- Sunday
- May 3rd, 2026
ಕಳೆದ 30 ವರ್ಷಗಳಿಂದ ಗ್ರಾಹಕರ ವಿಶ್ವಾಸಗಳಿಸಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ಅಡ್ಕಾರ್ ಮಹೋತ್ಸವ ಹಾಗೂ ದೀಪಾವಳಿ ಧಮಾಕದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ಬಂಪರ್ ಡ್ರಾ ಮತ್ತು 6 ನೇ ವಾರದ ಡ್ರಾ ಅ. 30 ರಂದು ನಡೆಯಿತು. 6ನೇ ವಾರದ ಡ್ರಾದಲ್ಲಿ ಪ್ರಥಮ ಮೋಹನ್ ಕಜೆಮೂಲೆ (ಇಂಡಕ್ಷನ್ ಸ್ಟವ್), ದ್ವಿತೀಯ ಚಂದ್ರಕಲಾ...
ಕಳಂಜ ಗ್ರಾಮದ ಬೇರಿಕೆ ಶ್ರೀಮತಿ ದಮಯಂತಿ ಮತ್ತು ಶ್ರೀ ಲಕ್ಷ್ಮಣ ಗೌಡ ರವರ ಪುತ್ರ ಚಿ|ರಾ|ರಂಜಿತ್ ಬಿ ಎಲ್ ರವರ ವಿವಾಹವು ಮುರುಳ್ಯ ಗ್ರಾಮದ ಕೊಡ್ಡೋಳು (ಅಬೀರ) ಶ್ರೀಮತಿ ದಮಯಂತಿ ಮತ್ತು ಶ್ರೀ ಶೀನಪ್ಪ ಗೌಡ ರವರ ಪುತ್ರಿ ಚಿ|ಸೌ|ಗೀತಾ ಎ ರವರೊಂದಿಗೆ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಅ.30ರಂದು ಜರುಗಿತು.
ಸಕಲೇಶಪುರ ತಾಲೂಕಿನ ವನಂಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮದುವೆಗೆಂದು ಹೊರಟಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಇಂದು(ಅ.30) ಬೆಳಿಗ್ಗೆ ನಡೆದಿದ್ದು, ಒಟ್ಟು ಸುಮಾರು 30 ಮಂದಿ ವ್ಯಾನ್ ನಲ್ಲಿ ಇದ್ದು, 20 ಮಂದಿ ಗಾಯಗೊಂಡಿದ್ದು, ಅದರಲ್ಲಿ 07 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು,...
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ಪಡ್ಪು ಆಯ್ಕೆ ಆಗಿದ್ದಾರೆ ಎಂದು ತಿಳಿದುಬಂದಿದೆ.ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ರವರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಮಿತಿಯ ಸದಸ್ಯರಾದ ಬೆಳ್ಯಪ್ಪ ಖಂಡಿಗೆ ರವರು ಜಗದೀಶ್ ರವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿ ಗುಣವರ್ಧನ ಕೆದಿಲ...
ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದ ಸಭಾಭವನದಲ್ಲಿ ಮದುವೆಗೆ ಆಗಮಿಸುತ್ತಿದ್ದ ವಾಹನವೊಂದು ಬಿಸಿಲೆ ತಿರುವಿನಲ್ಲಿ ಮಗುಚಿ ಬಿದ್ದು ವಾಹನದಲ್ಲಿದ್ದವರಿಗೆ ಗಂಭೀರ ಗಾಯಗಳಾದ ಘಟನೆ ವರದಿಯಾಗಿದೆ.ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಕೂಡುರಸ್ತೆ ವನಗೂರಿನ ವರ ಹಾಗೂ ಏನೆಕಲ್ಲಿನ ವಧುವಿನ ಮದುವೆ ಕಾರ್ಯಕ್ರಮ ಇಂದು ನಡೆಯಬೇಕಿದ್ದು, ಈ ಮದುವೆಗೆ ಹುಡುಗನ ಕಡೆಯವರು ವ್ಯಾನ್ ನಲ್ಲಿ ಬರುತ್ತಿದ್ದರು ಎನ್ನಲಾಗಿದ್ದು, ವಧು-ವರ ಇಬ್ಬರೂ...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಒಳಾಂಗಣದ 4 ಸುತ್ತು ಮೇಲ್ಚಾವಣಿ ಮಾಡಲು ಇಂದು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ದೇವರ ಅನುಗ್ರಹ ಪಡೆದು ಮುಹೂರ್ತ ಮಾಡಲಾಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಪಲ್ಲತಡ್ಕ, ಧರ್ಮಪಾಲ ಗೌಡ ಮರಕ್ಕಡ, ಧರ್ಮಣ್ಣ ನಾಯ್ಕ್ಕ...
ಪಂಜ ಕರಿಕಳ ಸಮೀಪದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಸಾಮೂಹಿಕ ಶ್ರೀ ಮಹಾವಿಷ್ಣು ಮಹಾಯಾಗವು ನವೆಂಬರ್ 05 ಬುಧವಾರದಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರಾಧ್ಯಕ್ಷ ಚಿತ್ರ ಕುಮಾರ್ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಅಧ್ಯಕ್ಷ ವೆಂಕಟೇಶ್...
ಸುಬ್ರಹ್ಮಣ್ಯ ಅಕ್ಟೋಬರ್ 30 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲಿಜನ್ ನ ನಿಕಟ ಪೂರ್ವ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು ಅವರಿಗೆ ನಿಕಟ ಪೂರ್ವ ರಾಷ್ಟ್ರಾಧ್ಯಕ್ಷ ಚಿತ್ರ ಕುಮಾರ್ ಅವರು ಸುಬ್ರಹ್ಮಣ್ಯದಲ್ಲಿ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಿದರು. ಡಾ.ರವಿ ಕಕ್ಕೆಪದವು ಅವರು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಡವರಿಗೆ...
ಇಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಶಮುಕ್ತ ಅಭಿಯಾನದ ಪ್ರತಿಜ್ಞಾವಿಧಿ ಕಾರ್ಯಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿನ ಮುಖ್ಯೋಪಾಧ್ಯಾಯರಾದ ಸಂಕೀರ್ಣ,ಶಾಲಾ ಶಿಕ್ಷಕ ವೃಂದ, ಮಡಪ್ಪಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪುಟ್ಟಣ್ಣ, ನೆಲ್ಲೂರು ಕೇಮ್ರಾಜೆ ಗ್ರಾಮೀಣ ಪುನರ್ವರ್ಸತಿ ಕಾರ್ಯಕರ್ತರಾದ ಕುಸುಮಾವತಿ ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಸಂತೋಷ್ ಮುಂಡಕಜೆ, ಗ್ರಾಮೀಣ ಪುನರ್ವಸತಿ...
ನಶಮುಕ್ತ ಭಾರತ ಅಭಿಯಾನದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಅ29 ರಂದು ನಡೆಯಿತು. ಹಿರಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪುಟ್ಟಣ್ಣ ವಲಿಕಜೆ ನಶಾಮುಕ್ತ ಭಾರತ ನಿರ್ಮಾಣಕ್ಕೆ ಪ್ರೌಢ ಮಕ್ಕಳ ಪಾತ್ರದ ಬಗ್ಗೆ ಮಾತನಾಡಿದರು.ವಿಕಲಚೇತನ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ದಿನೇಶ್ ದೇವಚಳ್ಳ, ಕುಸುಮಾವತಿ ನೆಲ್ಲೂರು ಕೆಮ್ರಾಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಉಬರಡ್ಕ, ಸಹಶಿಕ್ಷಕ...
Loading posts...
All posts loaded
No more posts
