯುವ ಸೇವಾ ಸಂಘ ಹಾಗೂ ಶ್ರೀ ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ವತಿಯಿಂದ ಅನುಷ್ ಗೆ ಸನ್ಮಾನ

ಗೌಡ ಯುವ ಸೇವಾ ಸಂಘ ಹಾಗೂ ಶ್ರೀ ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ವತಿಯಿಂದ ಆ. 15 ರಂದು ಅಪರಾಹ್ನ ಘಂಟೆ 2ಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಬೋಜಪ್ಪ ಗೌಡ ಸಭಾಂಗಣದಲ್ಲಿ 10ನೇ ತರಗತಿ ಯ ಲ್ಲಿ ರಾಜ್ಯ ಕ್ಕೆ ಟಾಪರ್ ಆಗಿರುವ ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ರವರ ಪುತ್ರ ಅನುಷ್...

ದೇವರಕೊಲ್ಲಿ: ಸರಕಾರಿ ಬಸ್ ಪಲ್ಟಿ- ಪಾದಾಚಾರಿ ಮೃತ್ಯು

News Update - ದೇವರಕೊಲ್ಲಿ ಸಮೀಪ ಪುತ್ತೂರು ಡಿಪೋ ದ ಸರಕಾರಿ ಬಸ್ ಪಲ್ಟಿಯಾದ ಘಟನೆ ಇಂದು ನಡೆದಿದೆ. ದೇವರಕೊಲ್ಲಿಯಲ್ಲಿ ನಿನ್ನೆ ನಡೆದ ಬಸ್ ಅಪಘಾತದಲ್ಲಿ ಪಾದಾಚಾರಿ ಜಯನ್ ಎನ್ನುವವರು ಗಂಭೀರ ಗಾಯಗೊಂಡುಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆನ್ನಲಾಗಿದ್ದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಸ್ಸನ್ನು ರಾತ್ರಿಯೇ ತೆಗೆಯಲು...

ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಗೀಸರ್ ಇಂದು ಅಳವಡಿಕೆ -ಅಮರ ಸುದ್ದಿ ವರದಿಯ ಫಲಶ್ರುತಿ

ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿರುವ ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆ ಇಲ್ಲದೇ ಜ್ವರ ಭಾದಿತರು ಕೂಡ ತಣ್ಣೀರು ಸ್ನಾನ ಮಾಡುವ ಅನಿವಾರ್ಯತೆ ಎದುರಾಗಿತ್ತು. ಈ ಬಗ್ಗೆ ರೋಗಿಗಳು ಆಸ್ಪತ್ರೆಯ ವೈಧ್ಯಾಧಿಕಾರಿಗಳಿಗೆ, ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಕೋವಿಡ್ ವಿಭಾಗಕ್ಕೆ ಗೀಸರ್ ಅಳವಡಿಸಲು ಯಾರು ಇಲೆಕ್ಟ್ರೀಷಿಯನ್ ಗಳು ಬರುತ್ತಿಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡಿತ್ತು. ಒರ್ವ ಪೇಶೆಂಟ್...
Loading posts...

All posts loaded

No more posts

error: Content is protected !!